ಅದು ಆಗಸ್ಟ್ 1, ಮುಂಬೈ ಮಸ್ಜೀದ್ ರೈಲು ನಿಲ್ದಾಣಕ್ಕೆ ಬರುತ್ತಿದ್ದ ರೈಲಿ ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಕನೊಬ್ಬ ಟಿಟಿ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.
ಟಿಕೆಟ್ ಎಂದು ಕೇಳಿದರೆ ಪೇಚು ಮೊರೆ ಹಾಕಿದ ಪ್ರಯಾಣಿಕನನ್ನು ಟಿಟಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೋಡಿದರೆ ಪ್ರಯಾಣಿಕನ ಜೊತೆಗೆ ಮೇಕೆಯೂ ಇತ್ತು. ಮುಂಬೈ ನಲ್ಲಿ ಲೋಕಲ್ ರೈಲಿನಲ್ಲಿ ಪ್ರಾಣಿ ಸಾಗಿಸುವಂತಿಲ್ಲ. ಹೀಗಾಗಿ ಎರಡೂ ತಪ್ಪುಗಳಿಗೆ ದಂಡ ಕಟ್ಟಬೇಕಾಗುತ್ತದೆ ಎಂದಿದ್ದಾರೆ.
ಟಿಸಿ ದಂಡ ವಿಧಿಸಿದರೆ. ದಂಡ ಕಟ್ಟಲು ಪ್ರಯಾಣಿಕನ ಬಳಿ ಹಣವೇ ಇರಲಿಲ್ಲ. ಆದರೆ ಟಿಸಿ ಕೇಳಬೇಕಲ್ವ, ದಂಡ ಕಟ್ಟು ಇಲ್ಲ ಅಂದ್ರೆ ಜೈಲು ಗ್ಯಾರಂಟಿ ಅಂದಿದ್ದಾರೆ. ಅಷ್ಟಕ್ಕೆ ಭಯಪಟ್ಟ ಪ್ರಯಾಣಿಕ, ಈ ಮೇಕೆಯನ್ನು ನಿಮ್ಮ ಬಳಿಯೇ ಇಟ್ಟುಕೊಂಡಿರಿ, ನಾನು ಹೋಗಿ ಹಣ ತರುತ್ತೇನೆ ಎಂದು ಪ್ರಯಾಣಿಕ ತೆರಳಿದ್ದಾನೆ.
ಬೆಳೆದ ಮೇಕೆ ಪ್ರಯಾಣಿಕ ಬಂದೇ ಬರುತ್ತಾನೆ ಎಂದು ಟಿಟಿ ಮೇಕೆ ಹಾಗೂ ದಂಡದ ಸ್ಲಿಪ್ ಅನ್ನು ನಿಲ್ದಾಣದ ಅಧಿಕಾರಿಗೆ ಒಪ್ಪಿಸಿ ಮುಂದೆ ಸಾಗಿದ್ದಾರೆ. ಆದರೆ ಮೇಕೆಯನ್ನು ಟಿಸಿಗೆ ಒಪ್ಪಿಸಿ ಹೊರಟ. ಹಣ ತೆಗೆದುಕೊಂಡು ಬರುತ್ತೇನೆಂದು ಹೋದವ ಬರ್ಲೇ ಇಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೆ ಮೇಕೆಯನ್ನು ರೈಲು ನಿಲ್ದಾಣದಲ್ಲೇ ಕಟ್ಟಿ ಹಾಕಿ ನೋಡಿಕೊಳ್ಳುತ್ತಿದ್ದರು. ಜೊತೆಗೆ ರೈಲ್ವೆ ಸಿಬ್ಬಂದಿ ಬಸಂತಿ ಎಂದು ನಾಮಕರಣ ಬೇರೆ ಮಾಡಿದರು.
ಒಂದು ದಿನ ಕಳೆಯಿತು. ಬಸಂತಿಯ ಮಾಲೀಕ ನಾಪತ್ತೆ. ಮೇಕೆಯ ಮೇಲಿನ ಪ್ರೀತಿಯಿಂದ ಹುಲ್ಲು ನೀರು ಕೊಟ್ಟು ಸಾಕಿದರು. ಇನ್ನು ಮೇಕೆಯನ್ನು ಕಾಯ್ದುಕೊಂಡಿರುವುದು ಕಷ್ಟ ಮುಂದೇನು ಮಾಡುವುದು ಎಂದು ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ರೈಲ್ವೆ ಕಾನೂನು ಪುಸ್ತಕ ಹುಡುಕಾಡಿದ್ದಾರೆ. ಎಲ್ಲೋ ಒಂದು ಕಡೆ ಹರಾಜು ಹಾಕಬಹುದು ಅನ್ನುವುದು ಗೊತ್ತಾಗಿದೆ.
ಇದನ್ನೂ ನೋಡಿ : ಕುರುಕ್ಷೇತ್ರ ಬಗ್ಗೆ ದರ್ಶನ ಮೌನ
ಹೀಗಾಗಿ ಗುರುವಾರ ರೈಲ್ವೆ ನಿಲ್ದಾಣದಲ್ಲಿ ಬಸಂತಿಗೆ 3 ಸಾವಿರ ಫಿಕ್ಸ್ ಮಾಡಿ ಹರಾಜು ಕೂಗಿದ್ದಾರೆ. ಆದರೆ ಯಾರೂ ಅದನ್ನು ಖರೀದಿಸಲು ಮುಂದೆ ಬರಲಿಲ್ಲ. ಹೀಗಾಗಿ ದರ 2500ಕ್ಕೆ ಇಳಿಯಿತು. ಈ ವೇಳೆ ಪಶ್ಚಿಮ ಬಂಗಾಳದ ಅಬ್ದುಲ್ ರೆಹಮಾನ್ (48) ಏಲಂ ಕೂಗಿ ಬಸಂತಿಯ ಮಾಲೀಕನಾಗಿದ್ದಾರೆ.
ಬಸಂತಿಯ ಹರಾಜು ಸುದ್ದಿ ಕೇಳಿದ ಮಾಧ್ಯಮಗಳು ಅಬ್ದುಲ್ ರೆಹಮಾನ್ ಅವರನ್ನು ಮಾತನಾಡಿಸಿದ್ದು “ ಈ ಮೇಕೆಯನ್ನು ಯಾವುದೇ ಕಾರಣಕ್ಕೂ ಕೊಲ್ಲುವುದಿಲ್ಲ. ಇದಕ್ಕಾಗಿ ಮನೆ ಬಳಿ ಶೆಡ್ ಕಟ್ಟುತ್ತೇನೆ. ತಾನು ದುಡಿದು ಉಳಿಸಿದ ಹಣದಲ್ಲಿ ಇದನ್ನು ಖರೀದಿಸಿದ್ದೇನೆ” ಎಂದಿದ್ದಾರೆ.
Chandan shetty Side line in Kannada kogile
ಅಂದ ಹಾಗೇ ಮುಂಬೈ ಲೋಕಲ್ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ 256 ರೂ. ದಂಡ ವಿಧಿಸಲಾಗುತ್ತದೆ. ಆದರೆ ಬಸಂತಿಯನ್ನು ಹರಾಜು ಹಾಕುವ ಮೂಲಕ 2500 ರೂಪಾಯಿಯನ್ನು ರೈಲ್ವೆ ಇಲಾಖೆ ಸಂಪಾದಿಸಿದೆ. ಅಲ್ಲಿಗೆ 10 ಪಟ್ಟು ಹೆಚ್ಚು ಲಾಭ ರೈಲ್ವೆ ಇಲಾಖೆಗೆ ಬಂದ ಹಾಗಾಯ್ತು.
Discussion about this post