Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕಿಲ್ಲರ್ ಗಂಡ : ದುಬೈ ನಲ್ಲೇ ಕೂತು ಪತ್ನಿ ಕೊಂದವನು ಅಂದರ್ ಆಗಿದ್ದು ಹೇಗೆ…?

Radhakrishna Anegundi by Radhakrishna Anegundi
July 21, 2021
in ದಕ್ಷಿಣ ಕನ್ನಡ, ಕ್ರೈಮ್
murder3
Share on FacebookShare on TwitterWhatsAppTelegram

ಉಡುಪಿ : ಜಿಲ್ಲೆಯ ಬ್ರಹ್ಮಾವರದ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ಜುಲೈ 12 ರಂದು ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣ ಜಿಲ್ಲಾ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಅದ್ಯಾವ ದಿಕ್ಕಿನಿಂದ ನೋಡಿದರೂ ಕೊಲೆಗೆ ಕಾರಣವೇ ಸಿಗುತ್ತಿರಲಿಲ್ಲ. ಹಾಗಂತ ದಕ್ಷ ಪೊಲೀಸರಿದ್ದ ಸಂದರ್ಭದಲ್ಲಿ ಅದ್ಯಾವ ಪ್ರಕರಣಗಳು ದಿಕ್ಕು ತಪ್ಪುವುದಿಲ್ಲ. ಅದೇ ರೀತಿ ವಿಶಾಲ ಗಾಣಿಗ ಕೊಲೆ ಪ್ರಕರಣ ಕೂಡಾ.

ಇದೀಗ ವಿಶಾಲ ಗಾಣಿಗ ಪತಿ, ರಾಮಕೃಷ್ಣ ಗಾಣಿಗನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿ, 4 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಜೊತೆಗೆ ಉತ್ತರ ಪ್ರದೇಶದ ಮೂಲದ ಬಾಡಿಗೆ ಹಂತಕನೊಬ್ಬನನ್ನು ಬಂಧಿಸಿದ್ದಾರೆ.

ಹಾಗಾದ್ರೆ ದುಬೈ ನಲ್ಲಿ ಕೂತು, ಉಡುಪಿಯಲ್ಲಿ ಪತ್ನಿಯನ್ನು ಹೇಗೆ ಮುಗಿಸಿದ, ಇದಕ್ಕೆ ಕಾರಣ ಏನು ಅನ್ನುವುದೇ ಎಲ್ಲರ ಪ್ರಶ್ನೆಯಾಗಿದೆ. ಕೊಲೆಗೆ ನಿಖರ ಕಾರಣ ಏನು ಅನ್ನುವುದು ಇನ್ನೂ ಗೊತ್ತಾಗಿಲ್ಲ. ಇಂದು ಉಡುಪಿ ಪೊಲೀಸರು ಈ ಬಗ್ಗೆ ಮಾಹಿತಿ ಕೊಡುವ ನಿರೀಕ್ಷೆಗಳಿದೆ.

ಯಾವಾಗ ಜುಲೈ 12 ರಂದು ಕೊಲೆ ಪ್ರಕರಣ ಬೆಳಕಿಗೆ ಬಂತೋ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೇ ತನಿಖೆಯ ಉಸ್ತುವಾರಿ ವಹಿಸಿಕೊಂಡರು. ಆರು ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದರು. ಈ ವೇಳೆ ಹತ್ತು ಹಲವು ಅಂಶಗಳು ಕೂಡಾ ಬೆಳಕಿಗೆ ಬಂದಿದೆ.

ganiga

ವಿಶಾಲ ಗಾಣಿಗ ಹಾಗೂ ರಾಮಕೃಷ್ಣ ಗಾಣಿಗ ಮಗಳ ಜೊತೆಗೆ ದುಬೈ ನಲ್ಲಿ ವಾಸವಿದ್ದರು. ಊರಿಗೆ ಬಂದಾಗ ವಾಸ್ತವ್ಯ ಹೂಡಲೆಂದು 2019ರಲ್ಲೇ ಫ್ಲಾಟ್ ಒಂದನ್ನು ಖರೀದಿಸಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಊರಿಗೆ ಪತ್ನಿ ಮಗಳ ಜೊತೆ ಊರಿಗೆ ಆಗಮಿಸಿದ್ದ ರಾಮಕೃಷ್ಣ ತನ್ನ ಪಿತ್ರಾರ್ಜಿತ ಆಸ್ತಿಯ ಪವರ್ ಆಫ್ ಆಟಾರ್ನಿಯನ್ನು ವಿಶಾಲ ಅವರ ತಂದೆಗೆ ಕೊಟ್ಟು ದುಬೈಗೆ ಸಂಸಾರ ಸಮೇತ ಮರಳಿದ್ದರು.

ಇದಾದ ಬಳಿಕ  ಇದೇ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 2 ರಂದು ದುಬೈ ನಿಂದ ಮಗಳ ಜೊತೆ ಬಂದಿದ್ದ ವಿಶಾಲ ಗಾಣಿಗ ಆಸ್ತಿಯ ಕೆಲಸಗಳನ್ನು ಮುಗಿಸಿದ್ದರು. ಗುಜ್ಜಾಡಿಯ ತವರು ಮನೆಯಲ್ಲೇ ವಾಸ್ತವ್ಯ ಹೂಡಿದ್ದ ವಿಶಾಲ ಅವರು ಜುಲೈ 12 ರಂದು ತುರ್ತಾಗಿ ಫ್ಲಾಟ್ ಗೆ ತೆರಳಿದ್ದರು.

m1

ಸಂಜೆಯಾದರೂ ಮಗಳು ಬಾರದಿರುವುದನ್ನು ಗಮನಿಸಿದ ಪೋಷಕರು ಹುಡುಕಿಕೊಂಡು ಪ್ಲ್ಯಾಟ್ ಬಂದಿದ್ದಾರೆ. ಈ ವೇಳೆ ವಿಶಾಲ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ಬಳಿಕ ಪೊಲೀಸರು ತನಿಖೆಗೆ ಕೈಗೆತ್ತಿಕೊಂಡಾಗ, ಅದ್ಯಾಕೆ ತುರ್ತಾಗಿ ಅವರು ಪ್ಲ್ಯಾಟ್ ಗೆ ದೌಡಾಯಿಸಿದ್ದಾರೆ ಅನ್ನುವುದೇ ಯಕ್ಷ ಪ್ರಶ್ನೆಯಾಗಿತ್ತು. ಹೀಗಾಗಿ ಗೊತ್ತಿರುವವರ ಕೈವಾಡ ಸ್ಪಷ್ಟವಾಗಿತ್ತು. ಜೊತೆಗೆ ವಿಶಾಲ ಅವರು ಓಡಾಡಿದ ಆಟೋ ಡ್ರೈವರ್ ನನ್ನು ವಿಚಾರಿಸಿದಾಗ ಗಂಡನ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದರು ಅನ್ನುವುದು ಗೊತ್ತಾಗಿದೆ. ಹೀಗಾಗಿ ಮೊಬೈಲ್ ಕರೆಗಳ ಬೆನ್ನು ಹತ್ತಿದಾಗ ಗಂಡನ ಮೇಲೆಯೇ ಅನುಮಾನ ಹುಟ್ಟಿಸುವ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿದೆ.

ಇದಾದ ಬಳಿಕ ರಾಮಕೃಷ್ಣ ಅವರ ಮೊಬೈಲ್ ಜಾಡು ಹಿಡಿದಾಗ, ಅಪರಿಚಿತರ ನಂಬರ್ ಗಳಿಗೆ ಕರೆ ಹೋಗಿರುವುದು ಗೊತ್ತಾಗಿದೆ. ಅವೆಲ್ಲವೂ ಉತ್ತರ ಪ್ರದೇಶದ ಕ್ರಿಮಿನಲ್ ಗಳ ನಂಬರ್ ಗಳಾಗಿತ್ತು. ಹೀಗಾಗಿ ರಾಮಕೃಷ್ಣನನ್ನು ಕರೆ ತಂದು ಪೊಲೀಸರ ಶೈಲಿಯಲ್ಲೇ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

m2

ಮಾಹಿತಿಗಳ ಪ್ರಕಾರ ಕಳೆದ ಮಾರ್ಚ್ ನಿಂದಲೇ ಕೊಲೆಗೆ ಸಿದ್ದತೆ ನಡೆಸಲಾಗಿತ್ತು. ಮಾರ್ಚ್ ತಿಂಗಳಲ್ಲೇ ತನ್ನ ಸ್ನೇಹಿತರೆಂದು ರಾಮಕೃಷ್ಣ ಸುಪಾರಿ ಕಿಲ್ಲರ್ ಗಳನ್ನು ಪತ್ನಿಗೆ ಪರಿಚಯಿಸಿದ್ದ. ಜುಲೈ 12 ರಂದು ಅದ್ಯಾವುದೋ ನೆಪ ಹೇಳಿ ಪತ್ನಿಯನ್ನು ಪ್ಲ್ಯಾಟ್ ಗೆ ಕರೆಸಿಕೊಂಡು, ಸುಪಾರಿ ಕಿಲ್ಲರ್ ಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ಪರಿಚಿತರೇ ಬಂದಿರುವ ಕಾರಣ ವಿಶಾಲ ಅವರು ಬಾಗಿಲು ತೆರೆದಿರುವ ಸಾಧ್ಯತೆಗಳಿದ್ದು , ಈ ವೇಳೆ ಕೊಲೆ ನಡೆದಿದೆಯಂತೆ.

Tags: Udupi
Share1TweetSendShare

Discussion about this post

Related News

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

honey-trap-gang-busted-in-bluru-woman-arrested

Honey trap : ಮಂಚದಾಟಕ್ಕೆ ಮನೆಗೆ ಆಹ್ವಾನ : ಹನಿಟ್ರ್ಯಾಪ್’ಗೆ ಪ್ರಿಯತಮೆಯನ್ನೇ ಬಿಟ್ಟಿದ್ದ ಪ್ರೇಮಿ

KGF-inspired : ಸಿನಿಮಾ ಪ್ರೇರಣೆಯಿಂದ ಸರಣಿ ಕೊಲೆ : ಸಮಾಜದ ಸ್ವಾಸ್ಥ್ಯ ಕೆಡಿಸುವ ಚಿತ್ರಗಳ ಬಗ್ಗೆ ಇರಲಿ ಎಚ್ಚರ

Mysuru crime : ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಯುವತಿ ಕೊಲೆ : ಪ್ರಿಯಕರನ್ನು ಬಂಧಿಸಿದ ಪೊಲೀಸರು

Fake journalists : ಅಕ್ಕಿ ವ್ಯಾಪಾರಿಯಿಂದ 5 ಲಕ್ಷ ಪೀಕಿಸಲು ಹೋದ 6 ಮಂದಿ ನಕಲಿ ಪತ್ರಕರ್ತರು ಅಂದರ್

Kerala honey trap : ದೇವರನಾಡಿನಲ್ಲಿ ಬಾಡಿಗೆ ಜೋಡಿ : ಒಂದು ಹನಿ ಟ್ರ್ಯಾಪ್ ಗೆ 40 ಸಾವಿರ

Praveen nettar NIA  : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : NIA ತಂಡ ಸೇರಿದ ಕರ್ನಾಟಕದ 7 ಪೊಲೀಸರು

Puttur : ಪುತ್ತೂರಿನಲ್ಲಿ ಕರಿಮಣಿ ಎಳೆದ ಫೈಜಲ್ ಗ್ಯಾಂಗ್ ನ ಮತ್ತೊಂದು ಕೃತ್ಯ ಬೆಳಕಿಗೆ

Udupi : ಬಾಲಕಿ ಮೇಲೆ ದಾಳಿ ಮಾಡಿದ ಬೀದಿನಾಯಿ ಗ್ಯಾಂಗ್ : ಉಡುಪಿ ರಜತ ಸಂಭ್ರಮದ ಸಾಧನೆ

Bengaluru crime : ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಆಮಿಷ : 4 ಕೋಟಿ ರೂ ಸುಲಿಗೆಗೆ ಮುಂದಾದ ಸುಂದರಿಯ ಬಂಧನ

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್