ಬೆಳ್ತಂಗಡಿ : ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದನವನ್ನು ಯುವಕರು ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.
ವೇಣೂರಿನ ಜಯರಾಜ್ ಶೆಟ್ಟಿ ಎಂಬವರಿಗೆ ಸೇರಿದ ದನ ಮೇಯಲು ಹೋಗಿದ್ದ ಸಂದರ್ಭ ನೆರೆ ನೀರಿನಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿತ್ತು. ಈ ಸಂದರ್ಭದಲ್ಲಿ ಈ ವಿಚಾರ ತಿಳಿದ ಈಜುಗಾರರಾದ ಇಮ್ತಿಯಾಝ್ ಹಾಗೂ ಹಸನಬ್ಬ ಕೈರೋಳಿ ನದಿಗೆ ಧುಮುಕಿದ್ದಾರೆ.ಜೀವದ ಹಂಗು ತೊರೆದು ದನವನ್ನು ರಕ್ಷಿಸಿದ್ದಾರೆ.
ಪಲ್ಗುಣಿ ನದಿಯ ತಟದ ಬಳಿ ಮೇಯಲು ಹೋಗಿದ್ದ ದನ ನೀರು ಹೆಚ್ಚಾದ ಕಾರಣ ನದಿ ಪಾಲಾಗಿದ್ದು ಎನ್ನಲಾಗಿದೆ. ಈ ವೇಳೆ ಇಮ್ತಿಯಾಝ್ ಹಾಗೂ ಹಸನಬ್ಬ ಇಲ್ಲದಿರುತ್ತಿದ್ರೆ ದನವನ್ನು ಮರೆತು ಬಿಡಬೇಕಾಗಿತ್ತು.
Discussion about this post