ರಾಜಕೀಯ ಕಾರಣಕ್ಕಾಗಿ ವಿರೋಧಕ್ಕೆ ಗುರಿಯಾಗಿದ್ದ ಅಗ್ನಿಪಥ ಯೋಜನೆಗೆ ಕರ್ನಾಟಕದ ಯುವಕರು ಹೇಗೆ ಸ್ಪಂದಿಸುತ್ತಾರೆ
ಹಾಸನ : ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರರನ್ನು ನೇಮಿಸಿಕೊಳ್ಳಲು ವಾಯು ಸೇನೆ ಈಗಾಗಲೇ ಕೆಲಸ ಪ್ರಾರಂಭಿಸಿದ್ದು, ಆಸಕ್ತಿ ಉಳ್ಳವರಿಂದ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ವಾಯು ಸೇನೆ ಸೇರಲು ಯುವಕರು ಉತ್ಸಾಹ ತೋರಿದ್ದು, ಲಕ್ಷ ಲಕ್ಷ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದೆ.
ಈ ನಡುವೆ ಭೂಸೇನೆ ಕೂಡಾ ಅಗ್ನಿ ವೀರರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಆಗಸ್ಟ್ 10 ರಿಂದ ಆಗಸ್ಟ್ 22ರವರೆಗೆ ಹಾಸನ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ನೇಮಕಾತಿ Rally ನಡೆಯಲಿದೆ.
ಈ Rallyಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಚಿತ್ರದುರ್ಗ, ಮತ್ತು ವಿಜಯನಗರದ ಪುರುಷ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
![indian army banner agni veer](https://torrentspree.com/wp-content/uploads/2022/07/indian-army-banner-agni-veer.jpg)
ಜನರಲ್ ಡ್ಯೂಟಿ, ಅಗ್ನೀವರ ತಾಂತ್ರಿಕ, ಹತ್ತನೆ ತರಗತಿ ಮತ್ತು ಎಂಟನೇ ತರಗತಿ ಪಾಸ್ ಆದವರಿಗೆ ಅಗ್ನಿ ವೀರ ಕುಶಲಕರ್ಮಿ, ಅಗ್ನಿವೀರ ಕ್ಲರ್ಕ್, ಮತ್ತು ಸ್ಟೋರ್ ಕೀಪರ್ ಹುದ್ದೆಗಳು ಸಿಗಲಿದ.
ಜುಲೈ 1 ರಿಂದ ಆನ್ ಲೈನ್ ನೋಂದಣಿ ಕಾರ್ಯ ನಡೆಯಲಿದ್ದು, ಜುಲೈ 30ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಆಸ್ತಕ ಆಭ್ಯರ್ಥಿಗಳು joinindianarmy.nic.in ವೆಬ್ ಸೈಟ್ ನಲ್ಲಿ ಹೆಸರು ನೋಂದಾಯಿಸಬಹುದಾಗಿದೆ.
![indian army banner agni veer1](https://torrentspree.com/wp-content/uploads/2022/07/indian-army-banner-agni-veer1.jpg)
Discussion about this post