ನವದೆಹಲಿ : ದಕ್ಷಿಣಕನ್ನಡದ ಅಕ್ಷರ ಸಂತ, ಕಿತ್ತಳೆ ವ್ಯಾಪಾರಿ ಹರೇಕಳ ಹಾಜಬ್ಬ ಅವರು ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ.
![hajabba 01](https://torrentspree.com/wp-content/uploads/2021/11/hajabba-01.jpg)
ಬರೀಗಾಲಲ್ಲಿ ಹೆಜ್ಜೆ ಹಾಕುತ್ತ, ಸಂಕೋಚದಿಂದಲೇ ರಾಷ್ಟ್ರಪತಿಗಳತ್ತ ಬಂದ ಹಾಜಬ್ಬ ದೇಶದ ಅತ್ಯುನ್ನತ್ತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀಯನ್ನು ಸ್ವೀಕರಿಸಿದ್ದಾರೆ.
![hajabba 02](https://torrentspree.com/wp-content/uploads/2021/11/hajabba-02.jpg)
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿದಂತೆ ಅನೇಕ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಹಾಜಬ್ಬ ಅವರೊಂದಿಗೆ ಪಿವಿ ಸಿಂಧು ಸೇರಿದಂತೆ 119 ಸಾಧಕರಿಗೆ ಪದ್ಮ ಸರಣಿಯ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.
![hajabba 03](https://torrentspree.com/wp-content/uploads/2021/11/hajabba-03.jpg)
Discussion about this post