ಬೆಂಗಳೂರು : ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿರುವ ನಟ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಇದೀಗ ಪಾರ್ಥವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಗಿದ್ದು, ಬೆಳಗ್ಗೆ 8 ಗಂಟೆಯಿಂದ 10 ಗಂಟೆ ತನಕ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಸರ್ಕಾರವೇ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಈ ಮೂಲಕ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ನಟನಿಗೆ ಗೌರವ ಸಲ್ಲಿಸಿದೆ.
![sanchari viji](https://torrentspree.com/wp-content/uploads/2021/06/sanchari-viji.png)
10 ಗಂಟೆಯ ಬಳಿಕ ವಿಜಯ್ ಪಾರ್ಥಿವ ಶರೀರ ಅವರ ಹುಟ್ಟೂರಿಗೆ ತೆರಳಲಿದೆ. ಪಂಚನಹಳ್ಳಿಯಲ್ಲಿ ಅಂತಿಮ ವಿಧಿ ವಿಧಾನಗಳ ಬಳಿಕ ಅಂತ್ಯ ಸಂಸ್ಕಾರ ನೆರವೇರಲಿದೆ.
![sanchari 09](https://torrentspree.com/wp-content/uploads/2021/06/sanchari-09-1024x683.jpg)
ಇನ್ನು ಚಿಕ್ಕವಯಸ್ಸಿನಲ್ಲಿ ಉಸಿರು ನಿಲ್ಲಿಸಿರುವ ಸಂಚಾರಿ ವಿಜಯ್, ಸಾವಿನಲ್ಲೂ ಸಾರ್ಥಕತೆಯನ್ನು ಮರೆದಿದ್ದಾರೆ. ಎನಿಲ್ಲ ಅಂದರೂ ಸ್ವರ್ಗಕ್ಕೆ ಪಯಣಿಸುವ ಮುನ್ನ 6 ಜನರಿಗೆ ಹೊಸ ಬದುಕು ನೀಡಿದ ಹಿರಿಮೆ ವಿಜಯ್ ಅವರದ್ದು.
Discussion about this post