ಚೈತ್ರಾ ಕುಂದಾಪುರ ಅನ್ನುವ ಸ್ವಯಂ ಘೋಷಿತ ಹಿಂದೂ ನಾಯಕಿ ಲೂಟಿ ಮಾಡಿದೆಷ್ಟು ಅನ್ನುವುದಕ್ಕೆ ಲೆಕ್ಕವಿಲ್ವಂತೆ
ಬೆಂಗಳೂರು : ಎಂಎಲ್ಎ ಟಿಕೆಟ್ ಕೊಡಿಸೋದಾಗಿ ಹೇಳಿ ಉದ್ಯಮಿಯೊಬ್ಬರಿಗೆ 7 ಕೋಟಿ ರೂಪಾಯಿ ವಂಚಿಸಿದ ಆರೋಪದಡಿಯಲ್ಲಿ ಸ್ವಯಂ ಘೋಷಿತ ಹಿಂದೂ ನಾಯಕಿ ಚೈತ್ರಾ ಕುಂದಾಪುರ ಮತ್ತು ಅಕೆಯ ಬೆಂಬಲಿಗರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ಉಡುಪಿಯಲ್ಲಿ ಸಿನಿಮಾ ಶೈಲಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ.
ಇದಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಮುಸ್ಲಿಂ ಗೆಳತಿಯೊಬ್ಬರ ಮನೆಯಲ್ಲಿ ಚೈತ್ರಾ ವಾಸ್ತವ್ಯ ಇದ್ಲು ಅನ್ನುವ ಮಾಹಿತಿಗಳು ಲಭ್ಯವಾಗಿದೆ. ಮುಸ್ಲಿಂ ದ್ವೇಷ ಭಾಷಣ ಮಾಡುವ ಮೂಲಕವೇ ಚೈತ್ರಾ ಸುದ್ದಿಯಾಗಿದ್ದರು ಅನ್ನುವುದು ಗಮನಾರ್ಹ ಅಂಶ.
2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅನ್ನುವವರಿಗೆ ಭರವಸೆ ಕೊಟ್ಟು ವಂಚಿಸಲಾಗಿತ್ತು. ಟಿಕೆಟ್ ಸಿಕ್ಕಿಲ್ಲ ಅಂದ್ರೆ ಕಾಸು ವಾಪಾಸು ಕೊಡುವ ಭರವಸೆ ನೀಡಲಾಗಿತ್ತು. ಅಷ್ಟು ಮಾತ್ರವಲ್ಲದೆ ಸರ್ವೇ ಹೆಸರಿನಲ್ಲೂ ಇದೇ ಗ್ಯಾಂಗ್ ಉದ್ಯಮಿಗೆ ಮೋಸ ಮಾಡಿರೋದು ಈಗ ಗೊತ್ತಾಗಿದೆ. ಈ ಸಂಬಂಧ ಬೆಂಗಳೂರು ನಗರದ ಬಂಡೇಪಾಳ್ಯ ಪೊಲೀಸ್ ಠಾಣೆಗೆ ಉದ್ಯಮಿ ದೂರು ನೀಡಿದ್ದರು.
ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಚೈತ್ರಾ ಕುಂದಾಪುರ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಜೊತೆಗೆ ಗಗನ್ ಕಡೂರು, ಶ್ರೀಕಾಂತ್ ನಾಯಕ್, ಪ್ರಸಾದ್ ಅನ್ನುವವರು ಕೂಡಾ ಸಿಸಿಬಿ ವಶಕ್ಕೆ ಸಿಕ್ಕಿದ್ದಾರೆ.
ಈ ನಡುವೆ ಚೈತ್ರಾ ಇದೇ ರೀತಿಯಲ್ಲಿ ಮತ್ತಷ್ಟು ಮಂದಿಗೆ ವಂಚಿಸಿದ್ದಾರೆ ಅನ್ನುವ ಸುದ್ದಿಗಳಿದ್ದು, ಪೊಲೀಸರು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇನ್ನು ಗೋವಿಂದ ಪೂಜಾರಿಯವರಿಗೆ ವಂಚಿಸೋ ಸಲುವಾಗಿ ಸಾಮಾನ್ಯರಿಗೆ ಹಣದಾಸೆ ತೋರಿಸಿ RSS ಪ್ರಚಾರಕರ ವೇಷ ಹಾಕಿಸಿದ್ದಾಳೆ, ಸಲೂನ್ನಲ್ಲಿ ಮೇಕಪ್ ಮಾಡಿಸಿ ಆರ್ಎಸ್ಎಸ್ ಪ್ರಚಾರಕರನೆಂದು ಹೇಳಿಸಿದ್ದಾಳೆ. ಇದಕ್ಕಾಗಿ RSS ಪ್ರಚಾರಕರ ರೀತಿ ನಟಿಸಲು ತರಬೇತಿ ಬೇರೆ ಕೊಟ್ಟಿದ್ದಾಳಂತೆ. ಹೀಗೆ ನಟಿಸಿದವರಿಗೆ ಲಕ್ಷ ಲಕ್ಷ ಸಂಭಾವನೆ ಬೇರೆ ಸಿಕ್ಕಿತ್ತು ಅನ್ನುವ ಮಾಹಿತಿಗಳಿದೆ.
ಅಷ್ಟೇ ಅಲ್ಲದೆ ಕಬಾಬ್ ವ್ಯಾಪಾರಿಯೊಬ್ಬನನ್ನು ಚುನಾವಣಾ ಸಮಿತಿ ಸದಸ್ಯ ಎಂದು ಉದ್ಯಮಿಗೆ ಪರಿಚಯಿಸಿ, ಹಂತ ಹಂತವಾಗಿ ಕಾಸು ಲೂಟಿ ಹೊಡೆದಿದ್ದಾರೆ.ಒಟ್ಟಿನಲ್ಲಿ ಹಿಂದೂ ನಾಯಕಿ ಅನ್ನುವ ಕಾರ್ಡ್ ಬಳಸಿ ಮೋಸ ಮಾಡಿದ್ದಾಳೆ ಅನ್ನೋದು ಆರೋಪ.
Discussion about this post