ಪುತ್ತೂರು : ಶಂಕಿತ ರೇಬಿಸ್ ರೋಗಕ್ಕೆ ತುತ್ತಾಗಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆಲಂಕಾರು ಗ್ರಾಮದ ಕೆದಿಲದಲ್ಲಿ ನಡೆದಿದೆ.ಮೃತಳನ್ನು ಕೆದಿಲ ಗ್ರಾಮದ ವರ್ಗಿಸ್ ಎಂಬವರ ಪುತ್ರಿ ವಿನ್ಸಿ (17) ಎಂದು ಗುರುತಿಸಲಾಗಿದೆ.
ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ವಿನ್ಸಿಗೆ ಗುರುವಾರ ಬೆಳಗ್ಗೆ ತೀವ್ರ ತಲೆನೋವು ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ತೆರಳಿ ಮದ್ದು ತರಲಾಗಿತ್ತು. ಆದರೆ ಸಂಜೆಯ ವೇಳೆ ಮತ್ತೆ ತಲೆನೋವು ಉಲ್ಬಣಗೊಂಡ ಕಾರಣ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಬಳಿಕ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿನ್ಸಿ ಗುರುವಾರ ತಡರಾತ್ರಿ ಮೃತಪಟ್ಟಿದ್ದಾಳೆ.
ನಾಲ್ಕು ತಿಂಗಳ ಹಿಂದೆ ಆಲಂಕಾರು ಪೇಟೆಯಲ್ಲಿ ಹುಚ್ಚು ನಾಯಿ ಕಾಣಿಸಿಕೊಂಡಿತ್ತು. ಇದೇ ನಾಯಿ ವಿನ್ಸಿ ಮನೆಯ ಸುತ್ತಮುತ್ತವೂ ಓಡಾಡಿದ್ದು, ಇದೇ ವೇಳೆ ಆಲಂಕಾರು ಪೇಟೆಯಲ್ಲಿರುವ ಬೀದಿನಾಯಿ ಹಾಗೂ ಇಬ್ಬರ ಮೇಲೆ ಈ ಹುಚ್ಚು ನಾಯಿ ದಾಳಿ ನಡೆಸಿತ್ತು. ವಿನ್ಸಿ ಮನೆಯ ನಾಯಿಯೂ ಕೂಡಾ ಕೆಲ ದಿನಗಳ ಹಿಂದೆ ರೇಬಿಸ್ಗೆ ಒಳಗಾಗಿ ಮೃತಪಟ್ಟಿತ್ತು. ಮನೆಯ ನಾಯಿಯಿಂದ ವಿನ್ಸಿಗೆ ವೈರಸ್ ತಗುಲಿರಬಹುದು ಎಂದು ಶಂಕಿಸಲಾಗಿದೆ.
ವೈದ್ಯರ ವರದಿ ಬಂದ ಬಳಿಕವೇ ಸಾವಿಗೆ ಸ್ಪಷ್ಟ ಕಾರಣ ಸಿಗಲಿದೆ. ದುರಂತ ಅಂದ್ರೆ 2018ರ ಎಪ್ರಿಲ್ನಲ್ಲಿ ವಿನ್ಸಿಯ ಅಣ್ಣ ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದು ಮೃತಪಟ್ಟಿದ್ದ. ಇದೀಗ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ದಂಪತಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
A female student of Alankar College in Kadaba, who was admitted to the hospital because of excessive headache reportedly passed away of suspected rabies virus infection in the hospital. The deceased has been identified as Vinci Saramma (17), daughter of Varghese, residents of Kedila in Alankar village. She was a student of 2nd year PUC at the Kadaba Government Pre-University College. rabies vincy puttur
Discussion about this post