ಕರಾವಳಿಯ ಹುಡುಗಿ ಅನುಶ್ರೀ ಮಾಡಿದ ಸಾಧನೆಗೆ ಎಲ್ಲರೂ ಹೆಮ್ಮೆ ಪಡಲೇಬೇಕು. ನಮ್ಮ ಟಿವಿ ಅನ್ನುವ ಮನೋರಂಜನಾ ವಾಹಿನಿಯಲ್ಲಿ ಕಾಣಿಸಿಕೊಂಡ ಅನುಶ್ರೀ ನಂತ್ರ ಹಿಂತಿರುಗಿ ನೋಡಲಿಲ್ಲ. ಬದುಕಿನಲ್ಲಿ ಬಂದ ಸಂಕಷ್ಟಗಳನ್ನು ಮೆಟ್ಟಿ ನಿಂತ ಛಲಗಾತಿ ಈಕೆ.
ಹಾಗಾದ್ರೆ ಎಲ್ಲವೂ ಅನುಶ್ರೀ ಅವರ ಸಾಧನೆಯ ಫಲವೇ, ಖಂಡಿತಾ ಹೌದು ಆದರೆ ಅನುಶ್ರೀ ಪ್ರಕಾರ ಅವರ ಈ ಸಾಧನೆಯ ಬೆನ್ನ ಹಿಂದಿರುವುದು ಬೇರೆಯೇ ಶಕ್ತಿಯಂತೆ.
ಇತ್ತೀಚೆಗೆ ಮಂಗಳೂರು ಸಮೀಪದ ಗುರುಪುರ ಸತ್ಯದೇವತೆ ಧರ್ಮದೇವತೆ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಬದುಕಿನಲ್ಲಿ ಮೂರು ಹೊತ್ತು ತುತ್ತು ಮತ್ತು ನೆಮ್ಮದಿ ನಿದ್ದೆ ಮಾಡುತ್ತೇನೆ ಅಂದ್ರೆ ಅದಕ್ಕೆ ಕಾರಣ ಈ ದೈವಿಶಕ್ತಿ ಅನ್ನುವುದನ್ನು ಹೇಳಿದ್ದಾರೆ.
Discussion about this post