ಪೂಜೆ… ದೇಣಿಗೆ ನೆಪದಲ್ಲಿ ಆನ್ ಲೈನ್ ಮೂಲಕ ವಸೂಲಿ ಮಾಡಿದ ಕಿರಾತಕರು ಭಕ್ತಿಯನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ
ರಾಯಚೂರು : ದೇವರು ದಿಂಡಿರು ಎಂದು ಭಯ ಭಕ್ತಿಯಿಂದ ನಡೆದಾಡುವ ಮಂದಿ ಕಷ್ಟ ಎಂದು ಓಡಾಡುತ್ತಿದ್ದಾರೆ. ಆದರೆ ಇದೇ ದೇವರ ಹೆಸರಿನಲ್ಲಿ ಮೋಸ ವಂಚನೆ ಮಾಡುವ ಮಂದಿ ಮಾತ್ರ ದಿಲ್ದಾರ್ ಆಗಿದ್ದಾರೆ. ಮಂತ್ರಾಲಯ ಅಂದ್ರೆ ಆಸ್ತಿಕರಿಗೆ ಬಲು ಭಕ್ತಿ. ರಾಯರ ಕೃಪೆಗೆ ಪಾತ್ರರಾಗಲು ಇನ್ನಿಲ್ಲದ ಸರ್ಕಸ್ ಮಾಡುವ ಮಂದಿ ಇದ್ದಾರೆ.
ಈ ನಡುವೆ ರಾಯರು, ಮಂತ್ರಾಲಯ, ಪರಿಮಳ ಪ್ರಸಾದ ಎಂದು ಖದೀಮರು ನಕಲಿ ವೆಬ್ ಸೈಟ್ ತೆರೆದು ಕೋಟಿ ಕೋಟಿ ರೂಪಾಯಿ ದೋಚಿದ್ದಾರೆ. ಆನ್ ಲೈನ್ ಮೂಲಕವೇ ಈ ವಂಚನೆ ನಡೆದಿದ್ದು, ಮಠದಲ್ಲಿ ಸಿಗುವ 25 ರೂಪಾಯಿಯ ಪರಿಮಳ ಪ್ರಸಾದಕ್ಕೆ 400 ರೂಪಾಯಿ ವಸೂಲಿ ಮಾಡಿದ್ದಾರೆ. ಮಾತ್ರವಲ್ಲದೆ ಪ್ರಸಾದ ಹೋಮ್ ಡೆಲಿವರಿ ಎಂದು ಕಾಸು ಬಾಚಿದ್ದಾರೆ.
ಮಾತ್ರವಲದ್ದೆ ಕೊರೋನಾ ಕಾರಣದಿಂದ ಮಠದ ಸಿಬ್ಬಂದಿ ಅರ್ಚಕರು ಸಂಕಷ್ಟದಲ್ಲಿದ್ದಾರೆ, ಅವರಿಗೆ ಸಹಾಯ ಹಸ್ತ ಚಾಚಿ ಎಂದು ಭಕ್ತಿಯನ್ನೇ ಬಂಡವಾಳವನ್ನಾಗಿಸಿದ್ದಾರೆ. ರಾಯರ ಹೆಸರಿನಲ್ಲಿ ಖದೀಮರು ಕೋಟಿ ಕೋಟಿ ಸಂಪಾದಿಸಿದ್ದಾರೆ.
ಈ ನಡುವೆ ವೆಬ್ ಸಸೈಟ್ ಬಗ್ಗೆ ಅನುಮಾನಗೊಂಡ ಭಕ್ತರೊಬ್ಬರು ಇಮೇಲ್ ಮೂಲಕ ಮಠಕ್ಕೆ ಮಾಹಿತಿ ಕೊಟ್ಟಿದ್ದಾರೆ. ಈ ಬಗ್ಗೆ ಮಠದ ಆಡಳಿತ ಮಂಡಳಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ಇದೀಗ ಪ್ರಕರಣ ಸಂಬಂಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗಂತ ಆರೋಪಿಗಳಿಗೆ ದೊಡ್ಡ ಶಿಕ್ಷೆಯಾಗಬಹುದೇ ಖಂಡಿತಾ ಅಸಾಧ್ಯ ಅನ್ನಲಾಗಿದೆ. ಅಬ್ಬಬ್ಬ ಅಂದ್ರೆ 420 ಕೇಸ್ ದಾಖಲಾಗುತ್ತದೆ.
Discussion about this post