ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಲಿಪ್ ಲಾಕ್ ( Mangalore Kiss ) ವಿಡಿಯೋ ಕೂಡಾ ಶೇರ್ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಿಕೊಳ್ಳುವುದು ಒಳಿತು
ಮಂಗಳೂರು : ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಲಿಪ್ ಲಾಕ್ ವಿಡಿಯೋ (Mangalore Kiss) ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಪೂರ್ತಿ ಪ್ರಕರಣದ ಸಾಧಕ ಬಾಧಕವನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ :Gold theft : ಕೆಲಸಕ್ಕಿಂದ ಅಂಗಡಿಯಿಂದ 25 ಲಕ್ಷ ಮೌಲ್ಯದ ಚಿನ್ನ ಕದ್ದ ನೌಕರ
ಈ ನಡುವೆ ಪ್ರಕರಣವನ್ನು (Mangalore Kiss) ಮಂಗಳೂರು ಪೊಲೀಸರು ಆಯುಕ್ತ ಶಶಿಕುಮಾರ್ ಅವರೇ ಮೇಲ್ವಿಚಾರಣೆ ನಡೆಸಿದ್ದು, ಘಟನಾ ಸ್ಥಳ, ಕಾಲೇಜುಗಳಿಗೆ ಭೇಟಿ ಕೊಟ್ಟು ಬಂದಿದ್ದಾರೆ. ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿರುವ ಅವರು ತನಿಖಾ ತಂಡದ ಜೊತೆಗೂ ಮಾತನಾಡಿದ್ದಾರೆ. ಇಡೀ ಪ್ರಕರಣವನ್ನು ನಿಭಾಯಿಸುವ ಕುರಿತಂತೆ ಮಂಗಳೂರು ಪೊಲೀಸರು ತಲೆ ಕೆಡಿಸಿಕೊಂಡಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಯೋಚಿಸಬೇಕಾಗಿದೆ.
ಈ ನಡುವೆ ಮತ್ತೊಂದು ಕಾಮದಾಟದ ವಿಡಿಯೋ ವೈರಲ್ ಆಗುತ್ತಿದೆ ಅನ್ನುವ ಸುದ್ದಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ಪೊಲೀಸರು ಎಚ್ಚರಿಕೆ ಕೊಟ್ಟಿದ್ದು, ವಿಡಿಯೋ ಶೇರ್ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ವಿಡಿಯೋ ಶೇರ್ ಮಾಡಿದರೆ ಕಾನೂನು ಪ್ರಕಾರ ಜೈಲೂಟ ಗ್ಯಾರಂಟಿ.
ಅಷ್ಟು ಮಾತ್ರವಲ್ಲದೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ರೀತಿ ವಿಡಿಯೋ ಶೇರ್ ಮಾಡುವುದು ಮಾನವೀಯತೆ ಅನ್ನಿಸಿಕೊಳ್ಳುವುದಿಲ್ಲ. ನಾಗರಿಕ ಸಮಾಜ ಕೂಡಾ ಇದನ್ನು ಒಪ್ಪುವುದಿಲ್ಲ ನೆನಪಿರಲಿ.
ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಕಾರ್ಯ ಮೋದಿ ಹೆಗಲಿಗೆ
ಯಾರಾಗಲಿದ್ದಾರೆ ಭಾರತದ ರಾಷ್ಟ್ರಪತಿ ಅನ್ನುವ ಕುತೂಹಲಕ್ಕೆ ಸಂಜೆ ತೆರೆ ಬೀಳಲಿದೆ. ಆಡಳಿತಾರೂಢ ಎನ್ಡಿಎಯ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷದ ಯಶವಂತ್ ಸಿನ್ಹಾ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಮುರ್ಮು ಅವರೇ ಗೆಲುವು ಸಾಧಿಸುವುದು ಖಚಿತವಾಗಿದೆ.
ನವದೆಹಲಿ : ಭಾರತದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಇಂದು ಸಂಜೆ ಅಧಿಕೃತವಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ. 11 ಗಂಟೆಗೆ ಸಂಸತ್ ಭವನದ ಕೊಠಡಿ ಸಂಖ್ಯೆ 63ರಲ್ಲಿ ಫಲಿತಾಂಶ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಮುಖ್ಯ ಚುನಾವಣಾಧಿಕಾರಿ ಹಾಗೂ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಪಿಸಿ ಮೋದಿಯವರು ಮತ ಎಣಿಕೆ ಕಾರ್ಯದ ಉಸ್ತುವಾರಿ ಹೊತ್ತಿದ್ದಾರೆ.
NDA ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ ಮತ್ತು ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಟಿಎಂಸಿ ನಾಯಕರಾಗಿದ್ದ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ. ಈಗಾಗಲೇ ದ್ರೌಪದಿ ಮುರ್ಮು ಅವರ ಗೆಲುವು ಖಚಿತ ಅನ್ನಲಾಗಿದೆ.
ಮೊದಲು ಸಂಸದರ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಫಲಿತಾಂಷದ ಟ್ರೆಂಡ್ ವಿವರಿಸಿದ ನಂತರ ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳ ಆಧಾರದಲ್ಲಿ 10 ರಾಜ್ಯಗಳ ಮತ ಎಣಿಕೆ ಮಾಡುತ್ತಾರೆ. ಹೀಗೆ ಮುಂದುವರಿದುಕೊಂಡು ಹೋಗುತ್ತದೆ.
ಎಲ್ಲಾ ರಾಜ್ಯಗಳ ಮತ ಎಣಿಕೆ ಮುಕ್ತಾಯದ ನಂತರ ಸಂಜೆ ವೇಳೆ ಯಾರಿಗೆ ಎಷ್ಟು ಮತ ಬಂದಿದೆ ಅನ್ನುವುದನ್ನು ಮುಖ್ಯ ಚುನಾವಣಾಧಿಕಾರಿ ಪಿಸಿ ಮೋದಿಯವರು ಘೋಷಿಸುತ್ತಾರೆ.
Discussion about this post