ಕೊನೆಗೂ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಮೃತ ದೇಹ ಪತ್ತೆಯಾಗಿದೆ. ಮಾಧ್ಯಮಗಳಲ್ಲಿ ಸಿದ್ದಾರ್ಥ್ ಆತ್ಮಹತ್ಯೆ ಅನ್ನುವ ಸುದ್ದಿ ಪ್ರಸಾರವಾಗುತ್ತಿದೆ. ಆದರೆ ಅದೊಂದು ಆತ್ಮಹತ್ಯೆಯೇ ಅನ್ನುವ ಅನುಮಾನ ದಟ್ಟವಾಗಿ ಕಾಡಲಾರಂಭಿಸಿದೆ.
ಈಗಾಗಲೇ ಡೈವರ್ ಬಸವರಾಜು ನೀಡಿರುವ ಮಾಹಿತಿ ಪ್ರಕಾರ ಸಿದ್ದಾರ್ಥ್ ಅವರ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದರು. ಆದರೆ ಶವ ಪತ್ತೆಯಾದ ವೇಳೆ ಟೀ ಶರ್ಟ್ ನಾಪತ್ತೆಯಾಗಿದೆ. ಒಂದು ದಿನ ಕಳೆಯುವುದರೊಳಗಾಗಿ ಟೀ ಶರ್ಟ್ ಕಳಚಿದ್ದು ಹೇಗೆ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಪೊಲೀಸರ ತನಿಖೆಯೇ ಇದಕ್ಕೆ ಉತ್ತರಿಸಬೇಕಾಗಿದೆ.
ಇನ್ನು ಶವ ಪತ್ತೆಯಾದ ಸಂದರ್ಭದಲ್ಲಿ ದೇಹದಿಂದ ರಕ್ತ ಒಸರುತ್ತಿತ್ತು. ಹಲವು ಗಂಟೆಗಳ ಕಾಲ ನೀರಿನಲ್ಲಿದ್ದ ಶವದಿಂದ ರಕ್ತ ಒಸರಲು ಸಾಧ್ಯವೇ ಅನ್ನುವ ಪ್ರಶ್ನೆ ಕಾಡುತ್ತಿದೆ. ಹಾಗಂತ ಪೊಲೀಸರು ಕೂಡಾ ಸುಮ್ಮನೇ ಕೂತಿಲ್ಲ. ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಸಂಶಯ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆ ಮಾಡಿ 36 ಗಂಟೆ ಕಳೆದರೂ ಮುಖದಲ್ಲಿ ರಕ್ತ ಸೋರಿಕೆ ಹಿನ್ನೆಲೆಯಲ್ಲಿ ವೈದ್ಯರಿಂದ ಮಾಹಿತಿಯನ್ನು ಕೋರಿದ್ದಾರೆ.
ಇನ್ನು ಸಿದ್ದಾರ್ಥ್ ಮೃತದೇಹದ ಪ್ಯಾಂಟ್ ಕಿಸೆಯಲ್ಲಿ ನೋಕಿಯಾ ಕಂಪನಿಗೆ ಸೇರಿದ ಮೊಬೈಲ್ ಸಿಕ್ಕಿದ್ದು, ಪೊಲೀಸರು ಅದನ್ನು ಮುಂದಿನ ತನಿಖೆಯ ಭಾಗವಾಗಿ ವಶಕ್ಕೆ ಪಡೆದಿದ್ದಾರೆ.
Discussion about this post