ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಉತ್ತಮ ಆರೋಗ್ಯವಂತ 44 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ. ಈ ಮೂಲಕ ಅಶಿಸ್ತಿನತ್ತ ವಾಲುತ್ತಿದ್ದ ಶಿಸ್ತಿನ ಇಲಾಖೆಗೆ ಬಿಸಿ ಮುಟ್ಟಿಸಲಾಗಿದೆ.
ಅದ ಹಾಗೇ ಇದು ಸಾಧ್ಯವಾಗಿದ್ದು KSRP ಎಡಿಜಿಪಿ ಅಲೋಕ್ ಕುಮಾರ್ ಅವರ ಪ್ರಯತ್ನದಿಂದ. KSRPಗೆ ವರ್ಗಾವಣೆಯಾಗಿ ಬಂದ ಅಲೋಕ್ ಕುಮಾರ್ ಮೀಸಲು ಪೊಲೀಸ್ ಪಡೆದೆ ಹೊಸ ಸ್ಪರ್ಶ ನೀಡಲು ಮುಂದಾದರು. ಈ ವೇಳೆ ಅವರಿಗೆ ಕಂಡು ಬಂದಿದ್ದು, ಸಿಬ್ಬಂದಿ ಹಾಗೂ ಅಧಿಕಾರಿಗಳ ಆರೋಗ್ಯ ವಿಚಾರ. ಹೀಗಾಗಿ ಹೆಲ್ತ್ ಮಾನಿಟರಿಂಗ್ ಸಿಸ್ಟಂ ಮತ್ತು ವೇಯ್ಟ್ ಮಾನಿಟರಿಂಗ್ ಸಿಸ್ಟಿಂ ಜಾರಿಗೆ ತಂದ ಅವರು ತೂಕ ಇಳಿಸುವ, ಹೊಟ್ಟೆ ಕರಗಿಸುವ ಟಾಸ್ಕ್ ಕೊಟ್ರು.
ಇದೀಗ ಕಳೆದ ಒಂದೂವರೆ ವರ್ಷದಲ್ಲಿ 350ಕ್ಕೂ ಹೆಚ್ಚು ಸಿಬ್ಬಂದಿ 10 ಕೆಜಿಗೂ ಅಧಿಕ ಕೂತ ಇಳಿಸಿಕೊಂಡಿದ್ದಾರೆ. 100ಕ್ಕೂ ಅಧಿಕ ಸಿಬ್ಬಂದಿ ಸಿಗರೇಟ್, ಕುಡಿತ, ತಂಬಾಕು ಸೇವನೆಯನ್ನು ತ್ಯಜಿಸಿದ್ದಾರೆ.
ಕೊಟ್ಟ ಟಾಸ್ಕ್ ಪೂರೈಸಿದ ಸಿಬ್ಬಂದಿಗಳ ಬೆನ್ನು ತಟ್ಟುವ ಹಾಗೂ ಉಳಿದ ಸಿಬ್ಬಂದಿಗೆ ಪ್ರೇರಕವಾಗುವ ನಿಟ್ಟಿನಲ್ಲಿ ಆರೋಗ್ಯ ಸುಧಾರಿಸಿಕೊಂಡ 44 ಸಿಬ್ಬಂದಿಗೆ ಪ್ರಶಂಸನಾ ಪತ್ರ ಹಾಗೂ 1 ಸಾವಿರ ರೂ ನಗದು ನೀಡಿ ಗೌರವಿಸಲಾಗಿದೆ.
KSRPಯ 1,3,4 ಹಾಗೂ 9ನೇ ಬೆಟಾಲಿಯನ್ ನಿಂದ ಕೋರಮಂಗಲ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ KSRP ಎಡಿಜಿಪಿ ಅಲೋಕ್ ಕುಮಾರ್ ಸಿಬ್ಬಂದಿಯನ್ನು ಗೌರವಿಸಿದರು.
ಇಂತಹುದೊಂದು ಕಾರ್ಯಕ್ರಮ ರಾಜ್ಯದ ಪ್ರತೀ ಪೊಲೀಸ್ ಠಾಣೆಗಳಲ್ಲಿ ಜಾರಿಗೆ ಬಂದರೆ, ಪೊಲೀಸ್ ಅಂದ್ರೆ ದೊಡ್ಡ ಹೊಟ್ಟೆಯವರೆಂದು ಕಾರ್ಟೂನ್ ಬರೆಯುವುದು ತಪ್ಪುತ್ತದೆ.
Discussion about this post