ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಆಶ್ರಯದಲ್ಲಿ ಮುಸ್ಲಿಂ ಸಮುದಾಯದಿಂದ ಮಳೆಗಾಗಿ ಸಾಮೂಹಿಕ ವಿಶೇಷ ನಮಾಝ ಮತ್ತು ಪ್ರಾರ್ಥನೆ ನಗರದ ನೆಹರು ಮೈದಾನದಲ್ಲಿ ಬುಧವಾರ ನಡೆಯಿತು.
ಧರ್ಮ ಗುರು ಶೇಖ್ ಸಾಕಿಬ್ ಸಲೀಂ ಉಮ್ರಿ ಅವರು ನಮಾಝ್ ಮತ್ತು ಪ್ರವಚನ ನೆರವೇರಿಸಿ,
ಜಗತ್ತಿನಲ್ಲಿ ದಾನ ಧರ್ಮಗಳನ್ನು ಮಾಡದೆ, ತೂಕ ಅಳತೆಯಲ್ಲಿ ಮೋಸ, ಅನ್ಯಾಯ, ಅಕ್ರಮಗಳನ್ನು ಮಾಡಿ, ಮಾನವೀಯತೆ ಮರೆತಾಗಲೆಲ್ಲಾ ಮಳೆ ಕೊರತೆಯಾದ, ಹೆಚ್ಚಿನ ಮಳೆಯಿಂದ ಜಲಪ್ರಳಯವಾದ ಉದಾಹರಣೆಗಳಿವೆ. ಮಳೆ ಇಲ್ಲದೆ ನೀರಿನ ಕೊರತೆಯಿಂದ ಮನುಷ್ಯ ಮಾತ್ರವಲ್ಲ, ಪ್ರಾಣಿ, ಪಕ್ಷಿ, ಜೀವ ಜಂತು, ಮರ ಗಿಡ ಸಹಿತ ಇಡೀ ಜೀವ ಸಂಕುಲವೇ ಸಂಕಷ್ಟದಲ್ಲಿದೆ. ದೇವರು ನೀಡುವ ನೀರನ್ನು ಪೋಲು ಮಾಡದೆ, ಜಾಗ್ರತೆ ವಹಿಸಬೇಕು ಎಂದು ಇಸ್ಲಾಮ್ ಕಲಿಸುತ್ತದೆ ಎಂದರು.
ಈ ವೇಳೆ ಮಾತನಾಡಿದ SKSM ನ ಎಂ.ಜಿ.ಮೊಹಮ್ಮದ್ ಜನರು ಅಕ್ರಮ, ಅನ್ಯಾಯದಲ್ಲಿ ತೊಡಗಿದಾಗ ಇಂಥ ಪ್ರಕೃತಿ ವೈಪರೀತ್ಯಗಳು ಬರುತ್ತಿದ್ದು, ಅದರ ನಿವಾರಣೆಗೆ ಪ್ರಾರ್ಥನೆ ಮಾಡಬೇಕೆಂದು ಪ್ರವಾದಿ ಹೇಳಿದ ಮಾದರಿಯಲ್ಲಿ ನಾವು ಪ್ರಾರ್ಥನೆ ಮಾಡಿದ್ದೇವೆ ಎಂದರು.
ಬೆಳ್ಳಂಬೆಳಗ್ಗೆ ನಡೆದ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಡಿ.ಕಾಮತ್ ಉಪಸ್ಥಿತರಿದ್ದರು.
Discussion about this post