ನಮ್ದು ಕೇಡರ್ ಬೇಸ್ಡ್ ಪಾರ್ಟಿ ಅನ್ನುತ್ತಿದ್ದ ಬಿಜೆಪಿ ಅನ್ಯ ಪಕ್ಷದ ನಾಯಕರನ್ನು (Kasaragod BJP) ತುಂಬಿಸಿಕೊಂಡಿದೆ. ಈ ಕಾರಣದಿಂದ ಮೂಲ ಕಾರ್ಯಕರ್ತರು ಪಕ್ಷದ ಕಾರ್ಯದಿಂದ ದೂರ ಸರಿಯುತ್ತಿದ್ದಾರೆ.
ಕಾಸರಗೋಡು : ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ವಹಿಸಿ ಉಡಾಫೆ ತೋರಿದ ಕಾರಣಕ್ಕೆ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ತಳಮಟ್ಟದ ಕಾರ್ಯಕರ್ತರು ತಾಕತ್ತು ತೋರಿಸಿದ್ದಾರೆ. ದೇವ ದುಲರ್ಭ ಬಿರುದು ಪಡೆದ ಕಾರ್ಯಕರ್ತರ ಆಕ್ರೋಶಕ್ಕೆ ರಾಜ್ಯ ಬಿಜೆಪಿ ಬೆವತು ಹೋಗಿತ್ತು.(Kasaragod BJP)
ಹಾಗಂತ ಇದೇನು ಕರ್ನಾಟಕದ ಪರಿಸ್ಥಿತಿಯಲ್ಲ, ಪಕ್ಕದ ಕೇರಳದಲ್ಲೂ (Kasaragod BJP)ಬಿಜೆಪಿಯದ್ದು ಇದೇ ಹಣೆ ಬರಹ. ಎಡಪಂಥೀಯರ ಅಬ್ಬರದ ನಡುವೆ ದುಡಿದ ಕಾರ್ಯಕರ್ತರನ್ನು ಸೈಡ್ ಲೈನ್ ಮಾಡಿ, ವಲಸೆ ಬಂದವರಿಗೆ ಅವಕಾಶಗಳನ್ನು ನೀಡಲಾಗುತ್ತಿದೆ.
ಇದನ್ನೂ ಓದಿ : Mother killed daughter : 4 ವರ್ಷದ ಮಗಳನ್ನು 4ನೇ ಮಹಡಿಯಿಂದ ಎಸೆದ ಪಾಪಿ ತಾಯಿ
ಹೀಗೆ ಈ ಹಿಂದೆ ಬಿಜೆಪಿ ಕಾರ್ಯಕರ್ತರೊಬ್ಬರ ಹತ್ಯೆಯಲ್ಲಿ ಶಾಮೀಲಾಗಿದ್ದ ಸಿಪಿಎಂ ಸದಸ್ಯನಿಗೆ ಕುಂಬಳೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿರುವುದನ್ನು ಖಂಡಿಸಿ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿ ಎದುರು ನಾಯಕರ ವಿರುದ್ಧ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಇದೇ ವ್ಯಕ್ತಿಯನ್ನು ಪಕ್ಷಕ್ಕೆ ಬರ ಮಾಡಿಕೊಂಡ ಸಂದರ್ಭದಲ್ಲೂ ಪ್ರತಿಭಟನೆ ನಡೆದಿತ್ತು. ಕಳೆದ ಫೆಬ್ರವರಿ ತಿಂಗಳಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಸರಗೋಡು, ಕುಂಬಳೆ, ಮಂಜೇಶ್ವರದ ಕಾರ್ಯಕರ್ತರು ಕಾಸರಗೋಡು ಜಿಲ್ಲಾ ಬಿಜೆಪಿ ಕಚೇರಿಗೆ ಬೀಗ ಜಡಿದಿದ್ದರು. ಆಗ ಭರವಸೆ ಕೊಟ್ಟಿದ್ದ ನಾಯಕರು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಆದರೆ ವಲಸೆ ಬಂದವರಿಗೆ ಅದರಲ್ಲೂ ಕಾರ್ಯಕರ್ತರ ಸಾವಿಗೆ ಕಾರಣರಾದವರಿಗೆ ಮನ್ನಣೆ ಕೊಡುವುದು ನಿಂತಿರಲಿಲ್ಲ. ಇದೀಗ ಕರ್ನಾಟಕದಂತೆ ಕೇರಳದಲ್ಲೂ ಬಿಜೆಪಿ ಕಾರ್ಯಕರ್ತರು ನಾಯಕರ ವಿರುದ್ಧವೇ ಸಿಡಿದೆದ್ದಿದ್ದಾರೆ.
Discussion about this post