ಬೆಂಗಳೂರು : ಕೊರೋನಾ ಸೋಂಕಿನ ವಿರುದ್ಧದ ಸಮರದಲ್ಲಿ ಕರ್ನಾಟಕ ಗೆದ್ದು ಬಿಡ್ತು ಎಂದು ಬೀಗುವ ಹೊತ್ತಿನಲ್ಲಿ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ.
ಬೆಂಗಳೂರಿನಲ್ಲೇ ಅತೀ ಹೆಚ್ಚು ರೂಪಾಂತರಿ ವೈರಸ್ ಗಳು ಪತ್ತೆಯಾದ ಬೆನ್ನಲ್ಲೇ, ಕೊರೋನಾ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ.
ಒಂದು ಸಮಯದಲ್ಲಿ ಕೇರಳ ಕೂಡಾ ಕೊರೋನಾ ಸೋಂಕಿನ ಸಮರದಲ್ಲಿ ಗೆದ್ದು ಬಿಟ್ಟೆವು ಎಂದು ಸಂಭ್ರಮಿಸಿತ್ತು.
ಅದೇ ಪರಿಸ್ಥಿತಿ ಕರ್ನಾಟಕಕ್ಕೆ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಏರಲಾರಂಭಿಸಿತ್ತು, ಜನ ಎಚ್ಚೆತ್ತುಕೊಳ್ಳದಿದ್ರೆ ಮತ್ತೊಂದು ಲಾಕ್ ಡೌನ್ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ.
ಶುಕ್ರವಾರ 677 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಇದರಲ್ಲಿ 444 ಮಂದಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 953813ಕ್ಕೆ ಏರಿದೆ.
ಶುಕ್ರವಾರ ನಾಲ್ವರು ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 12354ಕ್ಕೆ ಏರಿದೆ.
ಇನ್ನು ಶುಕ್ರವಾರ 427 ಮಂದಿ ಸೋಂಕಿತರು ಕೊರೋನಾ ಗೆದ್ದು ಮನೆಗೆ ಮರಳಿದ್ದಾರೆ. ಹೀಗಾಗಿ ಕೊರೋನಾ ಗೆದ್ದವರ ಸಂಖ್ಯೆ 935066ಕ್ಕೆ ಏರಿದೆ.
ಪ್ರಸ್ತುತ ರಾಜ್ಯದಲ್ಲಿ 6374 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 112 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Discussion about this post