ನವದೆಹಲಿ : ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯ ಲೆಕ್ಕದಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಸುಳ್ಳು ಹೇಳುತ್ತಿವೆ ಅನ್ನುವ ದೂರು ಸಾಕಷ್ಟು ಸಲ ಕೇಳಿ ಬಂದಿದೆ. ಈಗ್ಲೂ ಕೇಳಿ ಬರ್ತಾ ಇದೆ. ಇದೀಗ ಭಾರತವೂ ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳಿತೇ ಅನ್ನುವ ಅನುಮಾನ ಶುರುವಾಗಿದೆ.
ಹಾಗಂತ ಅನುಮಾನ ಸುಳ್ಳಲ್ಲ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಡೆತ್ ಆಡಿಟ್ ಆಗಬೇಕಾಗಿದ್ದು, ಸಾವಿನ ಸಂಖ್ಯೆಯ ಲೆಕ್ಕದಲ್ಲಿ ತುಂಬಾ ವ್ಯತ್ಯಾಸಗಳಿದೆ ಅನ್ನುವುದು ತುಂಬಾ ಹಳೆಯ ಆರೋಪ. ಆದರೆ ಕೇಂದ್ರ ಸರ್ಕಾರವಾಗ್ಲಿ, ರಾಜ್ಯ ಸರ್ಕಾರವಾಗ್ಲಿ ಡೆತ್ ಅಡಿಟ್ ಮಾಡಲು ಸಿದ್ದವಿಲ್ಲ. ಹೀಗಾಗಿ ಭಾರತದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4 ಲಕ್ಷ ಎನ್ನಲಾಗಿದೆ. ಇದು ಸರ್ಕಾರದ ಲೆಕ್ಕ.
ಆದರೆ ಇದೀಗ ಭಾರತದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4 ಲಕ್ಷವಲ್ಲ 49 ಲಕ್ಷ ಅನ್ನುವ ಆತಂಕಕಾರಿ ಅನ್ನುವ ಅಂಶ ಬೆಳಕಿಗೆ ಬಂದಿದೆ. ವಾಷಿಂಗ್ಟನ್ ಮೂಲಕ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ ಮೆಂಟ್ ಸಂಸ್ಥೆ ಇಂತಹುದೊಂದು ವರದಿಯನ್ನು ಕೊಟ್ಟಿದ್ದು, ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.
ಭಾರತದಲ್ಲಿ ಮೊದಲ ಅಲೆ ಭೀಕರವಾಗಿತ್ತು, ಆದರೆ ಮರಣ ಪ್ರಮಾಣ ಕಡಿಮೆ ಇತ್ತು. ಹಾಗಿದ್ದರೂ ಮೊದಲ ಅಲೆಯಲ್ಲಿ 20 ಲಕ್ಷ ಜನ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಂ, ಹಾರ್ವಡ್ ವಿವಿಯ ಅಭಿಷೇಕ್ ಆನಂದ್ ಹಾಗೂ ಜಾಗತಿಕ ಅಭಿವೃದ್ಧಿ ಕೇಂದ್ರದ ನ್ಯಾಯಮೂರ್ತಿ ಸೆಂಡ್ ಫೋರ್ಡ್ ಸಿದ್ದಪಡಿಸಿರುವ ವರದಿಯನ್ನು ಮೂರು ರೀತಿಯ ಸಮೀಕ್ಷೆ ಆಧರಿಸಿ ತಯಾರಿಸಲಾಗಿದೆ.
1) BASED ON HOUSEHOLD SURVEY DATA
Centre for Monitoring Indian Economy (CMIE ) ಪ್ರತೀ ನಾಲ್ಕು ತಿಂಗಳಿಗೊಮ್ಮೆ ಈ ಸಮೀಕ್ಷೆಯನ್ನು ನಡೆಸುತ್ತದೆ. ನಾಗರಿಕರ ಪಿರಮಿಡ್ ಮನೆ ಸಮೀಕ್ಷೆ ಎಂದು ಇದನ್ನು ಕರೆಯಲಾಗುತ್ತದೆ. ಈ ಸಮೀಕ್ಷೆಯಲ್ಲಿ ಅಂದಾಜು 8 ಲಕ್ಷ ಮಂದಿಯನ್ನು ಸಂದರ್ಶಿಸಲಾಗುತ್ತದೆ.
2) CIVIL REGISTRATION OF DEATHS
ಈ ವರದಿಗೆ ಮತ್ತೊಂದು ಆಧಾರ, ಸಾವಿನ ನೋಂದಣಿ. ಕೇವಲ 7 ರಾಜ್ಯಗಳ ಡೇಟಾವನ್ನು ಮಾತ್ರ ಪ್ರಸ್ತುತ ವರದಿಗೆ ಬಳಸಲಾಗಿದೆ. ಎಲ್ಲಾ ರಾಜ್ಯಗಳ ಡೇಟಾ ತೆಗೆದುಕೊಂಡರೆ ಸಾವಿನ ಸಂಖ್ಯೆ 49 ಲಕ್ಷ ದಾಟುವ ಸಾಧ್ಯತೆಗಳಿದೆ.
3) ESTIMATES BASED ON SERO-PREVALENCE SURVEY
ಮೂರನೇಯದ್ದು ಸಿರೋ ಸಮೀಕ್ಷೆ. ಇದರಲ್ಲಿ 40 ಲಕ್ಷ ಸಾವನ್ನು ಅಂದಾಜಿಸಲಾಗಿದೆ. ಕೇವಲ ಸಿರೋ ಸಮೀಕ್ಷೆ ಒಂದರಲ್ಲೇ ಮೊದಲ ಅಲೆಯಲ್ಲಿ 15 ಲಕ್ಷ ಹಾಗೂ ಎರಡನೇ ಅಲೆಯಲ್ಲಿ 24 ಲಕ್ಷ ಸಾವು ಸಂಭವಿಸಿದೆ ಎನ್ನಲಾಗಿದೆ.
ಈ ವರದಿಯನ್ನು ಗಮನಿಸಿದ ಮೇಲೆ, ಕೊರೋನಾ ಸಾವಿನ ಸಂಖ್ಯೆಯಲ್ಲಿ ಸರ್ಕಾರ ಆಟವಾಡಿದೆಯೇ ಅನ್ನುವ ಅನುಮಾನ ಶುರುವಾಗಿದೆ. ಅನುಮಾನ ಹುಟ್ಟುವುದರಲ್ಲೇ ತಪ್ಪೇ ಇಲ್ಲ ಬಿಡಿ. ಎರಡನೆ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಸಿಗದೆ ಅದೆಷ್ಟು ಮಂದಿ ಸತ್ತರು ಅನ್ನುವುದು ಎಲ್ಲರಿಗೂ ಗೊತ್ತಿದೆ. ಚಾಮರಾಜನಗರದಲ್ಲಿ ನಡೆದ ಘಟನೆ ಅದಕ್ಕೆ ಸಾಕ್ಷಿ. ಆದರೆ ಕೇಂದ್ರ ಸರ್ಕಾರ ಆಕ್ಸಿಜನ್ ಕೊರತೆಯಿಂದ ಜನ ಸತ್ತೇ ಇಲ್ಲ ಅಂದಿತ್ತು.
Discussion about this post