ಯಕ್ಷಗಾನಕ್ಕೆ ಅವಮಾನ ಎಸಗಿದ್ದ ಝೀ ಕನ್ನಡ ವಾಹಿನಿ ತಪ್ಪಾಯ್ತು (Zee Kannada Sorry) ಕ್ಷಮಿಸಿ ಅಂದಿದೆ. ಈ ಮೂಲಕ ವಸಂತ ಗಿಳಿಯಾರ್ ನೇತೃತ್ವದ ಹೋರಾಟಕ್ಕೆ ಜಯ ಸಿಕ್ಕಿದೆ. Boycott Zee Kannada ಹೋರಾಟ ಯಶಸ್ವಿಯಾಗಿದೆ.
ಉಡುಪಿ : ಝೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರವಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance ) ಕಾರ್ಯಕ್ರಮದಲ್ಲಿ ಕರಾವಳಿಯ ಆರಾಧನ ಕಲೆ ಯಕ್ಷಗಾನಕ್ಕೆ ( Yakshagana) ಅವಮಾನ ಎಸಗಲಾಗಿದೆ. ಈ ಮೂಲಕ ಯಕ್ಷ ಪ್ರೇಮಿಗಳ ಭಾವನೆಗೆ ಧಕ್ಕೆ ತರಲಾಗಿತ್ತು.( Zee Kannada Sorry)
ವೇದಿಕೆಯಲ್ಲೇ ಯಕ್ಷಗಾನಕ್ಕೆ ಅವಮಾನವಾಗುತ್ತಿದ್ರು ತೀರ್ಪುಗಾರರ ಸ್ಥಾನದಲ್ಲಿ ಕೂತಿದ್ದ ರಕ್ಷಿತಾ, ಅರ್ಜುನ್ ಜನ್ಯ, ನಿರೂಪಕಿ ಅನುಶ್ರೀ ಪ್ರದರ್ಶನವನ್ನು ಹೊಗಳಿದ್ದು ಬಿಟ್ರೆ ಕರಾವಳಿಗರ ಭಾವನೆಯನ್ನು ಅರ್ಥ ಮಾಡಿಕೊಂಡಿರಲಿಲ್ಲ.
ಇದನ್ನೂ ಓದಿ : Zee Kannada : ಯಕ್ಷಗಾನಕ್ಕೆ ಅವಮಾನ : ಝೀ ಕನ್ನಡ ವಿರುದ್ಧ ಸಿಡಿದೆದ್ದ ಕರಾವಳಿ
ಇದರಿಂದ ಅಸಮಾಧಾನಗೊಂಡ ಪತ್ರಕರ್ತ ವಸಂತ ಗಿಳಿಯಾರ್ ( Vasanth Giliyar ) ಹೋರಾಟಕ್ಕೆ ಮುಂದಾದ್ರು, ಝೀ ಕನ್ನಡ ( Zee Kannada ) ಯಕ್ಷಗಾನಕ್ಕೆ ಅವಮಾನ ಎಸಗುತ್ತಿರುವುದು ಮೊದಲೇನಲ್ಲ, ಮೂರನೇ ಸಲ ಹೀಗೆ ಮಾಡುತ್ತಿದೆ ಎಂದು ಹೋರಾಟಕ್ಕೆ ಮುಂದಾದ್ರು. ಗಿಳಿಯಾರ್ ಹೋರಾಟಕ್ಕೆ ಕರ್ನಾಟಕದ ಯಕ್ಷ ಪ್ರೇಮಿಗಳು ಕೈ ಜೋಡಿಸಿದ್ರು.
ಈ ವೇಳೆ ಸಾಮಾಜಿಕ ಜಾಲತಾಣ ಖಾತೆಯಲ್ಲೊಂದು ಪೋಸ್ಟರ್ ಹಂಚಿಕೊಂಡ ಝೀ ಕನ್ನಡ (Zee Kannada ) ಭಾವನೆಗೆ ಧಕ್ಕೆಯಾದ್ರೆ ವಿಷಾಧ ಅಂದಿತ್ತು. ಆದರೆ ಹಿಂದೆಯೂ ಹೀಗೆ ಕ್ಷಮೆ ಕೇಳಿ ಮತ್ತೆ ಮಾಡಿದ್ದು ಅವಮಾನ ಹೀಗಾಗಿ ವೇದಿಕೆಯಲ್ಲೇ ಕ್ಷಮೆ ಬೇಕು ಎಂದು ಆಗ್ರಹಿಸಿದರು. ಆದರೆ ಝೀ ವಾಹಿನಿ ಅದಕ್ಕೆ ಸೊಪ್ಪು ಹಾಕಲಿಲ್ಲ.
![zee kannada sorry](https://torrentspree.com/wp-content/uploads/2022/07/zee1.jpg)
ಹೀಗಾಗಿ ಹೋರಾಟವನ್ನು ಬೆಂಗಳೂರಿಗೆ (Bengaluru) ತೆಗೆದುಕೊಂಡ ಹೋರಾಟಗಾರರು, ಝೀ ವಾಹಿನಿಯ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸಿದರು. ಕರವೇಯ ಪ್ರವೀಣ್ ಶೆಟ್ಟಿ ಸೇರಿದಂತೆ ಅನೇಕರು ಈ ವೇಳೆ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆಯಲ್ಲೇ ಕ್ಷಮೆ ಕೇಳಿದ್ರೆ ಸರಿ, ತಪ್ಪಾದ ಜಾಗದಲ್ಲೇ ಕ್ಷಮೆ ಕೇಳದಿದ್ರೆ ಮುಂದಿನ ಅನಾಹುತಗಳಿಗೆ ನಾವು ಕಾರಣರಲ್ಲ, ಕಾನೂನಾತ್ಮಕವಾಗಿಯೇ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಇದೀಗ ಹೋರಾಟಕ್ಕೆ ಮಣಿದಿರುವ ವಾಹಿನಿ ಯಕ್ಷಗಾನ ಪ್ರೇಮಿಗಳ ಕ್ಷಮೆ ಕೇಳಿದ್ದು, ಕರಾವಳಿಯ ಮುಂದೆ ಮಂಡಿಯೂರಿದೆ. ಈ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
Discussion about this post