ನವದೆಹಲಿ : ಈಗಾಗಲೇ ಅಡುಗೆ ಅನಿಲ ಏರಿಕೆಯಿಂದಾಗಿ ಕೇಂದ್ರ ಸರ್ಕಾರದ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ. ಮೋದಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಪ್ರಾರಂಭವಾಗಿದ್ದು, ಬಿಜೆಪಿಗೆ ಸಂಕಷ್ಟ ಗ್ಯಾರಂಟಿ. ಇದರೊಂದಿಗೆ ಪೆಟ್ರೋಲ್, ಡೀಸೇಲ್, ಖಾದ್ಯ ತೈಲ ಆಹಾರ ವಸ್ತುಗಳ ದರ ಏರಿಕೆಯೂ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ನಡುವೆ ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು ಈ ಹಿನ್ನಲೆಯಲ್ಲಿ ಸಾಸಿವೆ ಎಣ್ಣೆ ಹೊರತುಪಡಿಸಿ ದೇಶೀಯ ಮಾರುಕಟ್ಟೆಯಲ್ಲಿ ಉಳಿದ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಶೇ .1.95 ರಿಂದ ಶೇ. 7.17 ರ ವ್ಯಾಪ್ತಿಯಲ್ಲಿ ಏರಿಕೆಯಾದರೂ ಸುಂಕ ಕಡಿತದ ನಂತರ ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಮೇಲಿನ ಬೆಲೆ 0.22 ಶೇಕಡಾ 1.83 ಕ್ಕೆ ಇಳಿದಿದೆ.
ಆದರೆ ಸಾಸಿವೆ ಎಣ್ಣೆಯ ಬೆಲೆ ದರದಲ್ಲಿ ಇಳಿಕೆಯಾಗಿಲ್ಲ. ಇದಕ್ಕೆ ಕಾರಣ ಸಾಸಿವೆ ಎಣ್ಣೆಯನ್ನು ದೇಶೀಯವಾಗಿ ತಯಾರಿಸಲಾಗುತ್ತದೆ ಹೀಗಾಗಿ ದರ ಇಳಿಕೆಯಾಗಿಲ್ಲ.
ಉಳಿದಂತೆ ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೋಯಾ ಆಯಿಲ್ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕ ಶೇ. 24.75 ಕ್ಕೆ ಇಳಿದಿದೆ, ಸಂಸ್ಕರಿಸಿದ ತಾಳೆ ಎಣ್ಣೆ, ಸಂಸ್ಕರಿಸಿದ ಸೋಯಾ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿ ಸುಂಕವನ್ನು ಶೇ. 35.75 ಕ್ಕೆ ಇಳಿಸಲಾಗಿದೆ.
The government on Friday said retail prices of cooking oils, except mustard oil, have fallen in the domestic market despite a surge in global rates on the back of its decision to reduce import duties on crude and refined edible oils.
Discussion about this post