ಬೆಳಗಾವಿ : ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಚನ್ನಮ್ಮ ವೃತ್ತದಲ್ಲಿ ವಿಭಿನ್ನ ಪ್ರತಿಭಟನೆ ನಡೆಯಿತು.
ಒಂಟೆ ಏರಿ ಬಂದ ಅಭಿಮಾನಿಗಳು ವೃತ್ತದಲ್ಲಿ ಒಂದಿಷ್ಟು ಹೊತ್ತು ರೌಂಡ್ಸ್ ಹೊಡೆದು ಸಾಹುಕಾರನಿಗೆ ಸಚಿವ ಸ್ಥಾನ ಕೊಡಿ ಎಂದು ಆಗ್ರಹಿಸಿದರು.
10 ಒಂಟೆಗಳ ಮೇಲೆ ಏರಿ ಬಂದ ಜಾರಕಿಹೊಳಿ ಅಭಿಮಾನಿಗಳು
ನಮ್ಮ ನಾಯಕನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ. ಅವರ ಹೆಸರಿಗೆ ಮಸಿ ಬಳಿಯಲಾಗುತ್ತಿದೆ. ಕೆಲವರ ಕುತಂತ್ರದಿಂದ ಆಗಬಾರದ ಘಟನೆಗಳು ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿ ಪಣ ತೊಟ್ಟಿರುವ ಜಾರಕಿಹಹೊಳಿ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಇದೇ ವೇಳೆ ಅಭಿಮಾನಿಗಳು ಒತ್ತಾಯಿಸಿದರು. ಬೆಂಬಲಿಗರು ಕೇವಲ ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿಲ್ಲ ಬದಲಾಗಿ ಜಲಸಂಪನ್ಮೂಲ ಖಾತೆಯನ್ನೇ ಕೊಡಿ ಎಂದು ಆಗ್ರಹಿಸಿದ್ದಾರೆ.
ಪಾಪ ಈ ಅಭಿಮಾನಿಗಳನ್ನು ಯಾರು ಕಳುಹಿಸಿಕೊಟ್ಟರೋ ಗೊತ್ತಿಲ್ಲ. ಈಗಾಗಲೇ ಮಂಚದಾಟವಾಡಿದ ಕರ್ಮಕ್ಕೆ ಸಚಿವ ಸ್ಥಾನವನ್ನು ಕಳೆದುಕೊಂಡಿರುವ ಜಾರಕಿಹೊಳಿ ಮೇಲೆ ಅತ್ಯಾಚಾರದ ಆರೋಪವಿದೆ. ಈ ಆರೋಪ ಮುಕ್ತರಾಗದ ಹೊರತು ಸಚಿವ ಸ್ಥಾನ ಕೊಟ್ಟರೆ ಹೇಗೆ.
ಅಂದ ಹಾಗೇ ಈ ಪ್ರತಿಭಟನೆ ದಲಿತ ಕ್ರಾಂತಿ ಸಂಘಟನೆ ಮತ್ತು ಘಟ ಪ್ರಭಾ ಅಭಿಮಾನಿಗಳ ಬಳಗದಿಂದ ನಡೆಯಿತು.
Discussion about this post