ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಸಮೀರ್ ಆಚಾರ್ಯ ಮಾಡಿಕೊಂಡ ಎಡವಟ್ಟು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದು ಎಲ್ಲಿಯ ಮಟ್ಟಿಗೆ ಅಂದರೆ ಸಮೀರ್ ಅವರ ನಿದ್ದೆಗೆಡಿಸಿದೆ. ಮಾತ್ರವಲ್ಲದೆ ಅವರಲ್ಲಿ ತಾನು ಸಿಕ್ಕಾಪಟ್ಟೆ ಅವಮಾನಕ್ಕೆ ಒಳಗಾದೆ ಅನ್ನುವ ಭಾವನೆ ಬಂದು ಬಿಟ್ಟಿದೆ.
ಇದಕ್ಕೆ ಸಾಕ್ಷಿಯಾಗಿದ್ದು ಅವರೇ ಹಾಕಿದ ವಿಡಿಯೋ… ತಮ್ಮನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ವಿಡಿಯೋ ಹಾಕಿದ್ದು ಅದು ಮತ್ತೆ ನೆಗೆಟಿವ್ ಇಂಪ್ರೆಸನ್ ಕ್ರಿಯೇಟ್ ಮಾಡಿದೆ.
ಹೆಂಡತಿಯನ್ನು ಸಾರ್ವಜನಿಕವಾಗಿ ಬೈಯಲು ತಾಕತ್ತು ಇರಬೇಕು, ಹಾಗೇ ಹೀಗೆ ಎಂದು ಎನೇನೋ ಮಾತನಾಡಲು ಹೋಗಿ ಇನ್ನೇನು ಮಾಡ ಹೋಗಿದ್ದಾರೆ.
ಅವರಿಗೆ ನೋವಾಗಿರುವುದು ನಾನು ಮಾಡಿದ ಅಷ್ಟೊಂದು ಕೆಲಸಗಳು ವೈರಲ್ ಆಗಲಿಲ್ಲ, ಜನ ಶೇರ್ ಮಾಡಲಿಲ್ಲ. ಆದರೆ ಇದೊಂದು ತಪ್ಪನ್ನು ಮಹಾ ಅಪರಾಧ ಅನ್ನುವಂತೆ ಬಿಂಬಿಸಿದರಲ್ಲ ಅನ್ನುವುದೇ ಅವರ ಕೊರಗು.
ತಪ್ಪು ಉತ್ತರ ಕೊಟ್ಟರೂ ಪರವಾಗಿಲ್ಲ, ಅದೊಂದು ಮಾತು ಹೇಳಬಾರದಿತ್ತು
ಆದರೆ ಸಮೀರ್ ಒಂದು ಅರ್ಥ ಮಾಡಿಕೊಳ್ಳಬೇಕು. ಸೆಲೆಬ್ರೆಟಿ ಪಟ್ಟ ಲಕ್ ಅನ್ನುವಂತೆ ಬಂದು ಬಿಡುತ್ತದೆ. ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಇದೆಯಲ್ಲ ಅದು ದೊಡ್ಡ ಚಾಲೆಂಜ್.
ಅಂತಹುದೊಂದು ಪಟ್ಟವನ್ನು ಚೆನ್ನಾಗಿ ನಿಭಾಯಿಸಿದವನು ಪ್ರಥಮ್ ಮಾತ್ರ. ಉಳಿದವರೆಲ್ಲಾ ಮಾಡಿಕೊಂಡಿದ್ದು ಎಡವಟ್ಟು. ಇನ್ನುಳಿದ ಹಲವರು ಸಮಾಜ ಗುರುತಿಸಿದ ಮೇಲೆಯೇ ಬಿಗ್ ಬಾಸ್ ಮನೆಗೆ ಹೋದ ಕಾರಣ ಸಮಸ್ಯೆಯಾಗಲಿಲ್ಲ.
ಸಮೀರ್ ಅವರೇ ನೆಟ್ಟಿಗರ ಮೇಲೆ ತಿರುಗಿ ಬೀಳಬೇಡಿ. ಅದಕ್ಕಿಂತ ಮೊದಲು ನೀವು ಜನ ಸಾಮಾನ್ಯರೋ, ಸೆಲೆಬ್ರೆಟಿಯೋ ಅನ್ನುವುದನ್ನು ತೀರ್ಮಾನಿಸಿಕೊಳ್ಳಿ.
[youtube https://www.youtube.com/watch?v=xCDtre45o6Y&w=853&h=480]
Discussion about this post