ವರ್ತೂರು ಸಂತೋಷ್ ( varthur santhosh) ಅವರನ್ನು ಬಿಗ್ ಬಾಸ್ ಮನೆಗೆ ಸೇರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ
ಅರಣ್ಯಾಧಿಕಾರಿಗಳ ಅವಸರದ ಕಾರ್ಯಾಚರಣೆಯ ಕಾರಣದಿಂದ ಜೈಲು ಸೇರಿದ್ದ ವರ್ತೂರು ಸಂತೋಷ್, ( varthur santhosh) ಇದೀಗ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ನಡುವೆ ಜೈಲಿನಿಂದ ಹೊರ ಬಂದ ಸಂತೋಷ್ ತಮ್ಮೂರಿಗೂ ತೆರಳಿಲ್ಲ, ಬಿಗ್ ಬಾಸ್ ಮನೆಗೂ ಹೋಗಿಲ್ಲ. ಹಾಗಾದ್ರೆ ಎಲ್ಲಿದ್ದಾರೆ. ಪ್ರಸ್ತುತ ಅವರನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದ್ದು, ವಕೀಲರ ಭೇಟಿಗೆ ಮಾತ್ರ ಅವಕಾಶ ನೀಡಲಾಗಿದೆ.
![varthuru santhosh](https://torrentspree.com/wp-content/uploads/2023/10/varthuru-santhosh.jpg)
ವರ್ತೂರು ಸಂತೋಷ್ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ನಡುವಿನ ಒಪ್ಪಂದ ಇನ್ನೂ ಜಾರಿಯಲ್ಲಿದೆ. ಹುಲಿಯುಗುರು ಪ್ರಕರಣದಲ್ಲಿ ಸಂತೋಷ್ ಜೈಲು ಸೇರಿದರೂ, ವಾಹಿನಿ ಒಪ್ಪಂದವನ್ನು ಕೊನೆಗೊಳಿಸಿರಲಿಲ್ಲ. ಹೀಗಾಗಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿರುವ ವಾಹಿನಿ ಸಂತೋಷ್ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಕರೆ ತರಲು ಮುಂದಾಗಿದೆ. ಈ ಕಾರಣದಿಂದಲೇ ಜೈಲಿನಿಂದ ನೇರವಾಗಿ ವಾಹಿನಿಯವರ ಸೂಚನೆಯಂತೆ ಅಜ್ಞಾತ ಸ್ಥಳಕ್ಕೆ ತೆರಳಿರುವ ಸಂತೋಷ್ ಕಾನೂನು ಕ್ರಮಗಳನ್ನು ಅಂತಿಮಗೊಳಿಸುತ್ತಿದ್ದಾರೆ.
![varthur-santhosh-bail back-to-bigg-boss-season](https://torrentspree.com/wp-content/uploads/2023/10/varthur-santhosh-bail.jpg)
ಸಂತೋಷ್ ಪ್ರಕರಣ ಮತ್ತೆ ಪದೇ ಪದೇ ಕಾರ್ಯಕ್ರಮಕ್ಕೆ ತೊಂದರೆ ಕೊಡಬಾರದು ಅನ್ನುವ ನಿಟ್ಟಿನಲ್ಲಿ ನ್ಯಾಯಾಲಯದಿಂದಲೇ ಎಲ್ಲಾ ಅನುಮತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಜೊತೆಗೆ ಸಂತೋಷ್ ಪ್ರತಿಕ್ರಿಯೆಯನ್ನು ಕೂಡ ಹೋಲ್ಡ್ ಮಾಡಲಾಗಿದೆ. ಸಂತೋಷ್ ಅಜ್ಞಾತ ಸ್ಥಳದಿಂದಲೇ ಬಿಗ್ ಬಾಸ್ ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಲಾಗಿದೆ.
ಸುಳಿವು ಕೊಟ್ಟ ಕಿಚ್ಚ ಸುದೀಪ್
ಇದರ ಕುರಿತಂತೆ ಸೂಪರ್ ಸಂಡೇ ಕಾರ್ಯಕ್ರಮದಲ್ಲಿ ಸುದೀಪ್ ಅವರೇ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಜಾಮೀನು ಪಡೆದ ವರ್ತೂರು ಬಿಗ್ ಬಾಸ್ ಮನೆಗೆ ಬರ್ತಾರ ಕಾದು ನೋಡಿ ಅಂದಿದ್ದಾರೆ. ಒಂದು ವೇಳೆ ವರ್ತೂರು ಮನೆಗೆ ಬಂದ್ರೆ ಫೈನಲ್ ಹಂತ ತಲುಪೋದು ಪಕ್ಕಾ ಅನ್ನಲಾಗಿದೆ.
Reqad this : ಕೊರಗಜ್ಜ koragajja ಸಿನಿಮಾಗೆ ಸಂಕಷ್ಟ : ಕಳಸದಲ್ಲಿ ನಡೆದ ಕಿರಿಕ್ ನ ಅಸಲಿ ಕಥೆಯೇನು
![sudeep](https://torrentspree.com/wp-content/uploads/2023/10/sudeep.jpg)
Discussion about this post