Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

dk shivakumar : ಜೆಡಿಎಸ್ ನಿಂದ ದೂರವಾಗುತ್ತಿರುವ ಒಕ್ಕಲಿಗರು : ವಿಧಾನಸೌಧದ ಮೂರನೇ ಮಹಡಿಯತ್ತ ಡಿಕೆಶಿ ದೃಷ್ಟಿ

Radhakrishna Anegundi by Radhakrishna Anegundi
July 20, 2022
in ಟಾಪ್ ನ್ಯೂಸ್
modi dkc
Share on FacebookShare on TwitterWhatsAppTelegram

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( dk shivakumar ) ಮುಖ್ಯಮಂತ್ರಿಯಾಗುವ ಕನಸನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರು : ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಂ ಯಾರು ಅನ್ನುವುದು ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿಯವರ ( dk shivakumar ) ಪೈಪೋಟಿಯಲ್ಲಿ ಲಾಭ ಪಡೆಯಲು ಬಿಜೆಪಿ ನಾಯಕರು ಪೈಪೋಟಿಗೆ ನಿಂತಿದ್ದಾರೆ. ಈ ನಡುವೆ ಬಿಜೆಪಿ ನಾಯಕರಿಗೆ ಡಿಕೆ ಶಿವಕುಮಾರ್ ಕೊಟ್ಟ ಹೇಳಿಕೆ ಬಿಸಿ ಮುಟ್ಟಿಸಿದೆ. ನನಗೊಂದು ಅವಕಾಶ ಕೊಡಿ ಎಂದು ಒಕ್ಕಲಿಗರ ಮತದಾರರಲ್ಲಿ ಬಹಿರಂಗ ಮನವಿ ಮಾಡಿರುವುದು ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಒಕ್ಕಲಿಗ ಸಮುದಾಯ ಡಿಕೆಶಿ ಕಡೆಗೆ ತಿರುಗಿದ್ರೆ ಮೋದಿಗಾಗಿ ಮತ ಕೊಡಿ ಅಂದ್ರು ಬಿಜೆಪಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ.

ಹಾಗಾದ್ರೆ ಡಿಕೆ ಶಿವಕುಮಾರ್ ಒಕ್ಕಲಿಗರ ಮುಂದೆ ಅವಕಾಶಕ್ಕಾಗಿ ಮನವಿ ಮಾಡಿದ್ಯಾಕೆ. ಅದರ ಹಿಂದೆ ಒಂದು ಸ್ಟೋರಿ ಇದೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿಯಾಗಬೇಕು ಅನ್ನುವ ಕನಸು ಕಟ್ಟಿಕೊಂಡೇ ರಾಜಕೀಯದಲ್ಲಿ ಬೆಳೆದವರು ಡಿಕೆಶಿ. ಪಕ್ಷ ನಿಷ್ಟೆಯ ವಿಷಯದಲ್ಲಿ ಡಿಕೆಶಿಯವರಿಗೆ ಡಿಕೆಶಿಯವರೇ ಸಾಟಿ. ಡಿಕೆಶಿಯವರ ವೇಗವನ್ನು ಕಟ್ಟಿಹಾಕಲು ಇನ್ನಿಲ್ಲದ ಪ್ರಯತ್ನಗಳು ನಡೆದರೂ ಕುಗ್ಗದೆ ಅವರು ನಾನು ಕನಕಪುರ ಬಂಡೆ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ : NEET 2022 : ಮಹಿಳಾ ಪರೀಕ್ಷಾ ಅಭ್ಯರ್ಥಿಗಳ ಒಳ ಉಡುಪು ಪರಿಶೀಲನೆ

ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಅವಕಾಶ ವಂಚಿತರಾದ ಡಿಕೆಶಿ ಸಹನೆಯ ಮೂರ್ತಿ ಅನ್ನುವಂತೆ ಕೂತಿದ್ದರು. ಸಿದ್ದರಾಮಯ್ಯ ಅವರ ತಂತ್ರಗಾರಿಕೆಯಿಂದಲೇ ಮಂತ್ರಿ ಸ್ಥಾನ ತಪ್ಪಿದೆ ಅನ್ನುವುದು ಗೊತ್ತಿದ್ದರೂ ಸಿದ್ದು ವಿರುದ್ಧ ಒಂದಕ್ಷರ ಮಾತನಾಡಿರಲಿಲ್ಲ. ಯಾವಾಗ ಸಿದ್ದು ಸಂಪುಟ ಸೇರಲು ಸಿಕ್ಕಾಪಟ್ಟೆ ಸರ್ಕಸ್ ಮಾಡಬೇಕಾಯ್ತೋ, ಆಗ್ಲೇ 2023ಕ್ಕೆ ನಾನು ಸಿಎಂ ಆಗಲೇಬೇಕು ಎಂದು ಡಿಸೈಡ್ ಮಾಡಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದೆ ಅನ್ನುವುದು ಡಿಕೆಶಿಗೆ ಗೊತ್ತಿತ್ತು. ಹೀಗಾಗಿ ಅವರು ಟಾರ್ಗೇಟ್ 2023 ಇಟ್ಟುಕೊಂಡಿದ್ದರು.

ಅದರಂತೆ ಈಗ ಡಿಕೆಶಿಯವರು ದಾಳ ಉರುಳಿಸಲಾರಂಭಿಸಿದ್ದಾರೆ. ಜೆಡಿಎಸ್ ಪಕ್ಷದ ಮತ ಬ್ಯಾಂಕ್ ಎಂದೇ ಗುರುತಿಸಿಕೊಂಡಿರುವ ಒಕ್ಕಲಿಗ ಸಮುದಾಯ ಈಗ ದಳಪತಿಗಳ ಜೊತೆಗಿಲ್ಲ. ಮುಖ್ಯವಾಗಿ ಜೆಡಿಎಸ್ ನಲ್ಲಿದ್ದ ಒಕ್ಕಲಿಗರು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ. ಹೀಗಾಗಿ ಒಕ್ಕಲಿಗ ಮತಗಳು ಕೂಡಾ ಕಾಂಗ್ರೆಸ್ ಕಡೆಗೆ ಬಂದಾಗಿದೆ. ಇದೇ ಕಾರಣಕ್ಕಾಗಿಯೇ ಜೆಡಿಎಸ್ ನ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್ ಗೆ ಸ್ವಾಗತಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ದಳಪತಿಗಳ ಜೊತೆಗೆ ಗುರುತಿಸಿಕೊಂಡಿದ್ದ ‘ವೇದಿಕೆ’ಗಳು ಕೂಡಾ ಡಿಕೆಶಿ ಬಣ ಸೇರಿದೆ.

dkc1

ಒಂದು ವೇಳೆ 70 ಕ್ಷೇತ್ರಗಳಲ್ಲಿ ತನ್ನ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬಂದ್ರೆ ಸಹಜವಾಗಿಯೇ ಸಿದ್ದರಾಮಯ್ಯ ಸೈಡಿಗೆ ಸರಿಯಬೇಕಾಗುತ್ತದೆ. ಜೊತೆಗೆ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿರುವ ಕುಮಾರಸ್ವಾಮಿ ಕೂಡಾ ಸರ್ಕಾರ ರಚನೆಯ ಸರ್ಕಸ್ ನಲ್ಲಿ ಕೈಯಾಡಿಸಲು ಸಾಧ್ಯವಾಗೋದಿಲ್ಲ.

ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಈಗ ರಾಜಾಹುಲಿಯಾಗಿ ಉಳಿದಿಲ್ಲ. ಈ ಕಾರಣದಿಂದ ವೀರಶೈವ ಮತ್ತು ಲಿಂಗಾಯತ ಮತಗಳು ಕಾಂಗ್ರೆಸ್ ಕಡೆಗೆ ಬರುವ ನಿರೀಕ್ಷೆ ಇದೆ. ಹೀಗಾದ್ರೆ ಕಾಂಗ್ರೆಸ್ ಬಹುಮತ ಪಡೆಯೋದು ಗ್ಯಾರಂಟಿ ಅನ್ನುವುದು ಡಿಕೆಶಿ ಲೆಕ್ಕಚಾರ.

ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಸಿಎಂ ಕುರ್ಚಿಯ ಸರ್ಕಸ್ ನಲ್ಲಿ ಮತದಾರರು ಬೇಸರಗೊಂಡರೆ ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭವಾದರೂ ಅಚ್ಚರಿ ಇಲ್ಲ.

hdk dkc
Tags: MAIN
ShareTweetSendShare

Discussion about this post

Related News

Arun Kumar Puthila nomination to fight as Independent from Puttur

Arun Kumar Puthila  : ಪ್ರಧಾನಿ ನರೇಂದ್ರ ಮೋದಿ ಕಚೇರಿ ತಲುಪಿದ ಅರುಣ್ ಪುತ್ತಿಲ ನಾಮಪತ್ರದ ಸುದ್ದಿ : ವರದಿ ಕೇಳಿದ ಹೈಕಮಾಂಡ್

arun kumar puthila puttur assembly constituency independent candidate

Arun kumar puthila : ಪುತ್ತೂರಿಗೆ ಪುತ್ತಿಲ : ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಏಪ್ರಿಲ್ 17 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ

Karnataka election : ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ : ಅಮಿತ್ ಶಾ ತಂತ್ರಕ್ಕೆ ತಿರುಗೇಟು

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Latest News

Arun Kumar Puthila nomination to fight as Independent from Puttur

Arun Kumar Puthila  : ಪ್ರಧಾನಿ ನರೇಂದ್ರ ಮೋದಿ ಕಚೇರಿ ತಲುಪಿದ ಅರುಣ್ ಪುತ್ತಿಲ ನಾಮಪತ್ರದ ಸುದ್ದಿ : ವರದಿ ಕೇಳಿದ ಹೈಕಮಾಂಡ್

arun kumar puthila puttur assembly constituency independent candidate

Arun kumar puthila : ಪುತ್ತೂರಿಗೆ ಪುತ್ತಿಲ : ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಏಪ್ರಿಲ್ 17 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ

Karnataka election congress-to-field-dk-suresh-against-r-ashok-in-padmanabhanagar

Karnataka election : ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ : ಅಮಿತ್ ಶಾ ತಂತ್ರಕ್ಕೆ ತಿರುಗೇಟು

bjp-ticket-bhagirathi-murulya-asha-thimmappa-new-face-bjp-candidate

BJP Ticket : ಕರಾವಳಿಯ 5 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್ : ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿದವರು ಸೈಡ್ ಲೈನ್

BJP Ticket karnataka-assembly-election-2023-bjp-candidate-first-list-released-politics

BJP Ticket : ಮಕ್ಕಳಿಗೆ ಟಿಕೆಟ್ ಕೇಳಿದ ಇಬ್ಬರಿಗೆ ಸಿಹಿ ಕೊಟ್ಟ ಬಿಜೆಪಿ ಹೈಕಮಾಂಡ್

Pavithra gowda Darshan birthday party megha shetty video

Darshan megha shetty : ದರ್ಶನ್ ಕುಟುಂಬದಲ್ಲಿ ಏನಾಗುತ್ತಿದೆ… ಹುಳಿ ಹಿಂಡಿದ್ರ ಮೇಘಾ ಶೆಟ್ಟಿ..?

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

jothe jotheyali shilpa iyer marriage

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

balipa narayana bhagavatha no more

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್