ನವದೆಹಲಿ : ಬ್ರಿಟನ್ ನಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಕುರಿತಂತೆ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಶಿವಸೇನೆ ಮಾತ್ರ ರಾಹುಲ್ ಗಾಂಧಿ ಹೇಳಿಕೆಯನ್ನು ಬೆಂಬಲಿಸಿದ್ದು, ರಾಹುಲ್ ಗಾಂಧಿ ಸರಿಯಾಗಿಯೇ ಹೇಳಿದ್ದಾರೆ ಅಂದಿದ್ದಾರೆ.
ಆದರೆ ಬಿಜೆಪಿ ರಾಹುಲ್ ಗಾಂಧಿ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ, ಗೌರವ್ ಭಾಟಿಯಾ, 1984ರ ಸಿಖ್ ಹತ್ಯಾಕಾಂಡದಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷ ಸೀಮೆ ಎಣ್ಣೆ ಸುರಿಯುವ ಕೆಲಸ ಮಾಡುತ್ತಿದೆ. ಈ ಮೂಲಕ ಗಲಭೆ ಹಚ್ಚುತ್ತಿದೆ.
ರಾಹುಲ್ ಗಾಂಧಿ ಹೋಪ್ ಲೆಸ್ ಪಕ್ಷದ ಪಾರ್ಟ್ ಟೈಂ ರಾಜಕಾರಣಿ. ಅವರೊಬ್ಬರು ಅಪ್ರಬುದ್ಧ ಹಾಗೂ ವಿಫಲ ನಾಯಕ. ವಿದೇಶಿ ನೆಲದಲ್ಲಿ ಪದೇ ಪದೇ ಭಾರತದ ಮರ್ಯಾದೆ ಕಳೆಯುತ್ತಿದ್ದಾರೆ. ವಿದೇಶಿ ನೆಲದಲ್ಲಿ ಭಾರತಕ್ಕೆ ಅವಮಾನ ಮಾಡುವುದು ದೇಶಕ್ಕೆ ದ್ರೋಹ ಬಗೆದಂತೆ ಅಂದಿದ್ದಾರೆ.
ಇನ್ನು ವಿದೇಶಾಂಗ ಇಲಾಖೆ ತುಂಬಾ ಬದಲಾಗಿದೆ. ಅಹಂಕಾರದಿಂದ ವರ್ತಿಸುತ್ತಿದೆ ಅನ್ನುವ ರಾಹುಲ್ ಗಾಂಧಿ ಮಾತಿಗೆ ತಿರುಗೇಟು ಕೊಟ್ಟಿರುವ ವಿದೇಶಾಂಗ ಸಚಿವ, ಎಸ್ ಜೈಶಂಕರ್, ಇದು ಅಹಂಕಾರವಲ್ಲ, ಆತ್ಮವಿಶ್ವಾಸ ಅಂದಿದ್ದಾರೆ.
ಬ್ರಿಟನ್ ನಲ್ಲಿ ದೇಶದ ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ
ಲಂಡನ್ : ಇಡೀ ದೇಶದಲ್ಲಿ ಸೀಮೆಎಣ್ಣೆ ಚೆಲ್ಲಿದೆ. ಒಂದೇ ಒಂದು ಕಿಡಿ ಬಿದ್ದರೂ ಸಾಕು ಬೆಂಕಿ ಹತ್ತಿಕೊಳ್ಳುತ್ತದೆ. ಭಾರತದ ಸ್ಥಿತಿ ಈಗ ಸರಿಯಿಲ್ಲ, ಪ್ರಧಾನಿ ನರೇಂದ್ರ ಮೋದಿ ಯಾರ ಮಾತು ಕೇಳುವುದಿಲ್ಲ. ಇದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಹೇಳಿಕೆ. ಹಾಗಂತ ಈ ಹೇಳಿಕೆಯನ್ನು ಭಾರತದಲ್ಲಿ ಹೇಳಿದ್ದರೂ ಪರವಾಗಿರಲಿಲ್ಲ. ಆದರೆ ಈ ಹೇಳಿಕೆ ಕೊಟ್ಟಿರುವುದು ಲಂಡನ್ ನೆಲದಲ್ಲಿ.
ಲಂಡನ್ ನಲ್ಲಿ ಆಯೋಜಿಸಿದ್ದ ಐಡಿಯಾಸ್ ಫಾರ್ ಇಂಡಿಯಾ ಅನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, RSS ನವರು ಭಾರತವನ್ನು ಚಿನ್ನದ ಹಕ್ಕಿ ಅಂತಾ ತಿಳಿದಿದ್ದಾರೆ ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ವಿದೇಶಿ ನೆಲದಲ್ಲಿ ಭಾರತಕ್ಕೆ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆಕ್ರೋಶ ಹೊರ ಹಾಕಿದೆ.
ಇನ್ನು ಇದೇ ಕಾರ್ಯಕ್ರಮದಲ್ಲಿ ಸಿಪಿಎಂನ ಸೀತಾರಾಂ ಯಚೂರಿ, RJDಯ ತೇಜಸ್ವಿ ಯಾದವ್, ಮತ್ತು ಟಿಎಂಸಿಯ ಮೊಹುವಾ ಮೊಯಿತ್ರಾ ಪಾಲ್ಗೊಂಡಿದ್ದರು.
ರಾಹುಲ್ ಗಾಂಧಿ ಹೇಳಿದ್ದೇನು…?
- ಪ್ರಧಾನಿ ನರೇಂದ್ರ ಮೋದಿ ಯಾರ ಮಾತನ್ನೂ ಕೇಳುವುದಿಲ್ಲ
- ಬಿಜೆಪಿ ಜೋರಾಗಿ ಕಿರುಚಿ ಬೇರೆಯವರ ಬಾಯಿ ಮುಚ್ಚಿಸುತ್ತದೆ
- ಭಾರತ ಮತ್ತು ಉಕ್ರೇನ್ ಗೆ ಸಾಕಷ್ಟು ಸಾಮ್ಯತೆಯಿದೆ.
- ಭಾರತದಲ್ಲಿ ಲಡಾಖ್ ಮತ್ತು ಡೋಕ್ಲಾಂನಲ್ಲಿ ಚೀನಾ ಸೇನೆ ಬಂದು ನೆಲೆಸಿದ್ದು, ಅರುಣಾಚಲ ಪ್ರದೇಶದ ಜಿಲ್ಲೆಗಳು ತನ್ನದು ಅನ್ನುತ್ತಿದೆ.
Discussion about this post