ಬೆಂಗಳೂರು : ನಟ ದರ್ಶನ್ 25 ಕೋಟಿ ವಂಚನೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ನಡವಳಿಕೆ ಹಲವು ಅನುಮಾನಗಳಿಗೆ ಕಾರಣವಾಯ್ತು. ತಲೆ ತೆಗೆಯುತ್ತೇನೆ ಎಂದೆಲ್ಲಾ ಮಾತನಾಡಿದ್ದ ದರ್ಶನ್, ಯಾವಾಗ ಉಮಾಪತಿ, ದರ್ಶನ್ ಗೆಳೆಯರನ್ನು ಟಾರ್ಗೇಟ್ ಮಾಡಿದ್ರೋ, ದಾಸ ಸೈಲೆಂಟ್ ಆಗಿದ್ದರು. ಮಾತ್ರವಲ್ಲದೆ ಕಾನೂನು, ಪೊಲೀಸ್ ಎಂದೆಲ್ಲಾ ಮಾತನಾಡುತ್ತಿದ್ದ ರಾಬರ್ಟ್ ಯು ಟರ್ನ್ ಹೊಡೆದು ಸಂಧಾನಕ್ಕೆ ಸಮ್ಮತಿಸಿದ್ದರು. ಅಲ್ಲಿಗೆ ಇಡೀ ಪ್ರಕರಣದಲ್ಲಿ ಉಮಾಪತಿ ಪ್ರಸ್ತಾಪಿಸಿದ ದರ್ಶನ್ ಗೆಳೆಯರ ಬಳಗದ ಕೈವಾಡವಿದೆಯೇ ಅನ್ನುವ ಅನುಮಾನ ಮೂಡಿದ್ದು ಸುಳ್ಳಲ್ಲ. ಜೊತೆಗೆ ದರ್ಶನ್ ಸುತ್ತ ಆವರಿಸಿರುವ ಮಂದಿ ಇಷ್ಟೊಂದು ಅಪಾಯಕಾರಿಯೇ ಅನ್ನುವ ಪ್ರಶ್ನೆಯೂ ಮೂಡಿತ್ತು.
ಇದೀಗ ಇದಕ್ಕೆ ಪುಷ್ಟಿ ನೀಡುವಂತ ಬೆಳವಣಿಗೆಯೊಂದು ನಡೆದಿದ್ದು, ಮೈಸೂರಿನ ಸ್ಟಾರ್ ಹೋಟೆಲ್ ನಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದೆ ಅನ್ನುವ ಆರೋಪ ಕೇಳಿ ಬಂದಿದೆ. ಮಾತ್ರವಲ್ಲದೆ ಘಟನೆ ಬಳಿಕ ಹಲ್ಲೆಗೊಳಗಾದ ಸಪ್ಲೈಯರ್ ಪತ್ನಿ ದರ್ಶನ್ ಮುಂದೆಯೇ ಪೊರಕೆ ಹಿಡಿದುಕೊಂಡು ಬಂದಿದ್ದರು ಅನ್ನುವ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಇಂದ್ರಜಿತ್ ಲಂಕೇಶ್ ಮಾತನಾಡಿದ್ದು, ದರ್ಶನ್ ಹಾಗೂ ಅವರ ಗೆಳೆಯರ ಬಳಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಜೊತೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿರುವ ಇಂದ್ರಜಿತ್ ದಲಿತರ ಮೇಲಾಗಿರುವ ದೌರ್ಜನ್ಯಕ್ಕೆ ಸೂಕ್ತ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣವನ್ನು ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಇದೀಗ ಪ್ರಕರಣವನ್ನು ತನಿಖೆ ನಡೆಸುವಂತೆ ಮೈಸೂರು ಕಮಿಷನರ್ ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
ಇನ್ನು ಹಲ್ಲೆ ಘಟನೆ ಬಗ್ಗೆ ಮಾತನಾಡಿರುವ ಇಂದ್ರಜಿತ್ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ದಲಿತ ಸಪ್ಲೈಯರ್ ಮೇಲೆ ನಟ ದರ್ಶನ್ ಹಾಗೂ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಸಪ್ಲೈಯರ್ ನ ಕಣ್ಣು ಬ್ಲರ್ ಆಗಿದೆ. ಈ ವೇಳೆ ದರ್ಶನ್ ಜೊತೆಗೆ ರಾಕೇಶ್, ಹರ್ಷ, ಪಾಪಣ್ಣ ಇದ್ದರು ಅನ್ನುವುದಕ್ಕೆ ಸಾಕ್ಷಿಗಳು ನನ್ನ ಬಳಿ ಇದೆ ಅಂದಿದ್ದಾರೆ.
Discussion about this post