ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತಗ್ಗಿತು ಅನ್ನುವ ಹೊತ್ತಿಗೆ ಮತ್ತೆ ಸೋಂಕು ಅಬ್ಬರಿಸಲಾರಂಭಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ರೆ ಮುಂದಿನ ದಿನದಲ್ಲಿ ಕರ್ನಾಟಕ ಕೇರಳವನ್ನು ಮೀರಿಸಲಿದೆ.
ಇಂದು ರಾಜ್ಯದಲ್ಲಿ 1875 ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗಿಂತ ದಕ್ಷಿಣ ಕನ್ನಡದಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ 25 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 409 ಮಂದಿಗೆ ಸೋಂಕು ತಗುಲಿದ್ರೆ, ದಕ್ಷಿಣ ಕನ್ನಡದಲ್ಲಿ 410 ಮಂದಿಗೆ ಸೋಂಕು ತಗುಲಿದೆ.
ಇನ್ನುಳಿದಂತೆ ಹಾಸನದಲ್ಲಿ 108, ಮೈಸೂರು 146, ಉಡುಪಿ 162 ಹಾಗೂ ಕೊಡಗಿನಲ್ಲಿ 83 ಪ್ರಕರಣ ಸೇರಿ ಉಳಿದ ಜಿಲ್ಲೆಗಳಲ್ಲಿ ಎರಡಂಕಿಯ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಪ್ರಸ್ತುತ ಕೇರಳದಲ್ಲಿ ಅಬ್ಬರಿಸುತ್ತಿರುವ ಕೊರೋನಾ ಸೋಂಕು ಕರ್ನಾಟಕದ ಗಡಿ ಭಾಗಕ್ಕೆ ತಲೆನೋವಾಗಿ ಪರಿಣಮಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಕೇವಲ ಗಡಿಯಲ್ಲಿ ಕಟ್ಟು ನಿಟ್ಟಿನ ತಪಾಸಣೆಗೆ ಆದೇಶಿಸಿದೆ ಬಿಟ್ರೆ, ಸೋಂಕು ನಿಯಂತ್ರಣಕ್ಕೆ ಮತ್ಯಾವುದೇ ಕ್ರಮಗಳನ್ನು ಘೋಷಿಸಿಲ್ಲ.
Discussion about this post