ಮಂಗಳೂರು : ಹಿಂದೂ ದೇವರಿಗೆ ಅವಮಾನ ಮಾಡಿದ ಆರೋಪದ ಹಿನ್ನಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇದೀಗ ದೂರು ದಾಖಲಾಗಿದೆ.
ಕಾಂಗ್ರೆಸ್ ನ ಐಟಿ ಸೆಲ್ ಕಾರ್ಯದರ್ಶಿ ಶೈಲಜ ಅಮರನಾಥ್, ಪ್ರೀತು ಶೆಟ್ಟಿ, ಅನಿಲ್, ಪುನೀತ್ ಎಂಬವರ ವಿರುದ್ಧ ಪ್ರವೀಣ್ ಕುಮಾರ್ ಅನ್ನುವವರು ದೂರು ದಾಖಲಿಸಿದ್ದಾರೆ.
ದೂರಿನ ಅಂಶಗಳನ್ನು ಅವರು ಸಲ್ಲಿಸಿರುವ ಲಿಖಿತ ದಾಖಲೆಯಲ್ಲೇ ಗಮನಿಸಬಹುದಾಗಿದೆ.
![bjp ptr 1](https://torrentspree.com/wp-content/uploads/2022/06/bjp-ptr-1.png)
![bjp ptr 2](https://torrentspree.com/wp-content/uploads/2022/06/bjp-ptr-2.png)
ಸಂಸ್ಕೃತಿಯ ಆಸ್ತಿ ರಾಮಾಯಾಣ ಮಹಾಭಾರತ, ಇದಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ. ವಾಲ್ಮೀಕಿಗೆ ಬಿಜೆಪಿ ಸರ್ಕಾರ ಅಪಮಾನ ಎಸಗಿದೆ. ಈ ಬಗ್ಗೆ ಹೋರಾಟ ಮಾಡೋಣ ಎಂದು ಇತ್ತೀಚೆಗೆ ಡಿಕೆಶಿ ಕರೆ ಕೊಟ್ಟಿದ್ದರು. ಈಗ ಕಾಂಗ್ರೆಸ್ ನಾಯಕಿಯೇ ರಾಮನಿಗೆ, ಸೀತೆಗೆ ಅವಮಾನ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹಾಗಾದ್ರೆ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆಯೇ..?
Discussion about this post