ಮಠಗಳಿಗೆ ಅನುದಾನ ಕೊಟ್ಟರೆ ಓಟು ಗಿಟ್ಟಿಸಿಕೊಳ್ಳಬಹುದು, ಅಕಾಡೆಮಿಗಳಿಗೆ ದುಡ್ಡು ಕೊಟ್ಟು ಓಟು ಬರುತ್ತದೆಯೇ. ಕಲೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಬಿಜೆಪಿ ಸರ್ಕಾರದ (Karnataka news) ನಿರ್ಲಕ್ಷ್ಯ ಮಾತ್ರ ದುರಂತವೇ ಸರಿ
ಬೆಂಗಳೂರು : ಕೊರೋನಾ ಹೆಸರಿನಲ್ಲಿ ಸರ್ಕಾರ ಮಾಡಿದ ಅನಾಹುತಗಳು ಒಂದೇ ಎರಡೇ. ಕೊರೋನಾ ಹೆಸರಿನಲ್ಲಿ ಕಾಸಿಲ್ಲ ಎಂದು ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಿದ್ದ ರಾಜ್ಯ ಸರ್ಕಾರ ಮಠಗಳಿಗೆ ಅನುದಾನ ಕೊಡುವ ವಿಚಾರದಲ್ಲಿ ಮಾತ್ರ ಹಿಂದೆ ಬೀಳಲಿಲ್ಲ. ಆಗ ಆಗ ಬೊಕ್ಕಸಕ್ಕೆ ಭಾರವಾಗಲಿಲ್ಲ. (Karnataka news) ಇದೀಗ ನಾಡಿನ ಭಾಷೆ, ಸಂಸ್ಕೃತಿ, ಕಲೆ ಉಳಿಸಿ ಬೆಳೆಸುವ ವಿಚಾರದಲ್ಲೂ ಬೊಮ್ಮಾಯಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬಂದಿದೆ.
2019ರ ಅಕ್ಟೋಬರ್ 15 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 14 ಅಕಾಡೆಮಿಗಳಿಗೆ ಹೊಸ ಅಧ್ಯಕ್ಷರ ನೇಮಕವಾಗಿತ್ತು. (Karnataka news)ಅಕ್ಟೋಬರ್ ತಿಂಗಳಲ್ಲಿ ಇವರ ಅಧಿಕಾರವಧಿ ಮುಕ್ತಾಯಗೊಳ್ಳಲಿದೆ. ಆದರೆ ಈ ಅಕಾಡೆಮಿಯ ಅಧ್ಯಕ್ಷರು ನಿರ್ಗಮಿಸುವ ಹೊತ್ತಿನಲ್ಲಿ ನೆನಪಿನಲ್ಲಿ ಉಳಿಯುವ ಯೋಜನೆ ತರಲಿಲ್ಲ ಅನ್ನುವ ನೋವಿನೊಂದಿಗೆ ನಿರ್ಗಮಿಸಬೇಕಿದೆ.
ಇದನ್ನೂ ಓದಿ : Robert Vadra : ಸಕ್ರಿಯ ರಾಜಕಾರಣ ಪ್ರವೇಶದ ಸುಳಿವು ಕೊಟ್ಟ ಸೋನಿಯಾ ಗಾಂಧಿ ಅಳಿಯ
ಇದಕ್ಕೆ ಕಾರಣ ಈ ಅಕಾಡೆಮಿಗಳ ಬಗ್ಗೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ. 2020 ಮತ್ತು 2021ರಲ್ಲಿ ಕೊರೋನಾ ಕಾರಣದಿಂದ ಎಲ್ಲಾ ಅಕಾಡೆಮಿಗಳ ಅನುದಾನ ಕಡಿತಗೊಳಿಸಲಾಗಿತ್ತು. ಕೆಲ ಅಕಾಡೆಮಿಗಳಿಗೆ ಎರಡು ವರ್ಷದಲ್ಲಿ 80 ಲಕ್ಷ ಕೊಟ್ಟರೆ ಮತ್ತೆ ಕೆಲ ಅಕಾಡೆಮಿಗಳಿಗೆ ಅದಕ್ಕಿಂತ ಕಡಿಮೆ ಅನುದಾನ ನೀಡಲಾಗಿದೆ. ಕೊಟ್ಟ ಅನುದಾನದಲ್ಲಿ ಅಕಾಡೆಮಿಯ ಸಿಬ್ಬಂದಿ ವೇತನ, ಕಚೇರಿ ನಿರ್ವಹಣೆಗೆ ಹೆಚ್ಚು ಖರ್ಚಾಗುತ್ತದೆ. ಇನ್ನು ಕ್ರಿಯಾ ಯೋಜನೆ ರೂಪಿಸಲು ಹಣವೇ ಇರುವುದಿಲ್ಲ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಲಲಿತಾ ಕಲಾ ಅಕಾಡೆಮಿ, ಜಾನಪದ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಈ ವರ್ಷ 30 ಲಕ್ಷ ರೂಪಾಯಿ ಅನುದಾನ ಪಡೆದಿದೆ. ಬಯಲಾಟ ಅಕಾಡೆಮಿ 15 ಲಕ್ಷ ರೂಪಾಯಿ ಅನುದಾನ ಪಡೆದರೆ, ತುಳು ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ, ಕೊಡವ ಸಾಹಿತ್ಯ ಅಕಾಡೆಮಿ, ಅರೆ ಭೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ ತಲಾ 18 ಲಕ್ಷ ರೂಪಾಯಿ ಅನುದಾನ ಪಡೆದಿದೆ. ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸಾಂಪ್ರದಾಯಿಕ ಶಿಲ್ಪ ಗುರುಕುಲ ಕೇವಲ 2.50 ಲಕ್ಷ ರೂಪಾಯಿ ಅನುದಾನಕ್ಕೆ ತೃಪ್ತಿ ಹೊಂದಬೇಕಿದೆ.
ಇದನ್ನೂ ಓದಿ : Mangalore Kiss : ಲಿಪ್ ಲಾಕ್ ವಿಡಿಯೋ ಬೆನ್ನಲ್ಲೇ ಕಾಮದಾಟದ ವಿಡಿಯೋ ವೈರಲ್ : ಶೇರ್ ಮಾಡಿದ್ರೆ ಜೈಲೂಟ ಗ್ಯಾರಂಟಿ
ಆದರೆ 178 ಮಠಗಳಿಗೆ 108.02 ಕೋಟಿ, 59 ದೇವಸ್ಥಾನಗಳಿಗೆ 21.35 ಕೋಟಿ 26 ಸಂಘ ಮತ್ತು ಟ್ರಸ್ಟ್ ಗಳಿಗೆ 13 ಕೋಟಿ ಅನುದಾನವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಮಾತು ಎತ್ತಿದ್ರೆ ನಾಡು ನುಡಿ ಭಾಷೆ ರಕ್ಷಣೆಗೆ ಬದ್ಧ ಅನ್ನುವ ಮಂದಿಯ ಕಾರ್ಯವೈಖರಿಗಿದು ಕೈಗನ್ನಡಿ
Discussion about this post