ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ಹಾದಿ ತಪ್ಪಿದ್ದು, ಕಾನೂನು ರಕ್ಷಿಸಬೇಕಾದ ಮಂದಿಯೇ ಕಾನೂನು ಭಕ್ಷಕರಾಗುತ್ತಿದ್ದಾರೆ. ಪ್ರತೀ ನಿತ್ಯ ಪೊಲೀಸ್ ಇಲಾಖೆಯ ಮೇಲೆ ಒಂದಲ್ಲ ಒಂದು ಆರೋಪ ಕೇಳಿ ಬರುತ್ತಿದೆ. ಹೀಗಾಗಿಯೇ ಪೊಲೀಸ್ ವ್ಯವಸ್ಥೆಯ ಮೇಲೆ ಜನರ ಆಕ್ರೋಶವೂ ಹೆಚ್ಚಾಗುತ್ತಿದೆ. ಅದರಲ್ಲೂ ಟ್ರಾಫಿಕ್ ಪೊಲೀಸರ ಬಗ್ಗೆ ಹೇಳುವುದೇ ಬೇಡ. ಟೋಯಿಂಗ್ ನೆಪದಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವ ಟ್ರಾಫಿಕ್ ಪೊಲೀಸರು ಅಕ್ಷರಶ ರೌಡಿಗಳಾಗಿದ್ದಾರೆ. ವಿಕಲಚೇತನೆ ಅನ್ನುವುದನ್ನೂ ನೋಡದೆ ಒದ್ದು ನಿಂದಿಸುತ್ತಾರೆ ಅಂದ್ರೆ ಇದು ರೌಡಿಸಂ ತಾನೇ.
ಈ ನಡುವೆ ಟ್ರಾಫಿಕ್ ಪೊಲೀಸರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಬೆಂಗಳೂರು ಸಂಚಾರ ವಿಭಾಗದ ಕವಿಹೃದಯದ ಅಧಿಕಾರಿಗೂ ಸಾಧ್ಯವಾಗಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ಟೋಯಿಂಗ್ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ವಿಫಲವಾಗಿದ್ದಾರೆ ಅಂದ್ರೆ ಈ ಮಾಫಿಯಾ ಅದೆಷ್ಟು ಬೆಳೆದಿರಬೇಕು,
ಇನ್ನು ಗೃಹ ಸಚಿವರು ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೈ ಚೆಲ್ಲಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಟೋಯಿಂಗ್ ವ್ಯವಸ್ಥೆ ಪುನರ್ ಪರಿಶೀಲನೆ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಿಯಮ ಮೀರಿ ಟೋಯಿಂಗ್ ವಾಹನಗಳು ಕಾರ್ಯನಿರ್ವಹಿಸುತ್ತಿದೆ. ಹೀಗಾಗಿಯೇ ಪೊಲೀಸರೊಂದಿಗೆ ಸಾರ್ವಜನಿಕರು ಘರ್ಷಣೆ ನಡೆಸುತ್ತಿದ್ದಾರೆ ಅನ್ನುವುದನ್ನು ಅರಿತಿರುವ ಮುಖ್ಯಮಂತ್ರಿಗಳು ಪೊಲೀಸರ ಅತಿರೇಕದ ವರ್ತನೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
Discussion about this post