ಬೆಂಗಳೂರು : ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಕುರಿತಾದ ಪುಸ್ತಕವೊಂದು ಹೊರ ಬರಲು ಸಿದ್ದವಾಗಿದೆ.
ಪತ್ರಕರ್ತ ಶರಣು ಹುಲ್ಲೂರು ಈ ಪುಸ್ತಕವನ್ನು ಬರೆದಿದ್ದು ಅನಂತವಾಗಿರು ಎಂದು ಹೆಸರಿಡಲಾಗಿದೆ. ಜುಲೈ17 ಸಂಚಾರಿ ವಿಜಯ್ ಹುಟ್ಟುಹಬ್ಬದಂದೇ ಈ ಪುಸ್ತಕ ಬಿಡುಗಡೆಯಾಗಲಿದೆ.
ಇದೊಂದು ಬಯೋಗ್ರಫಿ ಮಾದರಿಯಲ್ಲೇ ಮುದ್ರಣಗೊಂಡಿರುವ ಪುಸ್ತಕವಾಗಿದ್ದು, ಪುಸ್ತಕದಲ್ಲಿ ವಿಜಯ್ ಅವರ ಬಾಲ್ಯ ಹಾಗೂ ಜೀವನದ ಬಗ್ಗೆ ಬರೆಯಲಾಗಿದೆ. ವಿಜಯ್ ಸಹೋದರರು ಮತ್ತು ಕುಟುಂಬ ಸದಸ್ಯರು ವಿಜಯ್ ಬಗ್ಗೆ ಬರೆದಿದ್ದು ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜೊತೆಗಿದ್ದವರು ಹಂಚಿಕೊಂಡ ನೆನೆಪುಗಳನ್ನು ಮುದ್ರಿಸಲಾಗಿದೆ.
Discussion about this post