ಬೆಂಗಳೂರು : ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ವಿಧಿಸಿದ್ದ ವೀಕೆಂಡ್ ಕರ್ಫ್ಯೂವನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದ ಜಿಲ್ಲೆಗಳಲ್ಲಿ ಶೇ.2 ಕ್ಕಿಂತ ಕಡಿಮೆ ಪಾಸಿಟಿವಿಟ್ ದರ ಇರೋ ಕಾರಣ ವೀಕೆಂಡ್ ಕರ್ಫ್ಯೂ ಹಿಂತೆಗೆದುಕೊಳ್ಳುವ ಬಗ್ಗ ಆದೇಶಿಸಿದೆ. ಒಂದು ವೇಳೆ ಗಡಿ ಜಿಲ್ಲೆಗಳಲ್ಲಿ ಮತ್ತೆ ಸೋಂಕು ಏರಿದರೆ ಆಯಾ ಜಿಲ್ಲಾಧಿಕಾರಿಗಳೇ ಕರ್ಫ್ಯೂ ವಿಧಿಸುವ ಅಧಿಕಾರ ನೀಡಲಾಗಿದೆ. ಹೀಗಾಗಿ ಇನ್ಮುಂದೆ ವೀಕೆಂಡ್ ಕರ್ಫ್ಯೂ ವಿಧಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಸೇರಿರುತ್ತದೆ.
ಈ ಹಿಂದೆ ವಿಕೇಂಡ್ ಕರ್ಫ್ಯೂ ರದ್ದುಗೊಳಿಸುವಂತೆ ದಕ್ಷಿಣ ಕನ್ನಡಲ್ಲಿ ದೊಡ್ಡ ಹೋರಾಟ ಪ್ರಾರಭವಾಗಿತ್ತು. ಕಳೆದ ವಾರ ಅಂಗಡಿಗಳನ್ನು ತೆರೆದಿಟ್ಟು ನಾವು ಪ್ರತಿಭಟನೆ ಮಾಡುತ್ತೇವೆ, ಕೇಸ್ ಬೇಕಿದ್ರೆ ಹಾಕಿಕೊಳ್ಳಿ ಎಂದು ಸವಾಲು ಎಸೆದಿದ್ದರು. ಈ ವೇಳೆ ವರ್ತಕರ ಮನವೊಲಿಸಿದ್ದ ಜಿಲ್ಲಾಧಿಕಾರಿಗಳು ಪಾಯಸ ಆಗೋ ತನಕ ಕಾಯ್ದು, ತಿನ್ನೋವಾಗ ಇಲ್ಲ ಅಂದ್ರೆ ಹೇಗೆ ಅಂದಿದ್ದರು.
ಜಿಲ್ಲಾಧಿಕಾರಿಗಳ ಮನವಿಯಂತೆ ವರ್ತಕರು ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿದಿದ್ದರು. ಇದೀಗ ರಾಜ್ಯ ಸರ್ಕಾರವೇ ವೀಕೇಂಡ್ ಕರ್ಫ್ಯೂ ರದ್ದುಗೊಳಿಸಿರುವುದರಿಂದ ನಾಳೆ ರಾತ್ರಿಯಿಂದ ಜಾರಿಯಾಗಬೇಕಾಗಿದ್ದ ವೀಕೇಂಡ್ ಕರ್ಫ್ಯೂ ಇರೋದಿಲ್ಲ.
Discussion about this post