ಬೆಂಗಳೂರು : ಯಡಿಯೂರಪ್ಪ ಉತ್ತರಾಧಿಕಾರಿ ಯಾರಾಗ್ತಾರೆ ಅನ್ನುವ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ದೆಹಲಿಯಿಂದ ಮೂರು ಹೆಸರುಗಳೊಂದಿಗೆ ವೀಕ್ಷಕರು ಬೆಂಗಳೂರಿಗೆ ಆಗಮಿಸಿದ್ದು, ಶಾಸಕರ ಸಲಹೆಯನ್ನು ಪಡೆದ ಬಳಿಕ ಮುಂದಿನ ಸಿಎಂ ಯಾರು ಅನ್ನುವುದು ಗೊತ್ತಾಗಲಿದೆ.
ಈಗಿನ ಮಾಹಿತಿ ಪ್ರಕಾರ ಲಿಂಗಾಯತರೊಬ್ಬರು ಸಿಎಂ ಆಗೋದು ಖಚಿತಗೊಂಡಿದೆ. ಯಡಿಯೂರಪ್ಪ ಅವರು ಕೆಳಗಿಳಿದ ಬಳಿಕ ಲಿಂಗಾಯತ ಸಮುದಾಯ ಆಕ್ರೋಶಗೊಂಡಿದೆ. ಜೊತೆಗೆ ಕಾಂಗ್ರೆಸ್ ಕೂಡಾ ಇದರ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಈ ಸಂದರ್ಭದಲ್ಲಿ ಬಿ ಎಲ್ ಸಂತೋಷ್. ಸಿಟಿ ರವಿ, ಪ್ರಹ್ಲಾದ್ ಜೋಷಿಯವರನ್ನು ತಂದರೆ ಕಷ್ಟ ಅನ್ನುವ ಕಾರಣಕ್ಕೆ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಅನ್ನಲಾಗಿದೆ.
ಇದೀಗ ಸಿಎಂ ರೇಸ್ ನಲ್ಲಿ ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ ಹಾಗೂ ಬಸವರಾಜ ಬೊಮ್ಮಾಯಿ ಹೆಸರಿದ್ದು, ಬೆಲ್ಲದೆ ಅವರನ್ನು ಡಿಸಿಎಂ ಅಥವಾ ಪ್ರಬಲ ಖಾತೆಯೊಂದಕ್ಕೆ ಮಂತ್ರಿ ಮಾಡುವ ಸಾಧ್ಯತೆಗಳಿದೆ. ಹೀಗಾಗಿ ನಿರಾಣಿ ಮತ್ತು ಬೊಮ್ಮಾಯಿ ಪೈಕಿ ಯಾರು ಸಿಎಂ ಆಗ್ತಾರೆ ಅನ್ನುವುದು ಕುತೂಹಲ. ಮಾಹಿತಿಗಳ ಪ್ರಕಾರ ಬಸವರಾಜ್ ಬೊಮ್ಮಾಯಿ ಅವರನ್ನೇ ಸಿಎಂ ಮಾಡುವ ಸಾಧ್ಯತೆಗಳಿದೆ. ಇವರ ಮೇಲೆ ಹೇಳಿಕೊಳ್ಳುವಂತ ಆರೋಪಗಳಿಲ್ಲ, ಭ್ರಷ್ಟಚಾರದ ದೂರುಗಳಿಲ್ಲ. ಜೊತೆಗೆ ಉತ್ತಮ ವಿದ್ಯಾಭ್ಯಾಸವನ್ನು ಹೊಂದಿದ್ದಾರೆ. ಮಾತ್ರವಲ್ಲದೆ ಗೃಹ ಮಂತ್ರಿ ಸೇರಿದಂತೆ ವಿವಿಧ ಸಚಿವ ಸ್ಥಾನಗಳನ್ನು ನಿಭಾಯಿಸುವ ಮೂಲಕ ವಿಧಾನಸೌಧದ ಅಳ ಅಗಲವನ್ನು ಅರಿತಿದ್ದಾರೆ ಅನ್ನುವುದು ಇವರಿಗೆ ಪ್ಲಸ್ ಆಗಿ ಪರಿಣಮಿಸಿದೆ.
ಜೊತೆಗೆ ಬಿಜೆಪಿ ಮತ ಬ್ಯಾಂಕ್ ಆಗಿರುವ ಲಿಂಗಾಯತರನ್ನು ಒಟ್ಟಗೆ ಕರೆದುಕೊಂಡು ಸಾಮರ್ಥ್ಯ ಅವರಿಗಿದೆ. ಯಡಿಯೂರಪ್ಪ ಅವರನ್ನು ಸಂಭಾಳಿಸುವ ತಾಕತ್ತು ಕೂಡಾ ಬೊಮ್ಮಾಯಿಗಿದೆ ಈ ಎಲ್ಲಾ ಕಾರಣಗಳಿಂದ ಮಾಜಿ ಮುಖ್ಯಮಂತ್ರಿಯ ಪುತ್ರನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಖಚಿತ ಎನ್ನಲಾಗಿದೆ.
Discussion about this post