Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

psi scam Karnataka : ಪಿಎಸ್ಐ ನೇಮಕಾತಿ ಹಗರಣಕ್ಕೆ ಟ್ವಿಸ್ಟ್ : ಹಗರಣದಲ್ಲಿ ಕಾಂಗ್ರೆಸ್ ಶಾಸಕನ ಪುತ್ರನ ಹೆಸರು

Radhakrishna Anegundi by Radhakrishna Anegundi
July 11, 2022
in ರಾಜ್ಯ
psi scam Karnataka rd patil mla my patil Afzalpur mla son arun patil name in cid charge sheet
Share on FacebookShare on TwitterWhatsAppTelegram

ಪೊಲೀಸ್ ನೇಮಕಾತಿ ಹಗರಣದಲ್ಲಿ ( psi scam Karnataka ) ಬಿಜೆಪಿ ಸಚಿವರಿದ್ದಾರೆ ಅನ್ನುವುದು ಕಾಂಗ್ರೆಸ್ ನಾಯಕರ ಆರೋಪ. ಇದೀಗ ಸಿಐಡಿ ಪೊಲೀಸರು ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ಶಾಸಕರ ಪುತ್ರನೊಬ್ಬನ ಹೆಸರು ಉಲ್ಲೇಖಿತಗೊಂಡಿದೆ.

ಬೆಂಗಳೂರು :  ದೇಶದಲ್ಲೇ ತಲ್ಲಣ ಮೂಡಿಸಿದ್ದ ಕರ್ನಾಟಕ ಪೊಲೀಸ್ ನೇಮಕಾತಿ ಹಗರಣಕ್ಕೆ ( psi scam Karnataka ) ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ಇದೀಗ ಈ ಟ್ವಿಸ್ಟ್ ನಿಂದ ಮುಜುಗರಕ್ಕೆ ಒಳಗಾಗಲಿದೆ.

ಖಾಸಗಿ ಸುದ್ದಿ ವಾಹಿನಿಯೊಂದು ಈ ಸಂಬಂಧ ವರದಿ ಪ್ರಸಾರ ಮಾಡಿದ್ದು, ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ಶಾಸಕನ ಪುತ್ರರ ಹೆಸರಿದೆ ಅಂದಿದೆ. ಈಗಾಗಲೇ ಬಂಧಿತನವಾಗಿರುವ ಆರ್ ಡಿ ಪಾಟೀಲ್ (  ರುದ್ರಪ್ಪ ದ್ಯಾಮಪ್ಪ ಪಾಟೀಲ್ ) ಕಾಂಗ್ರೆಸ್ ಶಾಸಕನ ಪುತ್ರನ ಹೆಸರನ್ನು ಬಹಿರಂಗಪಡಿಸಿದ್ದಾನೆ.

ಇದನ್ನೂ ಓದಿ : Vijay Mallya : ನ್ಯಾಯಾಂಗ ನಿಂದನೆ ಪ್ರಕರಣ – ವಿಜಯ್ ಮಲ್ಯಗೆ ನಾಲ್ಕು ತಿಂಗಳು ಜೈಲು ವಿಧಿಸಿದ ಸುಪ್ರೀಂಕೋರ್ಟ್

ರುದ್ರಪ್ಪ ದ್ಯಾಮಪ್ಪ ಪಾಟೀಲ್ ಹೇಳಿಕೆಯ ಪ್ರಕಾರ ಅಪ್ಝಲ್ ಪುರ ಶಾಸಕ ಎಂ.ವೈ. ಪಾಟೀಲ್ ಪುತ್ರ ಅರುಣ್ ಕುಮಾರ್ ಪಾಟೀಲ್ ಈ ಹಗರಣದಲ್ಲಿ ಕಿಂಗ್ ಪಿನ್ ಅನ್ನಲಾಗಿದೆ. ಅಪ್ಪನ ಗನ್ ಮ್ಯಾನ್ ಹಯ್ಯಾಳಿ ದೇಸಾಯಿಯನ್ನು ಪಿಎಸ್ಐ ಮಾಡಲು ಅರುಣ್ ಪಾಟೀಲ್ ಈ ಅಕ್ರಮ ಎಸಗಿದ್ದರು ಎಂದು ಗೊತ್ತಾಗಿದೆ. ಜೊತೆಗೆ ಹಯ್ಯಾಳಿ ದೇಸಾಯಿ ಕಡೆಯಿಂದ 10 ಲಕ್ಷ ರೂಪಾಯಿ ಪಡೆದು ಅದನ್ನು ಅರುಣ್ ಕುಮಾರ್ ಪಾಟೀಲ್ ಗೆ ತಾನೇ ತಲುಪಿಸಿರುವುದಾಗಿ ಆರ್,ಡಿ.. ಪಾಟೀಲ್ ಹೇಳಿದ್ದು,  ಈ 10 ಲಕ್ಷ ರೂಪಾಯಿ ಹಣವನ್ನು ಅರುಣ್ ಕುಮಾರ್ ಪಾಟೀಲ್ ಹಾಗೂ ಅವರ ತಮ್ಮ ಮಹಾಂತೇಶ್ ಪಾಟೀಲ್ ಹಂಚಿಕೊಂಡಿದ್ದಾರೆ ಎಂದು ರುದ್ರಪ್ಪ ದ್ಯಾಮಪ್ಪ ಪಾಟೀಲ್ ಹೇಳಿಕೆಯನ್ನು ಕೊಟ್ಟಿದ್ದಾನೆ.

ಜೊತೆಗೆ ಎಂವೈ ಪಾಟೀಲ್  ಅವರಿಗೂ ಈ ವ್ಯವಹಾರ ಗೊತ್ತಿತ್ತು ಅಂದಿರುವ ರುದ್ರಪ್ಪ ದ್ಯಾಮಪ್ಪ ಪಾಟೀಲ್ ಪಿಎಸ್ಐ ಹಗರಣದಲ್ಲಿ ಕಾಂಗ್ರೆಸ್ ನಾಯಕರ ನೆರಳಿದೆ ಅನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದಾನೆ.  

Vijay Mallya : ನ್ಯಾಯಾಂಗ ನಿಂದನೆ ಪ್ರಕರಣ – ವಿಜಯ್ ಮಲ್ಯಗೆ ನಾಲ್ಕು ತಿಂಗಳು ಜೈಲು ವಿಧಿಸಿದ ಸುಪ್ರೀಂಕೋರ್ಟ್

ನವದೆಹಲಿ : 9 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂಕೋರ್ಟ್ ಶಾಕ್ ಕೊಟ್ಟಿದೆ. ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ವಿಜಯ್ ಮಲ್ಯಗೆ 4 ತಿಂಗಳ ಜೈಲು ವಿಧಿಸಿದೆ.

2017ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದ್ದು, ಮದ್ಯದ ದೊರೆ ವಿಜಯ್ ಮಲ್ಯಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ಜೊತೆಗೆ 2,000 ರೂ ದಂಡ ವಿಧಿಸಲಾಗಿದೆ. 2017ರಲ್ಲಿ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಮಲ್ಯ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.

ಈ ಹಣಕಾಸು ವರ್ಗಾವಣೆ ಸಂಬಂಧ ನ್ಯಾಯಾಲಯದಿಂದ ಮಾಹಿತಿ ಮುಚ್ಚಿಟ್ಟ ಆರೋಪಕ್ಕೆ ಮಲ್ಯ ಗುರಿಯಾಗಿದ್ದರು. ಹೀಗಾಗಿ ನ್ಯಾಯಾಲಯದ ವಿಧಿಸಿದ ದಂಡವನ್ನು ನಾಲ್ಕು ವಾರಗಳಲ್ಲಿ ಸುಪ್ರೀಂ ಕೋರ್ಟ್ ಕಾನೂನು ಸೇವಾ ಪ್ರಾಧಿಕಾರದಲ್ಲಿ ಠೇವಣಿ ಇಡಬೇಕು. ತಪ್ಪಿದಲ್ಲಿ ಎರಡು ತಿಂಗಳ ಶಿಕ್ಷೆಯನ್ನು ಹೆಚ್ಚುವರಿಯಾಗಿ ಸೇರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಇನ್ನು ಮಲ್ಯ ಅವರ ಮಕ್ಕಳಿಗೆ ಮಾಡಿದ 40 ಮಿಲಿಯನ್ ಡಾಲರ್ ವಹಿವಾಟು ಅನೂರ್ಜಿತವಾಗಿದ್ದು, ನಾಲ್ಕು ವಾರಗಳ ಒಳಗೆ ವಸೂಲಾತಿ ಅಧಿಕಾರಿಗೆ ಶೇ.8 ರಷ್ಟು ಬಡ್ಡಿಯೊಂದಿಗೆ ಈ ಮೊತ್ತವನ್ನು ಹಿಂದಿರುಗಿಸುವಂತೆಯೂ ಆದೇಶಿಸಿದೆ. ಒಂದು ವೇಳೆ ಮೊತ್ತ ಹಿಂತಿರುಗಿಸದಿದ್ದರೆ ಮಲ್ಯ ಅವರ ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರವನ್ನು ಸಂಬಂಧ ಪಟ್ಟ ಇಲಾಖೆಗೆ ನೀಡಿದೆ.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠದಿಂದ ಈ ಆದೇಶ ಹೊರ ಬಿದ್ದಿದೆ.

Tags: MAIN
ShareTweetSendShare

Discussion about this post

Related News

Actor Vijay set to make debut in Tamil Nadu politics

ಅಣ್ಣಾಮಲೈ ಬೆನ್ನಲ್ಲೇ ನಟ ವಿಜಯ್ ತಮಿಳು ಪಾಲಿಟಿಕ್ಸ್ ಗೆ ಎಂಟ್ರಿ : ಸನಾತನ ಧರ್ಮದ ವಿರುದ್ಧ ನಿಂತವರಿಗೆ ಶುರುವಾಗಿದೆ ನಡುಕ

jail

ಕುವೈತ್ ನಲ್ಲಿ ಜೈಲುಪಾಲಾದ ಕೇರಳ ಮೂಲದ 19 ಮಂದಿ ನರ್ಸ್

ಕರಾವಳಿಯಲ್ಲಿ ಚಿಗುರಿದ ಕಳ್ಳರ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಂಟ್ವಾಳ ಪೊಲೀಸರು

ಕಬಾಬ್ ವ್ಯಾಪಾರಿಗೆ ಎಲೆಕ್ಷನ್ ಸಮಿತಿ ಸದಸ್ಯನ ವೇಷ : ಸ್ವಯಂ ಘೋಷಿತ ಹಿಂದೂ ನಾಯಕಿಯ ಖತರ್ನಾಕ್ ಕಹಾನಿ

ಜೆಡಿಎಸ್ ಬಿಜೆಪಿ ಮೈತ್ರಿ ಪ್ರಸ್ತಾಪ : ಕುಮಾರಸ್ವಾಮಿ ಶಕ್ತಿ ವರ್ಧನೆ ಸುಳಿವು ಬೆನ್ನಲ್ಲೇ ಚುರುಕಾದ ಈಶ್ವರಪ್ಪ

11.09.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ‌ಸಮಿತಿ ಮಾಜಿ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಇನ್ನಿಲ್ಲ

ಭಾರತ ಹೆಸರು ಬದಲಾವಣೆ : ಚೀನಾದ ಮಾಧ್ಯಮ ಪ್ರತಿನಿಧಿಗೆ ತಲೆ ಬಿಸಿ

ಬಿಗ್ ಬಾಸ್ ವೇದಿಕೆ ಇವರೆಲ್ಲಾ ಎಲ್ಲಿ ಹೋದ್ರು : ಮಹಾಮನೆಯಲ್ಲಿ ನಿರಾಸೆಯಾದವರು

ಕರಾವಳಿ ಭದ್ರತಾ ಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

Latest News

afspa-extended-in-manipur-for-6-months-from-october-1-barring-19-police-stations-of-valley

Manipura ಮಣಿಪುರದಲ್ಲಿ ಮತ್ತೆ ಜಾರಿಯಾಗಿರುವ  ಆಫ್ಸ್ಪ ಕಾಯ್ದೆಯ ಬಗ್ಗೆ ನಿಮಗೆಷ್ಟು ಗೊತ್ತು..?

Actor Vijay set to make debut in Tamil Nadu politics

ಅಣ್ಣಾಮಲೈ ಬೆನ್ನಲ್ಲೇ ನಟ ವಿಜಯ್ ತಮಿಳು ಪಾಲಿಟಿಕ್ಸ್ ಗೆ ಎಂಟ್ರಿ : ಸನಾತನ ಧರ್ಮದ ವಿರುದ್ಧ ನಿಂತವರಿಗೆ ಶುರುವಾಗಿದೆ ನಡುಕ

jail

ಕುವೈತ್ ನಲ್ಲಿ ಜೈಲುಪಾಲಾದ ಕೇರಳ ಮೂಲದ 19 ಮಂದಿ ನರ್ಸ್

bantwal city police arrest two thef kannada news

ಕರಾವಳಿಯಲ್ಲಿ ಚಿಗುರಿದ ಕಳ್ಳರ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಂಟ್ವಾಳ ಪೊಲೀಸರು

Chaitra Kundapura govinda-babu-poojari-ccb-police arrest

ಕಬಾಬ್ ವ್ಯಾಪಾರಿಗೆ ಎಲೆಕ್ಷನ್ ಸಮಿತಿ ಸದಸ್ಯನ ವೇಷ : ಸ್ವಯಂ ಘೋಷಿತ ಹಿಂದೂ ನಾಯಕಿಯ ಖತರ್ನಾಕ್ ಕಹಾನಿ

/ks-eshwarappa-meets-hd-kumaraswamy-bengaluru

ಜೆಡಿಎಸ್ ಬಿಜೆಪಿ ಮೈತ್ರಿ ಪ್ರಸ್ತಾಪ : ಕುಮಾರಸ್ವಾಮಿ ಶಕ್ತಿ ವರ್ಧನೆ ಸುಳಿವು ಬೆನ್ನಲ್ಲೇ ಚುರುಕಾದ ಈಶ್ವರಪ್ಪ

g20-summit-delhi-police-books-photographer-for-flying-drone-during-birthday-party

ಜನ್ಮದಿನ ಚಿತ್ರೀಕರಿಸಿದ ಕ್ಯಾಮಾರಮನ್ ವಿರುದ್ಧ ಕೇಸ್ : 1 ತಿಂಗಳ ಸೆರೆವಾಸ ಸಾಧ್ಯತೆ

https://torrentspree.com/karnataka-weather-forecast-and-rain-alert-for-monday-september-11/

11.09.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

puttur mahalingeshwara temple ex president N Sudhakar Shetty no more

ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ‌ಸಮಿತಿ ಮಾಜಿ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಇನ್ನಿಲ್ಲ

brindavana-kannada-serial-ramji-colours-kannada

ರಾಮ್ ಜೀ ನಿರ್ದೇಶನದಲ್ಲಿ ಮತ್ತೊಂದು ಸೀರಿಯಲ್ : ಬಿಗ್ ಬಾಸ್ ನಂತ್ರ ಬೃಂದಾವನ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್