ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ ನಿರ್ಧಾರ ಉಲ್ಲಂಘಿಸಿ ತಡೆಯಾಜ್ಞೆ ತಂದಿರುವ ಶಾಸಕರೊಬ್ಬರಿಗೆ ಪ್ರಶ್ನೆ ಕೇಳಿದ್ದ ಶಾಸಕ ತನ್ವೀರ್ ಸೇಠ್ ಕೈ ನಾಯಕರಿಗೆ ಮುಜುಗರ ತಂದಿಟ್ಟಿದ್ದರು.
ಸಿದ್ದರಾಮಯ್ಯ ವಿರುದ್ಧದ ಕೋಪದ ಕಾರಣಕ್ಕೆ ತನ್ವೀರ್ ಸೇಠ್ ನಿನ್ನೆ ಸಚಿವ ನಾರಾಯಣ ಗೌಡ ಅವರಿಂದ ತನ್ವೀರ್ ಸೇಠ್ ಉತ್ತರ ಪಡೆದಿದ್ದರು.
ಸೇಠ್ ವರ್ತನೆಯಿಂದ ಕೈ ನಾಯಕರು ತೀವ್ರ ಮುಜುಗರಕ್ಕೆ ಸಿಲುಕಿದ್ದರು.
ಹೀಗಾಗಿ ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಸೂಚನಾ ಪತ್ರ ಕೊಟ್ಟಿದ್ದು, ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿ ತಡೆಯಾಜ್ಞೆ ತಂದಿರುವ ಆರು ಮಂದಿ ಸಚಿವರ ಪ್ರಶ್ನೆಗೆ ಉತ್ತರ ಪಡೆಯದಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ನೀವು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ನಿನ್ನೆ ಸಚಿವ ನಾರಾಯಣ ಗೌಡ ಅವರಿಂದ ತನ್ವೀರ್ ಸೇಠ್ ಉತ್ತರ ಪಡೆದಿದ್ದ ವೇಳೆ ಕಾಂಗ್ರೆಸ್ ನ ಕೆಲ ಶಾಸಕರು ಈ ಬಗ್ಗೆ ತನ್ವೀರ್ ಸೇಠ್ಗೆ ಪ್ರಶ್ನೆ ಮಾಡಿದ್ದರು.
ಇದಕ್ಕೆ ಸಮಜಾಯಿಷಿ ನೀಡಿದ್ದ ಸೇಠ್, ನನಗೆ ಯಾರು ಏನನ್ನೂ ಹೇಳಿಲ್ಲ, ನನಗೆ ಯಾವ ಮಾಹಿತಿಯೂ ಇಲ್ಲ ಅಂದಿದ್ದರು.
ತನ್ವೀರ್ ಸೇಠ್ ಮಾಹಿತಿ ಇಲ್ಲ ಅಂದಿರುವ ಕಾರಣ ಅವರನ್ನು ಉದ್ದೇಶಿಸಿಯೇ ಲಿಖಿತ ರೂಪದಲ್ಲಿ ಪತ್ರದ ಮೂಲಕ ಕಾಂಗ್ರೆಸ್ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.
Discussion about this post