ಬೆಂಗಳೂರು : ನಟ ದರ್ಶನ್ ನೆಗೆಟಿವ್ ಕಾರಣದಿಂದ ಅತೀ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳಿಗಿಂತ ಅವರ ಹೊಡೆದಾಟ ಬಡಿದಾಟ ವಿಷಯವೇ ಹೆಡ್ ಲೈನ್ ಆಗುತ್ತಿದೆ. ಕೆಲ ವರ್ಷಗಳ ಹಿಂದೆ ಸಂಸಾರದ ಗಲಾಟೆ ದೊಡ್ಡ ಸುದ್ದಿಯಾಗಿತ್ತು.
ಇದೀಗ 25 ಕೋಟಿ ವಂಚನೆ ಪ್ರಕರಣ ತಣ್ಣಗಾಯ್ತು ಅನ್ನುವಷ್ಟರಲ್ಲಿ ಮೈಸೂರಿನಲ್ಲಿ ಹೊಟೇಲ್ ಸಪ್ಲೈಯರ್ ಮೇಲೆ ಏರಿ ಹೋಗಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಗಳನ್ನು ನೋಡಿದರೆ ದರ್ಶನ್ ಹೀಗೆ ಮಾಡಿದ್ಯಾಕೆ ಅನ್ನುವ ಪ್ರಶ್ನೆ ಮೂಡುತ್ತದೆ.
ಹೊಟೇಲ್ ಊಟಕ್ಕೆ ಹೋಗಿದ್ದು ಲೇಟ್ ನೈಟ್ ಅಂದ ಮೇಲೆ ಫುಡ್ ಲೇಟ್ ಆಯ್ತು ಅಂತಾ ಸಿಬ್ಬಂದಿ ಮೇಲೆ ಎಗರಾಡುವುದು ಅದ್ಯಾವ ನ್ಯಾಯ. ಅಷ್ಟೇ ಅಲ್ಲದೆ ಸೆಲೆಬ್ರೆಟಿಗಳು ಅಂದ ಮೇಲೆ ಪಬ್ಲಿಕ್ ಜೀವನದಲ್ಲಿ ಒಂದಿಷ್ಟು ತಾಳ್ಮೆ ಅನ್ನುವುದು ಇರಬೇಕು ತಾನೇ. ಸೆಲೆಬ್ರೆಟಿ ಅಂದ್ರೆ ಅದೇನು ಕೋಡು ಇದೆಯೋ ಗೊತ್ತಿಲ್ಲ.
ಈ ನಡುವೆ ದರ್ಶನ್ ವಿರುದ್ಧ ಇಂದ್ರಜಿತ್ ಮಾಡಿರುವ ಆರೋಪದಲ್ಲಿ ಅರ್ಧ ಸತ್ಯವಿದೆ ಅನ್ನುವುದು ಸಾಬೀತಾಗಿದೆ. ಅದನ್ನು ದರ್ಶನ್ ಅವರೇ ಒಪ್ಪಿಕೊಂಡಿದ್ದು, ನಾನು ಆ ಹುಡುಗನ ಮೇಲೆ ಎಗರಾಡಿದ್ದು ಹೌದು ಅಂದಿದ್ದಾರೆ. ಅಷ್ಟು ಸಾಕು, ದರ್ಶನ್ ಎಗರಾಡಿದ ಮೇಲೆ ಅವರ ಅಕ್ಕ ಪಕ್ಕ ಇದ್ದವರು ಅದ್ಯಾವ ರೀತಿ ಹಾರಾಡಿರಬಹುದು ಅನ್ನುವುದನ್ನು ಊಹಿಸಿಕೊಳ್ಳಬಹುದು. ಹೊಟೇಲ್ ಸಿಸಿಟಿವಿಯ ಫೂಟೇಜ್ ಇನ್ನೂ ಉಳಿದುಕೊಂಡಿದ್ರೆ ಸತ್ಯಾಂಶ ಹೊರಬರಬಹುದು.
ಇನ್ನು ಹೊಟೇಲ್ ಮಾಲೀಕ ಸಂದೇಶ ನಾಗರಾಜ್ ಕೂಡಾ ದರ್ಶನ್ ಸಪ್ಲೈಯರ್ ವಿರುದ್ಧ ಮಾತನಾಡಿ ತಪ್ಪು ಮಾಡಿದ್ದಾನೆ ಅನ್ನುವುದನ್ನು ಒಪ್ಪಿಕೊಂಡಿದ್ದಾರೆ. ನಾನೇ ಅವತ್ತು ದರ್ಶನ್ ನನ್ನು ಸಮಾಧಾನ ಮಾಡಿ ರೂಮ್ ಗೆ ಕಳುಹಿಸಿಕೊಟ್ಟೆ. ಭಾಷೆಯ ಕಾರಣಕ್ಕೆ ಒಂದಿಷ್ಟು ಗೊಂದಲವಾಗಿತ್ತು. ಅವೆಲ್ಲವನ್ನೂ ಸರಿ ಮಾಡಲಾಗಿದೆ. ನನಗೆ ನನ್ನ ಕಾರ್ಮಿಕರು ಮುಖ್ಯ ಅಂದಿದ್ದಾರೆ.
Discussion about this post