ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ. ಈ ಮೋದಿ ಅನ್ನೋ ಹೆಸರಿನವರೆಲ್ಲರೂ ಕಳ್ಳರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ತಮ್ಮನ್ನ ಚೌಕಿದಾರ್ ಎಂದು ಕರೆದುಕೊಳ್ಳುತ್ತಾರೆ. ಅದ್ರಲ್ಲೂ ಮೋದಿ ಅನ್ನೋ ಹೆಸರಿನವರೆಲ್ಲೂ ಕಳ್ಳರೇ. ನೀರವ್ ಮೋದಿ, ಲಲಿತ್ ಮೋದಿ, ಪ್ರಧಾನಿ ಮೋದಿ ಇವ್ರೆಲ್ಲಾ ಕಳ್ಳರು.
ಇದು ದೇಶವನ್ನ ಕೊಳ್ಳೆ ಹಡೆಯುವ ತಂಡ. ಈ ತಂಡ ದೇಶವನ್ನ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದೆ. ಬಿಜೆಪಿ ನೇತೃತ್ವದ ಮೋದಿ ಸರ್ಕಾರ ದೇಶದಲ್ಲಿ ಬರೋಬ್ಬರಿ 30 ಸಾವಿರ ಕೋಟಿ ಕಳ್ಳತನ ಮಾಡಲು ಅವಕಾಶ ಮಾಡಿಕೊಟ್ಟಿದೆ. ಯಾಕೆ ಮೋದಿ, ಮೋದಿ, ಮೋದಿ ಅನ್ನೋ ಹೆಸರಿನವರೆಲ್ಲರೂ ಕಳ್ಳರು? ಅಂತಾ ಪ್ರಶ್ನೆ ಮಾಡಿದರು.
ಐದು ವರ್ಷಗಳಲ್ಲಿ ಮೋದಿ ಮಾಡಿದ್ದೇನು? ಕರ್ನಾಟಕ ಸರ್ಕಾರ ಬಡ ರೈತರ ಸಾಲವನ್ನಾ ಮಾಡಿದೆ. ಭಾರತದ ಬಡ ರೈತರ ಸಾಲವನ್ನ ಮೋದಿ ಮನ್ನಾ ಮಾಡಿದ್ದಾರಾ? ಅನೀಲ್ ಅಂಬಾನಿಯನ್ನು ಆಲಂಗಿಸುತ್ತೀರಿ, ದೇಶದ ರೈತರ ಜೊತೆಗೆ ಆಲಂಗಿಸಿಕೊಳ್ಳಲ್ಲ. ಮೇಹುಲ್ ಚೋಕ್ಸಿ, ನೀರವ್ ಮೋದಿ, ವಿಜಯ್ ಮಲ್ಯಾ ಅಂತವರ ಜೊತೆ ಫೋಟೋ ತೆಗೆಸಿಕೊಳ್ಳುತ್ತಿರಿ. ಬಡ ರೈತರ ಜೊತೆ ಯಾಕೆ ಫೋಟೋ ತೆಗೆಸಿಕೊಳ್ಳುವುದಿಲ್ಲ ಅಂತಾ ಪ್ರಶ್ನೆ ಮಾಡಿದರು.
ದೇಶವನ್ನ ಒಟ್ಟುಗೂಡಿಸುವ ಬದಲಾಗಿ ಪ್ರಧಾನಿ ಮೋದಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. 2014ರಲ್ಲಿ ಈ ದೇಶದ ಮುಂದೆ ಎರಡು ಮೂರು ವಿಚಾರಗಳನ್ನ ಇಟ್ಟು ವೋಟ್ ಕೇಳಿದ್ದರು. ₹2 ಕೋಟಿ ಹಣವನ್ನ ವಾಪಸ್ ತರುತ್ತೇನೆ. ಉದ್ಯೋಗ ಸೃಷ್ಟಿಸುತ್ತೇನೆ. ಕಪ್ಪು ಹಣ ತಂದು ದೇಶದ ಜನರ ಖಾತೆಗೆ 15 ಲಕ್ಷ ಹಣ ಜಮಾ ಮಾಡುತ್ತೇನೆ ಎಂದಿದ್ದರು. ಚುನಾವಣೆ ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ₹15 ಲಕ್ಷ ಹಣ ಹಾಕ್ತೀವಿ ಅಂತಾ ಹೇಳಿದ್ದು ಕೇವಲ ಎಲೆಕ್ಷನ್ಗಾಗಿ. ಇದು ಮೋದಿ ಸರ್ಕಾರದ ಭರವಸೆ ಅಂತಾ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ದೇಶದ ಬಡ ಜನರಿಗೆ ದುಡ್ಡು ನೀಡಲಿದೆ. ನಿಜವಾದ ಬಡವರಿಗೆ ಹಣ ನೀಡುವ ಸಲುವಾಗಿ ಚಿಂತಕರ ಸಭೆ ನಡೆಸಿದೆ. ಸಭೆ ಬಳಿಕ ದೇಶದಲ್ಲಿರುವ ಕಡು ಬಡವರಿಗೆ ₹72 ಸಾವಿರ ಹಾಗೂ 5 ವರ್ಷಕ್ಕೆ ಬರೋಬ್ಬರಿ ₹3.5 ಲಕ್ಷ ರೂಪಾಯಿ ನೀಡಲು ತೀರ್ಮಾನಿಸಿದೆ. ತಿಂಗಳಿಗೆ 6 ಸಾವಿರ, ವರ್ಷಕ್ಕೆ ₹72 ಸಾವಿರ ಐದು ವರ್ಷಕ್ಕೆ ₹3.5 ಲಕ್ಷ ಹಾಕಲು ಸಾಧ್ಯವಿದೆ ಅನ್ನೋದನ್ನ ಕಾಂಗ್ರೆಸ್ ಅರಿತುಕೊಂಡಿದೆ ಎಂದು ರಾಹುಲ್ ನಾವು ನೀಡುವ ಎಲ್ಲಾ ಹಣ ಬಡ ಕುಟುಂಬದ ಮಹಿಳೆಯರ ಖಾತೆಗೆ ಹೋಗಲಿದೆ ಎಂದರು.
Discussion about this post