ಮಾಡಿದ್ದನ್ನ ಯಾವತ್ತೂ ಹೇಳಿಕೊಳ್ಳಬಾರದು, ನಾವೆಲ್ಲರೂ ಕಲಾವಿದರು. ಕಲಾವಿದನಾಗಿ ನನಗೆ ವರ್ಷಕ್ಕೆ 2.5 ಕೋಟಿ ಹಣ ಬೇಕು. LKG ಯಿಂದ ಹಿಡಿದು ಮೆಡಿಕಲ್ ಓದೋ ತನಕದವರು ಸಹಾಯ ಅಂತಾ ಬರ್ತಾರೆ. ಅವರನ್ನು ಬರೀಗೈಯಲ್ಲಿ ನಾನು ಕಳುಹಿಸಿಕೊಡುವುದಿಲ್ಲ. ನನ್ನ ಕೈಯಲ್ಲಿ ಆಗೋ ಸಹಾಯ ಮಾಡ್ತೀನಿ. ಅದು ನನ್ನ ಸ್ವಂತ ದುಡಿಮೆಯ ದುಡ್ಡು. ನಾನು ಬೆವರು ಹರಿಸಿದ ದುಡ್ಡು, ಬೇರೆಯವರ ಕೈ ಚಾಚಿದ ದುಡ್ಡಲ್ಲ ಎಂದು ದರ್ಶನ್ ಹೇಳಿದ್ದಾರೆ.
ಇದೇ ವೇಳೆ ದಳಪತಿಗಳಿಂದ ಕೇಳಿ ಬಂದಿರುವ ಟೀಕೆಗಳಿಗೆ ಮನಸ್ಸಿಗೆ ಸಿಕ್ಕಾಪಟ್ಟೆ ಘಾಸಿಯಾಗಿದೆ. ಇದಕ್ಕೆ ಪ್ರತೀಕಾರ ತೀರಿಸಲೇಬೇಕು ಎಂದು ದರ್ಶನ್ ಪಣ ತೊಟ್ಟಂತೆ ಕಾಣಿಸುತ್ತಿದೆ. ಹೀಗಾಗಿ 2023ರ ಚುನಾವಣೆಯಲ್ಲಿ ದಳಪತಿಗಳ ವಿರುದ್ಧ ತೊಡೆ ತಟ್ಟುವ ಮುನ್ಸೂಚನೆಯನ್ನು ದರ್ಶನ್ ನೀಡಿದ್ದಾರೆ.
ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಸೋಲಿನ ಬಗ್ಗೆ ಬೇಸರಪಡಿಸಿದ ಅವರು. ದರ್ಶನ್ ಪುಟ್ಟಣಯ್ಯ ಇಲ್ಲಿ ಇರಲ್ಲ, ಫಾರಿನ್ ಹೋಗ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಅವರನ್ನು ಸೋಲಿಸಿದರು. ಒಳ್ಳೆ ಲೀಡರ್ ಅವರು, ಅವರ ಬಳಿ ಇರುವ ಮಾಹಿತಿಗಳನ್ನು, ತಿಳಿದುಕೊಂಡಿರುವ ವಿಷಯಗಳನ್ನು ಕೇಳಿದ್ರೆ ಖುಷಿಯಾಗುತ್ತದೆ. ಮುಂಬರುವ ಪಾಂಡವಪುರದ ಚುನಾವಣೆಗೆ ಬರ್ತಿನಿ, ದರ್ಶನ್ ಪುಟ್ಟಣ್ಣಯ್ಯ ಪರ ನಾನು ನಿಂತುಕೊಳ್ಳುತ್ತೇನೆ. ಅದು ಎನಾಗುತ್ತದೋ ನೋಡೋಣ ಅನ್ನುವ ಮೂಲಕ ಮುಂದೈತೆ ಮಾರಿ ಹಬ್ಬ ಅಂದಿದ್ದಾರೆ.
Discussion about this post