ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಮಾಜಿ ಪ್ರಧಾನಿ ದೇವೇಗೌಡರು ಇದು ನನ್ನ ಕೊನೆಯ ಚುನಾವಣೆ ಅಂದಿದ್ದರು.
ಆದರೆ ಕುಟುಂಬ ರಾಜಕಾರಣ, ಕ್ಷೇತ್ರ ಬದಲಾವಣೆ ಮತ್ತು ಮೋದಿ ಅಲೆಯಲ್ಲಿ ಮಾಜಿ ಪ್ರಧಾನಿಗಳನ್ನು ಮತದಾರರು ಸೋಲಿಸಿದ್ದಾರೆ.
ಹೀಗಾಗಿ ಕೊನೆಯದಾಗಿ ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಸೋಲುವ ಮೂಲಕ ದೇವೇಗೌಡರು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದರು.
ಆದರೆ ಇದೀಗ ದೇವೇಗೌಡರು 2024ರಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಅನ್ನುವ ಸುಳಿವನ್ನು ಅವರ ಮೊಮ್ಮದ ನಿಖಿಲ್ ಕುಮಾರಸ್ವಾಮಿ ಬಿಟ್ಟುಕೊಟ್ಟಿದ್ದಾರೆ.
![nikil](https://torrentspree.files.wordpress.com/2019/06/nikil.jpg)
ಪ್ರಜಾವಾಣಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು ದೇವೇಗೌಡರ ಸೋಲು ನಮಗೆ ಅಘಾತ ತಂದಿದೆ. ಎಲ್ಲಾ ಕಾರ್ಯಕರ್ತರಿಗೆ ಆಗಿರುವ ನೋವು ನಮಗೂ ಆಗಿದೆ ಅಂದಿದ್ದಾರೆ. ಜೊತೆಗೆ ದೇವೇಗೌಡರು ಮತ್ತೆ ಚುನಾವಣೆಗೆ ಸ್ಪರ್ಧಿಸಿದರೂ ಅಚ್ಚರಿಯಿಲ್ಲ ಅಂದಿದ್ದಾರೆ.
ಇದೇ ಸಂದರ್ಶನದಲ್ಲಿ ಮಂಡ್ಯಕ್ಕೆ ಘೋಷಿಸಿರುವ 8761 ಕೋಟಿ ಅನುದಾನವನ್ನು ಕುಮಾರಸ್ವಾಮಿ ತಡೆ ಹಿಡಿದಿದ್ದಾರೆ ಎಂದು ಹೇಳಿದ ಪ್ರಶ್ನೆಗೆ ಉತ್ತರಿಸಿದ ನಿಖಿಲ್, ಸಾಧ್ಯವೇ ಇಲ್ಲ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ 8761 ಕೋಟಿ ಅನುದಾನವನ್ನು ನಾನೇ ನಿಂತು ಅನುಷ್ಠಾನ ಮಾಡಿಸುತ್ತೇನೆ. ನಾನೇ MLAಗಳ ಜೊತೆ ನಿಂತು ಮಾಡಿಸುತ್ತೇನೆ ಅಂದಿದ್ದಾರೆ.
Discussion about this post