ಬೆಂಗಳೂರು : ಕಳೆದ ಕೆಲವು ದಿನಗಳಿಂದ tv5 ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼಆರ್ ವೀ ಸ್ಟುಪಿಡ್ʼ ಅನ್ನುವ ಕಾರ್ಯಕ್ರಮ ವೀಕ್ಷಕರ ಅಸಹನೆಗೆ ಗುರಿಯಾಗಿತ್ತು. ಅದರಲ್ಲಿ ಸುದ್ದಿ ವಾಚಕರು ಪ್ರಯೋಗಿಸುತ್ತಿದ್ದ ಭಾಷೆ ತೀರಾ ಕೆಟ್ಟದಾಗಿತ್ತು. ಪ್ರಧಾನಿ ಅನ್ನುವ ಹುದ್ದೆಗೆ ಗೌರವ ಕೊಡುವ ಸೌಜನ್ಯವೂ ಸುದ್ದಿ ವಾಚಕರಿಗೆ ಇರಲಿಲ್ಲ. ಪ್ರಧಾನಿ ಹಾಗೂ ಬಿಜೆಪಿಯನ್ನು ಕೆಟ್ಟ ಭಾಷೆಯಲ್ಲಿ ಬೈಯುವುದೇ ವಾಹಿನಿಯ ಕಾಯಕವಾಗಿತ್ತು.
ಇದೇ ಕಾರಣಕ್ಕಾಗಿ ವಾಹಿನಿಯಿಂದ ಶ್ರೀಲಕ್ಷ್ಮಿ, ಚಂದನ್ ಶರ್ಮಾ, ರಾಘವ್ ಸೂರ್ಯ ಹೊರ ಬಂದಿದ್ದರು. ಅಲ್ಲಿ ಕೆಲಸ ಮಾಡುವುದು ನಮ್ಮ ಪತ್ರಿಕಾ ವೃತ್ತಿ ಧರ್ಮಕ್ಕೆ ಮಾಡುವ ದ್ರೋಹ ಅನ್ನುವುದು ಈ ಮೂವರ ನಿಲುವಾಗಿತ್ತು.
ಇದನ್ನೂ ಓದಿ : ಬಯಲಾಯ್ತೇ…ಟೂಲ್ ಕಿಟ್ ರಹಸ್ಯ :TV5 Executive Editor ಹುದ್ದೆಗೆ ಚಂದನ್ ಶರ್ಮಾ ರಾಜೀನಾಮೆ
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಟಿವಿ 5 ಸುದ್ದಿವಾಹಿನಿಯ ವಿರುದ್ಧ ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯ ಹರೀಶ್ ಕುಮಾರ್ ಎಂಬವರು ಅನೇಕಲ್ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು, ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ಆರ್ ಚೇತನ್, ನಿರೂಪಕ ರಮಾಕಾಂತ್ ಆರ್ಯನ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ಇದನ್ನೂ ಓದಿ : TV5ಗೆ ರಾಜೀನಾಮೆ ಕೊಟ್ಟ ಶ್ರೀಲಕ್ಷ್ಮಿ :ದೇವಸ್ಥಾನದ ಪ್ರಸಾದ ತಿಂದು ಬದುಕುವೆ ಅಂದಿದ್ಯಾಕೆ ಸುದ್ದಿ ವಾಚಕಿ
ಇದೀಗ ನ್ಯಾಯಾಲಯ ಮಧ್ಯಂತರ ಆದೇಶ ಕೊಟ್ಟಿದ್ದು, ಮುಂದಿನ ಆದೇಶದವರೆಗೆ ಟಿವಿ 5 ಸುದ್ದಿ ವಾಹಿನಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಯಾವುದೇ ಚಾರಿತ್ರ್ಯವಧೆ ಅಥವಾ ಮಾನಹಾನಿಕರ ವರದಿಯನ್ನು ಪ್ರಸಾರ ಮಾಡುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ.
ಆರ್ ವಿ ಸ್ಟುಪಿಡ್ ಹೆಸರಿನಲ್ಲಿ ಪ್ರಸಾರ ಮಾಡಲಾದ ಕಾರ್ಯಕ್ರಮ ಪ್ರಧಾನಮಂತ್ರಿಯವರ ಇಮೇಜ್ ಗೆ ಕಳಂಕ ತರುವಂತಿದೆ. ಮೂರನೇ ಪ್ರತಿವಾದಿ ಬಳಸಿದ ಪದಗಳನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯೊಳಗೆ ಬಳಸಿಲ್ಲ ಎಂದು ತೋರುತ್ತದೆ. ಪ್ರತಿಯೊಬ್ಬರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಹಾಗಂತ ಆಧಾರ ರಹಿತವಾಗಿ ಮಾನಹಾನಿ ಮಾಡಬಹುದು ಎಂದಲ್ಲ. ಪ್ರತಿವಾದಿಗಳು ಆರೋಗ್ಯಕರ ಹೇಳಿಕೆಗಳನ್ನು ನೀಡಬಹುದು. ಆದರೆ ನೇರವಾಗಿ ಮತ್ತು ಪರೋಕ್ಷವಾಗಿ ಮಾನಹಾನಿಕರ ಪದಗಳನ್ನು ಉಪಯೋಗಿಸುವಂತಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.
ಇದೇ ಆದೇಶದಲ್ಲಿ ಇತ್ತೀಚೆಗೆ ವಾಹಿನಿಯ ಉದ್ಯೋಗ ತೊರೆದಿದ್ದ ನಿರೂಪಕಿ ಶ್ರೀಲಕ್ಷ್ಮೀ ಅವರ ಹೇಳಿಕೆಯನ್ನೂ ಉಲ್ಲೇಖಿಸಲಾಗಿದೆ. ಇನ್ನು ಮುಂದಿನ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಲಾಗಿದೆ. ಆದೇಶದ ಪತ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ
Discussion about this post