ಚಂದನ್ ಕುಮಾರ್ (chandan kumar ) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಧಾರಾವಾಹಿ ಕಾರಣಕ್ಕಾಗಿ ಅವರು ಸುದ್ದಿಯಾಗಿಲ್ಲ, ಬದಲಾಗಿ ಕಿರಿಕ್ ಕಾರಣಕ್ಕಾಗಿ
ಹೈದ್ರಬಾದ್ : ತೆಲುಗಿನ ಖ್ಯಾತ ಧಾರಾವಾಹಿ ಶ್ರೀಮತಿ ಶ್ರೀನಿವಾಸ್ ಸೀರಿಯಲ್ ನಲ್ಲಿ ಕನ್ನಡದ ಚಂದನ್ ಕಿರಿಕ್ ಮಾಡಿಕೊಂಡಿರುವ ಸುದ್ದಿ ಬಂದಿದೆ. ಚಂದನ್ ಕುಮಾರ್ (chandan kumar) ಅವರೇ ಪ್ರಮುಖ ಪಾತ್ರದಲ್ಲಿರುವ ಈ ಸೀರಿಯಲ್ ಸೆಟ್ ನಲ್ಲಿ ಕ್ಯಾಮರಾ ಅಸಿಸ್ಟೆಂಟ್ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನಲಾಗಿದೆ. ಇದಾದ ಬಳಿಕ ತಂತ್ರಜ್ಞರು ಮತ್ತು ಚಂದನ್ ನಡುವೆ ಮಾತಿಗೆ ಮಾತು ಬೆಳೆದಿದೆ.
ಇದನ್ನು ಓದಿ : Eshwarappa : ಪಕ್ಷಕ್ಕೆ ನಿಮ್ಮ ಕೊಡುಗೆ ಏನು…ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಬಗ್ಗೆ ಈಶ್ವರಪ್ಪ ಕೀಳು ಮಾತು
ಇದೇ ಮಾತಿನ ಚಕಮಕಿ ಬೆಳೆದು ತಂತ್ರಜ್ಞರೊಬ್ಬರು ಚಂದನ್ ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಅಂದ ಹಾಗೇ ಈ ಘಟನೆ ಹೈದ್ರಾಬಾದ್ನಲ್ಲಿ ಶೂಟಿಂಗ್ ವೇಳೆ ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ಇದೀಗ ವೈರಲ್ ಆಗಿದೆ. ಈ ಬಗ್ಗೆ ಚಂದನ್ (chandan kumar) ಅಥವಾ ಶ್ರೀಮತಿ ಶ್ರೀನಿವಾಸ್ ಸೀರಿಯಲ್ ತಂಡದಿಂದ ಯಾವುದೇ ಪ್ರತಿಕ್ರಿಯೆಗಳು ಸಿಕ್ಕಿಲ್ಲ.
ಚಂದನ್ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ನಂತರ ರಾಧಾ ಕಲ್ಯಾಣ, ‘ಸರ್ವ ಮಂಗಳ ಮಾಂಗಲ್ಯೇ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಎಂಬ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಪ್ರಧಾನ ಪಾತ್ರ ನಟಿಸುತ್ತಿದ್ದಾರೆ.
Telugu Srimathi Srinivas On Kannada actor Chandan Kumar during serial shooting Assault on Chandan Kumar The incident has come to light. This video has gone viral on social media. In a Telugu serial Chandan KumarHe was handling the main character.
Discussion about this post