ರಾಜ್ಯ ಸರ್ಕಾರದಿಂದ ನನಗ ಅನ್ಯಾಯವಾಗಿದೆ. ಕನ್ನಡಿಗನಾಗಿ ನನ್ನ ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ ರಾವ್, ಇದೀಗ ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೂ ಮೂರು ವರ್ಷ ಸೇವಾವಧಿ ಹೊಂದಿದ್ದ ರಾವ್ ಅವರ ರಾಜೀನಾಮೆ ಪತ್ರ ಅಂಗೀಕಾರವಾಗುವ ಎಲ್ಲಾ ಲಕ್ಷಣಗಳು ಕೂಡಾ ಗೋಚರಿಸಿದೆ.
ಈ ನಡುವೆ ರಾಜೀನಾಮೆ ನೀಡಿದ ಬಳಿಕ ಭಾಸ್ಕರ ರಾವ್ ರಾಜಕೀಯಗೆ ಬರ್ತಾರೆ, ಬಸವನಗುಡಿ ಅಥವಾ ಜಯನಗರ ಕ್ಷೇತ್ರದಿಂದ ವಿಧಾನಸಭೆ ಗೆ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾವ್ ಅವರ ರಾಜಕೀಯ ನಡೆ ಕೂಡಾ ಬದಲಾಗಿದೆಯಂತೆ.
ಆಸ್ಕರ್ ಫರ್ನಾಂಡಿಸ್ ಅಕಾಲಿಕ ನಿಧನದಿಂದ ತೆರವಾಗಿರುವ ರಾಜ್ಯ ಸಭಾ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾಸ್ಕರ ರಾವ್ ಆ ಸ್ಥಾನಕ್ಕೆ ಸ್ಪರ್ಧಿಸಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ ಅನ್ನಲಾಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಪ್ರಯತ್ನಗಳು ಕೂಡಾ ನಡೆದಿದೆಯಂತೆ. ಡೆಲ್ಲಿ ಮಟ್ಟದಲ್ಲೇ ಈ ಬಗ್ಗೆ ಕೆಲಸಗಳು ನಡೆದಿದ್ದು, ಕೈ ಪಾಳಯದ ಘಟಾನುಘಟಿ ನಾಯಕರು ಭಾಸ್ಕರ ರಾವ್ ಪರ ಬ್ಯಾಟ್ ಬೀಸಿದ್ದಾರಂತೆ.
ಅಚ್ಚರಿ ಅಂದ್ರೆ ಬಿಜೆಪಿ ನಾಯಕರಿಗೆ ಹತ್ತರವಾಗಿದ್ದ ಭಾಸ್ಕರ ರಾವ್ ಅದು ಹೇಗೆ ಅಷ್ಟು ಬೇಗ ಕಾಂಗ್ರೆಸ್ ಗೆ ಹತ್ತಿರವಾದರು ಅನ್ನುವುದೇ ಅರ್ಥವಾಗುತ್ತಿಲ್ಲ.
Senior IPS officer Bhaskar Rao, who is currently serving as the Additional Director General of Police, Railways in Karnataka has sought voluntary retirement from service on Thursday, triggering speculations over his entry into politics.
Discussion about this post