ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶನಿವಾರ 269 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜೊತೆಗೆ 239 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2105ಕ್ಕೆ ತಲುಪಿದೆ. ಇನ್ನು ಜಿಲ್ಲೆಯಲ್ಲಿ ಸಾವಿನ ಪ್ರಮಾಣಕ್ಕೆ ಬ್ರೇಕ್ ಬೀಳದಿರುವುದು ಆತಂಕ ಮೂಡಿಸಿದ್ದು, ಶನಿವಾರದಂದು 4 ಮಂದಿ ಸೋಂಕಿಗೆ ಬಲಿಯಾಗಿದೆ.
ಮತ್ತೊಂದು ಕಡೆ ದಕ್ಷಿಣ ಕನ್ನಡ ಜಿಲ್ಲೆಗೆ ಹೆಗಲು ಕೊಟ್ಟಿರುವ ಕಾಸರಗೋಡಿನಲ್ಲಿ ಶನಿವಾರ 669 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 637 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಕಾಸರಗೋಡಿನಲ್ಲಿ ಪಾಸಿಟಿವಿಟಿ ದರ ಶೇ 10.06ಕ್ಕೆ ತಲುಪಿದೆ.
ಪ್ರಸ್ತುತ ಕಾಸರಗೋಡಿನಲ್ಲಿ 6,466 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 29, 823 ಮಂದಿ ನಿಗಾದಲ್ಲಿದ್ದಾರೆ.
ಕಾಸರಗೋಡಿನಲ್ಲಿ ಏರುತ್ತಿರುವ ಸೋಂಕಿನ ಪ್ರಮಾಣ ದಕ್ಷಿಣ ಕನ್ನಡ ಜಿಲ್ಲೆಗೆ ತಲೆನೋವಾಗಿ ಪರಿಣಮಿಸಿದೆ. ಕಾಸರಗೋಡು ಜಿಲ್ಲೆಯ ಅನೇಕ ಗಡಿ ಭಾಗಗಳು ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ನೇರ ಸಂಪರ್ಕ ಹೊಂದಿದೆ. ಜೊತೆಗೆ ಜನ ಕೂಡಾ ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿರುತ್ತಾರೆ. ಈ ಕಾರಣದಿಂದ ಸೋಂಕು ಹರಡುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಕಾಸರಗೋಡಿನಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದ ಹೊರತು ದಕ್ಷಿಣ ಕನ್ನಡ ನಿಟ್ಟುಸಿರು ಬಿಡುವ ಲಕ್ಷಣಗಳಿಲ್ಲ.
Discussion about this post