ಬೆಂಗಳೂರು : ರಾಜ್ಯದ ಆಡಳಿತ ಈಗಾಗಲೇ ಹಳಿ ತಪ್ಪಿದೆ. ಸಚಿವರ ನಡುವೆ ಸಮನ್ವಯತೆಯಿಲ್ಲ. ಸಚಿವರ ನಡುವಿನ ಹೊಂದಾಣಿಕೆ ಕೊರತೆಯಿಂದ ದಿನಕ್ಕೊಂದು ಆದೇಶಗಳು ಹೊರ ಬೀಳುತ್ತಿದೆ. ಇನ್ನು ಸಚಿವರ ಮೇಲೆ ಮುಖ್ಯಮಂತ್ರಿಗಳು ಹಿಡಿತ ತಪ್ಪಿ ಎಷ್ಟೋ ದಿನಗಳಾಗಿದೆ.
ಈ ನಡುವೆ ಪೋಷಕರ ಆಕ್ರೋಶಕ್ಕೆ ತುತ್ತಾಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ SSLC ಪರೀಕ್ಷೆ ವಿಚಾರದಲ್ಲಿ ಮತ್ತೊಂದು ಯಡವಟ್ಟು ಮಾಡಿದ್ದಾರೆ. ಆರೋಗ್ಯ ಸಚಿವರ ಜೊತೆಗೆ ಚರ್ಚಿಸಿದೆ ಸುರೇಶ್ ಕುಮಾರ್ ಪರೀಕ್ಷಾ ತೀರ್ಮಾನವನ್ನು ಪ್ರಕಟಿಸಿದ್ದಾರೆ ಅನ್ನುವ ಆರೋಪಗಳು ಕೇಳಿ ಬಂದಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಆರೋಗ್ಯ ಸಚಿವ ಸುಧಾಕರ್ ನಿನ್ನೆ ಹೇಳಿಕೆಯೊಂದನ್ನು ಕೊಟ್ಟು, ನನಗೆ ಪರೀಕ್ಷೆಯ ಬಗ್ಗೆ ಗೊತ್ತಿಲ್ಲ ಅಂದಿದ್ದಾರೆ.
ಈಗಾಗಲೇ ಮಕ್ಕಳ ಆರೋಗ್ಯ ಮುಖ್ಯ ಎಂದು ಸುಧಾಕರ್ ಹೇಳಿದ್ದು, ಶಾಲಾರಂಭಕ್ಕೂ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು. ಇದು ಸುರೇಶ್ ಕುಮಾರ್ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹೀಗಾಗಿ ಇದೀಗ ಆರೋಗ್ಯ ಸಚಿವರನ್ನು ಸೈಡ್ ಲೈನ್ ಮಾಡಿರುವ ಸುರೇಶ್ ಕುಮಾರ್ ಪರೀಕ್ಷಾ ದಿನಾಂಕ ಘೋಷಿಸಿದ್ದಾರೆ. ಹಾಗಾದ್ರೆ ಮಕ್ಕಳ ಆರೋಗ್ಯದ ಕಥೆಯೇನು.
Discussion about this post