Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

siri vaibhava ದಿಂದ ಮಹಾವಂಚನೆ : ಬೆಂಗಳೂರಿನಲ್ಲಿ ಮುಳುಗಿದ ಮತ್ತೊಂದು ಸೌಹಾರ್ದ ಸಹಕಾರ ಬ್ಯಾಂಕ್

Radhakrishna Anegundi by Radhakrishna Anegundi
July 18, 2022
in ರಾಜ್ಯ
siri-vaibhava-souharda-pattina-co-operative-society-fraud-subramanyapura-police-arrest-2-persons-nagavalli
Share on FacebookShare on TwitterWhatsAppTelegram

Siri Vaibhava Souharda Pattina Co op Society:  ಅಧಿಕ ಬಡ್ಡಿ ಆಸೆ ತೋರಿಸಿ ಸಾವಿರಾರು ಹೂಡಿಕೆದಾರರಿಂದ ನೂರಾರು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ, ಸೂಕ್ತ ದಾಖಲೆ ಪಡೆಯದೆ ಕೋಟಿ ಕೋಟಿ ಸಾಲ ನೀಡಿರುವುದೇ ಈ ಪತನಕ್ಕೆ ಕಾರಣ ಅನ್ನಲಾಗಿದೆ

ಬೆಂಗಳೂರು : ಕೆಲ ಸಹಕಾರಿ ರಂಗದ ಬ್ಯಾಂಕ್ ಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಸಹಕಾರಿ ರಂಗಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದೆ. ಇತ್ತೀಚಿನ ದಿನಗಳಲ್ಲಿ ನಗರ ಕೇಂದ್ರಿಕೃತವಾಗಿರುವ ಸಹಕಾರಿ ಬ್ಯಾಂಕ್ ಗಳು ಮುಳುಗುವ ಹಡಗು ಅನ್ನಿಸಿಕೊಂಡಿದೆ. ಈ ಸಾಲಿಗೆ ಹೊಸ ಸೇರ್ಪಡೆ Siri Vaibhava Souharda Pattina Co op Society.

ಉತ್ತರಹಳ್ಳಿ, ಆರ್.ಆರ್.ನಗರ, ಬಿಳೆಕಳ್ಳಿ ಮತ್ತು ಬಸವೇಶ್ವನಗರ ಗಳಲ್ಲಿ ಸಿರಿವೈಭವ ಪತ್ತಿನ ಸಂಘದ ಬ್ರಾಂಚ್ ಗಳು ಕಾರ್ಯನಿರ್ವಹಿಸುತ್ತಿದೆ.ಯಾವಾಗ ಬ್ಯಾಂಕಿನ ವ್ಯವಹಾರ ಸರಿ ಇಲ್ಲ ಅನ್ನುವುದು ಗೊತ್ತಾಯ್ತೋ, ಸಂಯುಕ್ತ ಸಹಕಾರ ಬ್ಯಾಂಕ್ ಗೆ ದೂರು ನೀಡಲಾಗಿತ್ತು. ಠೇವಣಿದಾರರಿಗೆ ಬಡ್ಡಿ ಮತ್ತು ಠೇವಣಿ ಮರುಪಾವತಿಯಲ್ಲಿ ಬ್ಯಾಂಕ್ ಮಹಾಪ್ರಮಾದ ಎಸಗಿದೆ.

ಇದನ್ನೂ ಓದಿ : siddaramosthava : ರಾಹುಲ್ ಗಾಂಧಿ ಬರ್ತಾರೆ ಆದರೆ ಸರಿಯಾಗಿ ನಡೆಸಿಕೊಳ್ಳಿ : ರಾಜ್ಯ ಕಾಂಗ್ರೆಸ್ ಗೆ ಹೈಕಮಾಂಡ್ ಸೂಚನೆ

ಈ ಸಂಬಂಧ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ ಪಾಟೀಲ್ ಅವರು ಉತ್ತರಹಳ್ಳಿ ಮುಖ್ಯ ರಸ್ತೆ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ನ ಹಿಂದಿನ ಆಡಳಿತ ಮಂಡಳಿ ಮತ್ತು ಪ್ರಸ್ತುತ ಆಡಳಿತ ಮಂಡಳಿ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ದೂರಿನ ಆಧಾರದಲ್ಲಿ 14 ಮಂದಿ ವಿರುದ್ಧ FIR ದಾಖಲಾಗಿದ್ದು, ಸಿರಿವೈಭವ ಪತ್ತಿನ ಸಂಘದ ಅಧ್ಯಕ್ಷೆ ನಾಗವಲ್ಲಿ, ಹಾಗೂ ಆಕೆಯ ಪತಿ ರಾಜೇಶ್ ವಿ ಆರ್ ದಂಪತಿಯನ್ನ ಸುಬ್ರಮಣ್ಯಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಿರಿವೈಭವ ಪತ್ತಿನ ನಿಯಮಿತ ಸಹಕಾರ ಸಂಘದ (Siri Vaibhava Souharda Pattina Co operative Society) ನಾಲ್ಕು ಬ್ರಾಂಚ್ ನಿಂದ ಅಂದಾಜು 2,000 ಹೂಡಿಕೆದಾರರಿಗೆ ವಂಚನೆಯಾಗಿದೆ.

2020-21 ನೇ ಸಾಲಿನಲ್ಲಿ 64.63 ಕೋಟಿ ರೂಪಾಯಿ ,ಸಾಲ ನೀಡಲಾಗಿದೆ. ಈ ಪೈಕಿ ಹೆಚ್ಚಿನ ಮೊತ್ತವನ್ನು ಸಿರಿವೈಭವ ಪತ್ತಿನ ಸಂಘದ ಅಧ್ಯಕ್ಷೆ ನಾಗವಲ್ಲಿ, ಹಾಗೂ ಆಕೆಯ ಪತಿ ರಾಜೇಶ್.ವಿ.ಆರ್ ಅವರಿಗೆ ಸೇರಿದ ಸಂಸ್ಥೆಗಳಿಗೆ ನೀಡಲಾಗಿದೆ. ಇದಕ್ಕೆ ಸೂಕ್ತ ದಾಖಲೆಗಳನ್ನು ಕೂಡಾ ನೀಡಲಾಗಿಲ್ಲ. ಈ ಸಾಲಕ್ಕೆ ಯಾವುದೇ ಭದ್ರತೆಯನ್ನೂ ನೀಡಲಾಗಿಲ್ಲ. ಜೊತೆಗೆ 64.63 ಕೋಟಿ ರೂಪಾಯಿ ಸಾಲ ಸುಸ್ತಿಯಾಗಿರುವುದು ಪತ್ತೆಯಾಗಿದೆ.

siri vaibhava1

ಹೈಕೋರ್ಟ್ ಜಡ್ಜ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಲಂಚ ಪಡೆದ ಡಿಸಿ

ಸರ್ಕಾರದ ಹಿಡಿತಕ್ಕೆ ಸಿಗದ ಕೆಲ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ರಾಜ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಗಳೇ ಲಂಚ ಮೇಯುತ್ತಿದ್ದಾರೆ ಅಂದ್ರೆ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಅನುಮಾನ ಶುರುವಾಗಿದೆ.

ಬೆಂಗಳೂರು : ಲಂಚ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಹೈಕೋರ್ಟ್ ಜಡ್ಜ್ ಎಚ್.ಪಿ. ಸಂದೇಶ್ ಮಾಡಿರುವ ಟೀಕೆಯನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ.

ತಮ್ಮ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತಮ್ಮ ವಿರುದ್ಧ ಅನಪೇಕ್ಷಿತ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ತಮ್ಮ ವಿರುದ್ಧ ಮೀಡಿಯಾ ಟ್ರಯಲ್ ಶುರುವಾಗಿದೆ ಅನ್ನುವುದು ಮಂಜುನಾಥ್ ಅಳಲು.

ಹೀಗಾಗಿ ನ್ಯಾಯ ಕೊಡಿ ಎಂದು ಮಂಜುನಾಥ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸಲ್ಲಿಸಿರುವ ಅರ್ಜಿಗಳ ಜೊತೆಗೆ ಮಂಜುನಾಥ್ ಅರ್ಜಿಯೂ ಇಂದು ವಿಚಾರಣೆಗೆ ಬರಲಿದೆ. ಲಂಚ ಪ್ರಕರಣದಲ್ಲಿ ಜೈಲು ಸೇರಿರುವ ಮಂಜುನಾಥ್ ಈಗಾಗಲೇ ಅಮಾನತುಗೊಂಡಿದ್ದಾರೆ. ಒಬ್ಬ ಜಿಲ್ಲಾಧಿಕಾರಿ ಅದು ಕೂಡಾ ವಿಧಾನಸೌಧದಿಂದ ಒಂದಿಷ್ಟು ದೂರದಲ್ಲೇ ಕೂತು ಲಂಚ ತಿಂದಿದ್ದಾನೆ ಅಂದ್ರೆ ಆತನ ಪ್ರಭಾವ ಎಷ್ಟರ ಮಟ್ಟಿಗೆ ಇರಬಹುದು. ಸರ್ಕಾರದ ಭಯವೇ ಇಲ್ಲದ ಅಧಿಕಾರಿ ಆತನಾಗಿರಬೇಕು ಅಥವಾ ಸರ್ಕಾರದ ಕೃಪಾಕಟಾಕ್ಷವಿರಬೇಕು.

Tags: FEATURED
ShareTweetSendShare

Discussion about this post

Related News

nikhil kumaraswamy Karnataka polls Nikhil to contest from Ramanagara

Nikhil kumaraswamy:ಮಂಡ್ಯಕ್ಕೆ ಕೈ ಕೊಟ್ಟ ನಿಖಿಲ್ : ರಾಮನಗರದಿಂದ ಕುಮಾರಸ್ವಾಮಿ ಪುತ್ರ ಕಣಕ್ಕೆ

zika virus First case detected in Karnataka Health Minister

Zika Virus  : ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್‌ ಪತ್ತೆ : ಖಚಿತಪಡಿಸಿದ ಸಚಿವ : ರಾಜ್ಯದಲ್ಲಿ ಆತಂಕ

Shashi Kumar BJP  : ಚಿತ್ರನಟ ಶಶಿಕುಮಾರ್ ಬಿಜೆಪಿಗೆ :  ಸೋಲಿನ ಭೀತಿಯ ಪಕ್ಷಕ್ಕೆ ಪಕ್ಷಾಂತರಿ ಎಕ್ಸ್ ಪರ್ಟ್

lokayukta : ಮೊದಲು ಎಸಿಬಿ ಈಗ ಲೋಕಾಯುಕ್ತ : ಬೆಸ್ಕಾಂ ಎಇ ತಿಂದು ತೇಗಿದೆಷ್ಟು..?

praveen nettar : ನೆಟ್ಟಾರು ಪತ್ನಿಗೆ ಸಿಎಂ ಕಚೇರಿಯಲ್ಲಿ ಉದ್ಯೋಗ : ಆಕ್ರೋಶ ಶಮನಕ್ಕೆ ಕಣ್ಣೊರೆಸುವ ತಂತ್ರ

Karnataka Politics : ಕಟೀಲ್ ವಿದೂಷಕ : ಸಿದ್ದರಾಮಯ್ಯ ನರಹಂತಕ : ಪಾವನವಾಯ್ತು ಕರ್ನಾಟಕ

BJP Meeting : ಕಾಂಗ್ರೆಸ್ ಗೆ ತನಿಖೆ ಬೆದರಿಕೆ : ಕೈ ನಾಯಕರ ಬಾಯಿ ಮುಚ್ಚಿಸಲು ಬಿಜೆಪಿ ಹೊಸ ನಾಟಕ

Murugha Shree Arrest : ಕೊನೆಗೂ 6 ದಿನಗಳ ಬಳಿಕ ಮುರುಘಾ ಶ್ರೀಗಳನ್ನು ವಶಕ್ಕೆ ಪಡೆದ ಪೊಲೀಸರು

Muddahanume gowda : ಇದಪ್ಪ ರಾಜೀನಾಮೆ ಅಂದ್ರೆ : ಗೌರವಯುತವಾಗಿ ಕಾಂಗ್ರೆಸ್ ನಿಂದ ಹೊರ ಬರಲು ನಿರ್ಧರಿಸಿದ ಮುದ್ದಹನುಮೇ ಗೌಡ

Pramod muthalik :ಎಡಿಜಿಪಿ ಅಲೋಕ್ ಕುಮಾರ್ ಅವರೇ ಕ್ಷಮೆ ಕೇಳಿ : ಮುತಾಲಿಕ್ ಆಗ್ರಹದ ಕಾರಣ ಗೊತ್ತಾ…?

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್