ಮೈಸೂರು : ನಟ ದರ್ಶನ್ ಸದಾ ಅದ್ಯೆ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಕೆಲ ವರ್ಷಗಳ ಹಿಂದೆ ಪವಿತ್ರಾ ಗೌಡ ಅನ್ನುವ ನಟಿಯ ಗಾಸಿಪ್ ದೊಡ್ಡ ಸುದ್ದಿಯಾಗಿತ್ತು. ಆದರೆ ದರ್ಶನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.
ಇದಾದ ಬಳಿಕ ಕುರುಕ್ಷೇತ್ರ ಸೆಟ್ ಗೆ ಭೇಟಿ ನೀಡಿದ್ದ ಪವಿತ್ರಗೌಡ ದರ್ಶನ್ ಜೊತೆ ಮಾತುಕತ ನಡೆಸಿದ್ದಾರೆ ಅನ್ನಲಾದ ಫೋಟೋ ಕೂಡಾ ಸಾಕಷ್ಟು ವೈರಲ್ ಆಗಿತ್ತು.
ಇದೀಗ ಮೈಸೂರಿನ ಸಂದೇಶ ಹೋಟೆಲ್ನಲ್ಲಿ ಗಲಾಟೆ ನಡೆದ ಸಮಯದಲ್ಲಿ ದರ್ಶನ ಹಾಗೂ ಅವರ ಸ್ನೇಹಿತರ ಜೊತೆಗೆ ನಟಿ ಪವಿತ್ರಗೌಡ ಕೂಡ ಇದ್ದರು ಎಂದು ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಆರೋಪಿಸಿದ್ದಾರೆ. ಇದಕ್ಕೆ ಪುಷ್ಟ ನೀಡುವಂತೆ ಮಾತನಾಡಿರುವ ಸಂದೇಶ್ ನಾಗರಾಜ್, ಪವಿತ್ರಾ ಗೌಡ ಗಲಾಟೆ ವೇಳೆ ಇದ್ರ ಎಂದು ಪ್ರಶ್ನಿಸಿದಾಗ ಈ ವೇಳೆಯಲ್ಲಿ ಅವರು ಇದ್ದರೂ ಇರಬಹುದು ಅಂತ ಅಂತ ಅಡ್ಡಗೋಡೆ ದೀಪವಿಟ್ಟು ಹೇಳಿಕೆ ಕೊಟ್ಟಿದ್ದಾರೆ.
Discussion about this post