ಬೆಂಗಳೂರು : ಕನ್ನಡ ಚಿತ್ರರಂಗ ಅಂದ್ರೆ ಕನ್ನಡಿಗರು ಇಟ್ಟುಕೊಂಡಿರುವ ಗೌರವವೇ ಬೇರೆ. ಕನ್ನಡ, ಕರ್ನಾಟಕದ ಬೆಳವಣಿಗೆಗೆ ಕನ್ನಡ ಚಿತ್ರರಂಗ ಕೊಟ್ಟಿರುವ ಕೊಡುಗೆ ಕೂಡಾ ಅಷ್ಟೇ ಮಹತ್ವದ್ದು. ಕನ್ನಡಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಕನ್ನಡ ತನ್ನದೇ ಆದ ರೀತಿಯಲ್ಲಿ ಸಿಡಿದೆದ್ದಿತ್ತು ಕೂಡಾ. ಆದರೆ ಈಗ ಕಾಲ ಬದಲಾಗಿದೆ ಚಿತ್ರರಂಗವೂ ಬದಲಾಗಿದೆ.
ಈ ನಡುವೆ ಕನ್ನಡ ಚಿತ್ರರಂಗದ ಮೇಲೆ ಕೇಳಿ ಬರುತ್ತಿರುವ ಆರೋಪಗಳು ಗಾಬರಿ ಹುಟ್ಟಿಸುತ್ತಿವೆ. ಜೊತೆಗೆ ಪ್ರತೀ ಸಲ ಎದ್ದೇಳುವ ವಿವಾದಗಳು ಕೂಡಾ ಭಯ ಹುಟ್ಟಿಸುತ್ತಿದೆ. ಇತ್ತೀಚೆಗೆ ನಟ ದರ್ಶನ್ ಗೆ 25 ಕೋಟಿ ವಂಚನೆ ಪ್ರಯತ್ನ ಅನ್ನುವ ವಿವಾದ ಕುರಿತಂತೆ ಪ್ರಾರಂಭವಾಗಿರುವ ಚರ್ಚೆಗಳನ್ನು ನೋಡಿದರೆ ಎಲ್ಲಿ ಚಂದನವನಕ್ಕೆ ಕಳಂಕ ಅಟ್ಟಿಕೊಳ್ಳುತ್ತದೋ ಅನ್ನುವ ಭಯ ಕಾಡುತ್ತಿದೆ. ಈ ಹಿಂದೆ ಡ್ರಗ್ಸ್ ವಿಚಾರದಲ್ಲಿ ಏನಾಯ್ತು ಅನ್ನುವುದು ಎಲ್ಲರಿಗೂ ಗೊತ್ತಿದೆ.
ಈ ನಡುವೆ 25 ಕೋಟಿ ವಿವಾದಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ದೊಡ್ಮನೆಯ ಆಸ್ತಿಯತ್ತ ಚರ್ಚೆ ಸಾಗಿದೆ. ಮಾತ್ರವಲ್ಲದೆ ಉಮಾಪತಿ ಹಾಗೂ ದರ್ಶನ್ ನಡುವೆ ವಿವಾದ ಹುಟ್ಟಿಕೊಳ್ಳಲು ಆಸ್ತಿ ಜಗಳ ಕಾರಣವೇ ಅನ್ನುವ ಪ್ರಶ್ನೆ ಹುಟ್ಟಿದೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಉಮಾಪತಿ, ನನ್ನ ಬಳಿ ಇರುವ ಆಸ್ತಿಯನ್ನು ದರ್ಶನ್ ಕೇಳಿದ್ದು ನಿಜ, ನಾನು ಕೊಡೋದಿಲ್ಲ ಅಂತ ಹೇಳಿದ್ದೇನೆ. ಅದಕ್ಕೆ ದರ್ಶನ್ ಒಪ್ಪಿಕೊಂಡಿದರು ಕೂಡಾ. ಆಸ್ತಿ ಕೊಡಲ್ಲ ಅಂದ ಮೇಲೆ ದರ್ಶನ್ ಸುಮ್ಮನಾಗಿದ್ದರು. ಈಗ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಾಗಿ ಸ್ಪಷ್ಟನೆ ಕೊಡುತ್ತಿದ್ದೇನೆ. ಅದು ಪುನೀತ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸೇರಿದ ಆಸ್ತಿ. ಪ್ರಸ್ತುತ ನನ್ನ ಬಳಿ ಇದೆ. ನನ್ನ ಬಳಿ ಇದ್ದ ಕಾರಣಕ್ಕೆ ದರ್ಶನ್ ಆಸ್ತಿ ಕೇಳಿದ್ದಾರೆ. ಹಾಗಂತ ನಾನು ಕೊಡಲ್ಲ ಅಂದ ಕಾರಣಕ್ಕೆ ಕೋಪ ಮಾಡಿಕೊಂಡಿದ್ದಾರೆ ಅನ್ನಿಸುತ್ತಿಲ್ಲ ಅಂದಿದ್ದಾರೆ.
ಇನ್ನು ಇದಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ದರ್ಶನ್, ಆಸ್ತಿ ವಿಚಾರ ದೊಡ್ಮನೆ ಕಡೆಗೆ ತಿರುಗಿದ್ದು ಬೇಸರ ತಂದಿದೆ. ನಮ್ಮ ಅಪ್ಪ ದೊಡ್ಮನೆಯಲ್ಲಿ ಅನ್ನ ತಿಂದಿದ್ದಾರೆ. ನಾನು ಕೂಡಾ ಅಲ್ಲಿಂದ ಅನ್ನ ತಿಂದು ಬಂದಿದ್ದೇನೆ. ದೊಡ್ಮನೆ ಆಸ್ತಿ ತೆಗೆಯುವಷ್ಟು ದೊಡ್ಡವರಲ್ಲ ನಾವು, ಈಗ ಬರುತ್ತಿರುವ ಕೇವಲ ಊಹಾಪೋಹ ಅಂದಿದ್ದಾರೆ.
ಹೇಳಿಕೆ ಪ್ರತಿ ಹೇಳಿಕೆ ಗಮನಿಸಿದರೆ, ಚಿತ್ರರಂಗದ ಮಂದಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆಯೇ ಅನ್ನುವ ಅನುಮಾನ ಹುಟ್ಟುತ್ತಿದೆ.
Discussion about this post