Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಮಠದ ಜಮೀನಿನಲ್ಲಿ ಕಾಡು ಬೆಳೆಸುವ ಸಂಕಲ್ಪ – ಸೋದೆ ಮಠಾಧೀಶರ ತ್ರಿವಿಕ್ರಮ ಹೆಜ್ಜೆ

Radhakrishna Anegundi by Radhakrishna Anegundi
July 20, 2021
in ರಾಜ್ಯ
tree
Share on FacebookShare on TwitterWhatsAppTelegram

ಉಡುಪಿ ಅಷ್ಟಮಠಗಳ ತರುಣ ಯತಿಗಳಲ್ಲಿ ಓರ್ವರಾಗಿರುವ , ಅತ್ಯಂತ ತಾರುಣ್ಯದಲ್ಲೇ ಇಂಜಿನಿಯರಿಂಗ್ ಸ್ಥಾಪಿಸುವ ಮೂಲಕ ಸಮಸ್ತ ಕೃಷ್ಣ ಭಕ್ತರೂ  ಹುಬ್ಬೇರಿಸುವಂತೆ ಮಾಡಿದ ಶ್ರೀ ಸೋದೆ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮತ್ತೊಂದು ಕ್ರಾಂತಿಕಾರ್ಯದ ಹೆಜ್ಜೆ ಇಡುವ ಮೂಲಕ ಮತ್ತೊಮ್ಮೆ ನಾಡಿನ ಗಮನಸೆಳೆದಿದ್ದಾರೆ .

ಕುಂದಾಪುರ ತಾಲೂಕಿನ ಹೂವಿನಕೆರೆಯಲ್ಲಿ (ಪ್ರಾತಃ ಸ್ಮರಣೀಯರಾದ  ಶ್ರೀ ವಾದಿರಾಜಗುರುಸಾಋವಭೌಮರ ಜನ್ಮಭೂಮಿ)  ಶ್ರೀ ಮಠದ ಅಧೀನದಲ್ಲಿರುವ 116 ಎಕ್ರೆ ಅಮೂಲ್ಯ ಜಮೀನಿನಲ್ಲಿ ಭವಿಷ್ಯದ ಉದ್ದೇಶಗಳಿಗಾಗಿ ಶ್ರೀಗಂಧ ಸಾಗುವಾಗಿ ಹೆಬ್ಬಲಸು ಹಲಸು ಮೊದಲಾದ ವೃಕ್ಷಸಂಕುಲಗಳನ್ನು ಪೋಷಿಸಿ ಬೆಳೆಸುವ ಮಹತ್ವದ ಕೆಲಸಕ್ಕೆ ಶ್ರೀಪಾದರು ನಿನ್ನೆ ( ಶುಕ್ರವಾರ 16/7/2021)  ನಾಂದಿ ಹಾಕಿದ್ದಾರೆ . ಪ್ರಕೃತಿ ಪ್ರಿಯರು , ಸಸ್ಯಪ್ರೇಮಿಗಳಿಗೆ ಇದೊಂದು ಹೆಚ್ಚು ಸಂತೋಷ ಕೊಡುವ ಸುದ್ದಿ . ಅದೇರೀತಿ ನಾಡಿನ ಎಲ್ಲ ಮಠ ಮಾನ್ಯರಿಗೂ ಅನುಕರಣೀಯವಾದ ಕಾರ್ಯಕ್ರಮ .

ಇವತ್ತು ನಾಡಿನಲ್ಲಿ ನೂರಾರು ಮಠಗಳು ಸಾವಿರಾರು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡು ಕೆಲಸಮಾಡುತ್ತಿವೆ . ಬಹುಕಾಲ‌ ಇಂಥಹ ಲೋಕೋತ್ತರಕಾರ್ಯಗಳು ನಡೆಯಬೇಕು . ಆದರೆ ಅವುಗಳಿಗಾಗಿ ಆರ್ಥಿಕ ಸಂಪನ್ಮೂಲಗಳನ್ನೂ ಹೊಂದಿಸಿಕೊಳ್ಳಬೇಕು . ಆ ಹಿನ್ನೆಲೆಯಲ್ಲಿ ಇಂಥಾ ದೂರಗಾಮಿ ಕಾರ್ಯಗಳು ಅತೀ ಅವಶ್ಯವಾಗ್ತವೆ .

tree2

ನಮ್ಮಲ್ಲಿ  ಅನೇಕ ಪ್ರಾಚೀನ ಮಠಗಳಲ್ಲಿ ಇನ್ನೂ ಒಂದಷ್ಟು ಭೂಮಿಗಳು ಉಳಿದಿರುವುದು ಸಮಾಧಾನದ ಸಂಗತಿ ( ಭೂ ಮಸೂದೆ ಕಾನೂನಿನಿಂದಾಗಿ ಉಡುಪಿಯ ಮಠಗಳೂ ಸೇರಿದಂತೆ ನಾಡಿನ ನೂರಾರು ಮಠಗಳ ಸಾವಿರಾರು ಎಕರೆಗಟ್ಟಲೆ ಭೂಮಿ ಪರಭಾರೆ ಆಯಿತು . ಇರಲಿ ಬಿಡಿ ಅದರಿಂದ ಒಂದಿಷ್ಟು ಕುಟುಂಬಗಳಿಗೆ ಬದುಕು ಲಭಿಸಿದೆ ) ಹಾಗೆ ಉಳಿದ ಭೂಮಿಯಲ್ಲಿ ಈ ರೀತಿ ಕಾಡು ಬೆಳೆಸುವುದರಿಂದ ಪ್ರಕೃತಿಗೂ ಒಂದಷ್ಟು ಶಕ್ತಿ ತುಂಬಿದಂತಾಗುತ್ತದೆ  ಹಾಗೂ ಮಠಗಳ ಭವಿಷ್ಯಕ್ಕೆ ಒಂದಷ್ಟು ಆರ್ಥಿಕ ಸಂಪನ್ಮೂಲಗಳೂ ದೊರೆಯುತ್ತವೆ . ವಾಣಿಜ್ಯದ (ಆರ್ಥಿಕ) ಉದ್ದೇಶಕಾಗಿ ಹಲಸು ಹೆಬ್ಬಲಸು ಸಾಗುವಾನಿ , ರಕ್ತಚಂದನ , ಶ್ರೀಗಂಧದಂಥಹ ಮರಗಳನ್ನು ಬೆಳೆಸುವುದರಿಂದ ಬೇರೆ ಹೂಡಿಕೆಗಿಂತಲೂ ಹೆಚ್ಚು ಆದಾಯ ದೊರೆಯುವುದರಲ್ಲಿ ಸಂದೇಹವೇ ಇಲ್ಲ . ಜೊತೆಗೆ ಪ್ರಕೃತಿಯ ಪೋಷಣೆ ಮಾಡಿದ ಆತ್ಮ ಸಂತೋಷ,  ಅದು ಬೆಲೆಕಟ್ಟಲಾಗದ್ದು . ಅದರೆ ಜೊತೆಗೆ ಒಂದಷ್ಟು ಹಣ್ಣುಕೊಡುವ ಇತರೆ ಮರಗಳನ್ನೂ ಆ ಪ್ರದೇಶಗಳಲ್ಲಿ ಬೆಳೆಸಿದರೆ ಅಸಂಖ್ಯ ಪಕ್ಷಿ ಪ್ರಾಣಿ ಸಂಕುಲಗಳಿಗೆ ಜೀವಪೋಷಣೆ ಕೊಟ್ಟ ಪಾರಮಾರ್ಥಿಕ ಮಹಾಪುಣ್ಯವೂ ಲಭ್ಯವಾಗುತ್ತದೆ.

ಇಂಥ ಎಲ್ಲ ಅಮೂಲ್ಯ  ಕಾರಣಗಳಿಂದ ಶ್ರೀ ಸೋದೆ ಮಠಾಧೀಶರು ನಡೆಸಿದ ಚಿಂತನೆ ಹಾಗೂ ಮಠದ ಲಭ್ಯ ಜಮೀನಿನಲ್ಲಿ ಕಾಡುಬೆಳೆಸುವ ಕೆಲಸಕ್ಕೆ ಎಷ್ಟು ಅಭಿವಂದನೆ ಹೇಳಿದರೂ ಕಡಿಮೆ .

ಕಳಕೊಂಡ ಭೂಮಿ ಬಹಳ ಇರಬಹುದು .ಆದರೆ ಉಳಿದದ್ದನ್ನು ಉಳಿಸಿಕೊಳ್ಳುವ ಮತ್ತು ಅದನ್ನು ಹಾಗೇ ಪಾಳುಬಿಡದೇ ಹೆಚ್ಚು ಸದ್ಬಳಕೆ ಮಾಡಿಕೊಳ್ಳುವ ಕಾರ್ಯಗಳಿಗೆ ಹೆಚ್ಚುಗಾರಿಕೆ ಇದೆ .‌

ನಾಡಿನ ಎಲ್ಲ ಮಠಗಳೂ ಇಂಥಹ ಆತ್ಮನಿರ್ಭರೋಪಾಯಗಳನ್ನು ಮಾಡಿಕೊಂಡು ತಾವು ಸುದೃಢ , ಸಶಕ್ತ ಸ್ವಾವಲಂಬಿ  ಆಗುವುದರ ಜೊತೆಗೆ ದೇಶವನ್ನೂ ಸಮೃದ್ಧಗೊಳಿಸುವ ಇಂಥಹ ಮಹತ್ವದ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತಾ , ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಗೆ ಅಭಿನಂದನಾಪೂರ್ವಕ ಅಭಿವಂದನೆಗಳನ್ನು ಸಲ್ಲಿಸುತ್ತೇನೆ . ಶ್ರೀಗಳು ಈಗ ಹಮ್ಮಿಕೊಂಡ ಕಾರ್ಯದಲ್ಲಿ ಅತ್ಯಪೂರ್ವ ಯಶಸ್ಸು ದೊರೆಯಲಿ . ಸದ್ಯದಲ್ಲೇ ಆ ಭೂಮಿಯಲ್ಲಿ ಸುಂದರ ಸಮೃದ್ಧ ವನ ಮೂಡಿಬರಲಿ .

ಜಿ ವಾಸುದೇವ ಭಟ್ ಪೆರಂಪಳ್ಳಿ

ShareTweetSendShare

Discussion about this post

Related News

nikhil kumaraswamy Karnataka polls Nikhil to contest from Ramanagara

Nikhil kumaraswamy:ಮಂಡ್ಯಕ್ಕೆ ಕೈ ಕೊಟ್ಟ ನಿಖಿಲ್ : ರಾಮನಗರದಿಂದ ಕುಮಾರಸ್ವಾಮಿ ಪುತ್ರ ಕಣಕ್ಕೆ

zika virus First case detected in Karnataka Health Minister

Zika Virus  : ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್‌ ಪತ್ತೆ : ಖಚಿತಪಡಿಸಿದ ಸಚಿವ : ರಾಜ್ಯದಲ್ಲಿ ಆತಂಕ

Shashi Kumar BJP  : ಚಿತ್ರನಟ ಶಶಿಕುಮಾರ್ ಬಿಜೆಪಿಗೆ :  ಸೋಲಿನ ಭೀತಿಯ ಪಕ್ಷಕ್ಕೆ ಪಕ್ಷಾಂತರಿ ಎಕ್ಸ್ ಪರ್ಟ್

lokayukta : ಮೊದಲು ಎಸಿಬಿ ಈಗ ಲೋಕಾಯುಕ್ತ : ಬೆಸ್ಕಾಂ ಎಇ ತಿಂದು ತೇಗಿದೆಷ್ಟು..?

praveen nettar : ನೆಟ್ಟಾರು ಪತ್ನಿಗೆ ಸಿಎಂ ಕಚೇರಿಯಲ್ಲಿ ಉದ್ಯೋಗ : ಆಕ್ರೋಶ ಶಮನಕ್ಕೆ ಕಣ್ಣೊರೆಸುವ ತಂತ್ರ

Karnataka Politics : ಕಟೀಲ್ ವಿದೂಷಕ : ಸಿದ್ದರಾಮಯ್ಯ ನರಹಂತಕ : ಪಾವನವಾಯ್ತು ಕರ್ನಾಟಕ

BJP Meeting : ಕಾಂಗ್ರೆಸ್ ಗೆ ತನಿಖೆ ಬೆದರಿಕೆ : ಕೈ ನಾಯಕರ ಬಾಯಿ ಮುಚ್ಚಿಸಲು ಬಿಜೆಪಿ ಹೊಸ ನಾಟಕ

Murugha Shree Arrest : ಕೊನೆಗೂ 6 ದಿನಗಳ ಬಳಿಕ ಮುರುಘಾ ಶ್ರೀಗಳನ್ನು ವಶಕ್ಕೆ ಪಡೆದ ಪೊಲೀಸರು

Muddahanume gowda : ಇದಪ್ಪ ರಾಜೀನಾಮೆ ಅಂದ್ರೆ : ಗೌರವಯುತವಾಗಿ ಕಾಂಗ್ರೆಸ್ ನಿಂದ ಹೊರ ಬರಲು ನಿರ್ಧರಿಸಿದ ಮುದ್ದಹನುಮೇ ಗೌಡ

Pramod muthalik :ಎಡಿಜಿಪಿ ಅಲೋಕ್ ಕುಮಾರ್ ಅವರೇ ಕ್ಷಮೆ ಕೇಳಿ : ಮುತಾಲಿಕ್ ಆಗ್ರಹದ ಕಾರಣ ಗೊತ್ತಾ…?

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್