ಕರಾವಳಿಯ ಕಾಂಗ್ರೆಸ್ ಚಿಲ್ಲರೆ ಮುಖಂಡನೊಬ್ಬನಿಗೆ ತಿಂದಿದ್ದು ಕರಗಿದಂತೆ ಕಾಣಿಸುತ್ತಿಲ್ಲ. ಸಿಎಎ ಕಾಯ್ದೆ ವಿರೋಧಿಸುವ ನಶೆ ಏರಿಸಿಕೊಂಡಿರುವ ಈ ಮುಖಂಡ ಮನೆಯ ಕರೆಂಟ್ ಬಿಲ್ ಕಟ್ಟಲಾಗದ ದುಸ್ಥಿತಿಗೆ ತಲುಪಿದ್ದಾನೆ.
ಅರಮನೆಯಂತಹ ಮನೆ ಕಟ್ಟಿಕೊಂಡಿದ್ದರೂ ಸರಿಯಾದ ಸಮಯಕ್ಕೆ ಕರೆಂಟ್ ಬಿಲ್ ಕಟ್ಟಲು ಯೋಗ್ಯವಿಲ್ಲದಂತಾಗಿದ್ದಾನೆ.
ಮಂಗಳೂರು ಹೊರವಲಯದ ದೇರಳಕಟ್ಟೆ ಸಮೀಪ ಮನೆ ಕಟ್ಟಿಕೊಂಡಿರುವ ಅಮೀರ್ ಹಸನ್ ತುಂಬೆ ಕೆಲ ಸಮಯದಿಂದ ಕರೆಂಟ್ ಬಿಲ್ ಕಟ್ಟಿರಲಿಲ್ಲ. ಹೀಗಾಗಿ ಮನೆಯ ಫ್ಯೂಸ್ ತೆಗೆಯಲು ಮೆಸ್ಕಾಂ ಸಿಬ್ಬಂದಿ ಬಂದ್ರೆ ಅವರ ಮೇಲೆಯೇ ಎಗರಿ ಹೋಗಿದ್ದಾನೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಜೊತೆಗೆ ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ.
ಮೆಸ್ಕಾಂ ಸಿಬ್ಬಂದಿ ರಂಗನಾಥ್ ಮುಖಕ್ಕೆ ಉಗುಳಿದ್ದು, ಸಂದೇಶ್ ಕುಮಾರ್ ಹಾಗೂ ಮಧುನಾಯ್ಕ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ.
ಅಲ್ಲಿಗೆ ಈತನ ಅಬ್ಬರ ಮುಗಿದಿಲ್ಲ, ಧರ್ಮ ವಿಚಾರವನ್ನು ಎಳೆದು ತಂದು ಹೈಪ್ ಕ್ರಿಯೇಟ್ ಮಾಡಿದ್ದಾನೆ. ಕರೆಂಟ್ ಬಿಲ್ ಕಟ್ಟುವುದಕ್ಕೆ ಮುಸ್ಲಿಂ ಹಿಂದು ಅನ್ನುವ ಬೇಧ ಭಾವವಿಲ್ಲ ಅನ್ನುವ ಕನಿಷ್ಟ ಜ್ಞಾನವಿಲ್ಲದ ಕಾಂಗ್ರೆಸ್ ಮುಖಂಡ ರಾಜಕಾರಣಿಯಂತೆ.
ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನೈತಿಕತೆ ಅನ್ನುವುದು ಇದ್ರೆ ಇತನನ್ನು ಪಕ್ಷದಿಂದ ಉಚ್ಛಾಟಿಸಲಿ. ಇದೀಗ ಪೆಟ್ಟು ತಿಂದ ಮೆಸ್ಕಾಂ ಸಿಬ್ಬಂದಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Discussion about this post