mysore dasara 2022 ರ ಭಾಗವಾಗಿ ಆಗಸ್ಟ್ 7 ರಂದು ಗಜಪಯಣ ಪ್ರಾರಂಭವಾಗಿತ್ತು
ಮೈಸೂರು : 2022ರ ಮೈಸೂರು ದಸರಾ ( mysore dasara 2022) ಮಹೋತ್ಸವಕ್ಕೆ ಭರ್ಜರಿ ಸಿದ್ದತೆಗಳು ಪ್ರಾರಂಭಗೊಂಡಿದೆ. ಸಿದ್ದತೆಯ ಪ್ರಮುಖ ಭಾಗವಾಗಿ ಇಂದು ಅರಮನೆಗೆ ಗಜಪಡೆಗಳು ಆಗಮಿಸಿದೆ. ಈಗಾಗಲೇ ಕಾಡಿನಿಂದ ನಾಡು ಸೇರಿರುವ ಗಜಪಡೆ ಪ್ರಸ್ತುತ ಮೈಸೂರು ಅರಣ್ಯ ಭವನದಲ್ಲಿ ಬೀಡು ಬಿಟ್ಟಿತ್ತು.
ಅಭಿಮನ್ಯು, ಅರ್ಜುನ, ಗೋಪಾಲಸ್ವಾಮಿ, ಭೀಮ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮೀ, ಮಹೇಂದ್ರ ಸೇರಿ ಎಲ್ಲಾ ಆನೆಗಳು ಮೈಸೂರು ಅರಮನೆಯತ್ತ ಬಂದಿದ್ದು, ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಪೂಜೆ ಸಲ್ಲಿಸಿ ಗಜಪಡೆಗೆ ಸ್ವಾಗತ ಕೋರಿದ್ದಾರೆ.
ಇದನ್ನು ಓದಿ : USB-C charging port : ಇನ್ಮುಂದೆ ಇಲೆಕ್ಟ್ರಾನಿಕ್ ಉಪಕರಣಗಳಿದೆ ಒಂದೇ ಚಾರ್ಜರ್
![mysore dasara 2022-gajapade-arrive-at-the-palace-today](https://torrentspree.com/wp-content/uploads/2022/08/mysore-dasara-2022-01.jpg)
ಬಳಿಕ ಅಶೋಕ ಪುರಂ, ಬಲ್ಲಾಳ್ ವೃತ್ತ, ಆರ್ ಟಿ ಓ ವೃತ್ತ, ರಾಮಸ್ವಾಮಿ ಸರ್ಕಲ್, ಚಾಮರಾಜ ರಸ್ತೆ, ಗನ್ ಹೌಸ್ ಸರ್ಕಲ್ ಆಗಿ ವಸ್ತು ಪ್ರದರ್ಶನ ರಸ್ತೆ ತನಕ ಮೆರವಣಿಗೆಯಲ್ಲಿ ಬರಲಿದೆ.
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಉಸ್ತುವಾರಿ ಸಚಿವರು ಹೀಗೆ ಬರೆದುಕೊಂಡಿದ್ದಾರೆ.
![mysore dasara 2022](https://torrentspree.com/wp-content/uploads/2022/08/mysore-dasara-2022-04.jpg)
ಇಂದು ದಿನಾಂಕ 10-08-22 ಬುದುವಾರ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಅರಮನೆ ಆವರಣದಲ್ಲಿನ ಜಯಮಾರ್ತಾಂಡ ದ್ವಾರದಲ್ಲಿ ಬೆಳಗ್ಗೆ 09:20 ರಿಂದ 10:00ರ ಕನ್ಯಾ ಲಗ್ನದಲ್ಲಿ ಅಂಬಾರಿ ಹೊರಲಿರುವ ಅಭಿಮನ್ಯು ಹಾಗೂ ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಅರ್ಜುನ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮಿ ಆನೆಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಸ್ವಾಗತಿಸಲಾಯಿತು.
ಮಂಗಳ ವಾದ್ಯ, ಕಲಾತಂಡಗಳ ಜೊತೆಗೆ, ಪೂರ್ಣಕುಂಬ ಸ್ವಾಗತದ ಮೂಲಕ ಜಯಮಾರ್ತಾಂಡ ದ್ವಾರದಿಂದ ಅರಮನೆಯ ಆನೆ ಬಾಗಿಲಿಗೆ ಗಜಪಡೆಯನ್ನು ಬರಮಾಡಿಕೊಳ್ಳಲಾಯಿತು.
![mysore dasara 2022 03](https://torrentspree.com/wp-content/uploads/2022/08/mysore-dasara-2022-03.jpg)
ಈ ಸಂದರ್ಭದಲ್ಲಿ ಕಾವಾಡಿಗರು ಮತ್ತು ಮಾವುತರಿಗೆ ಮೂಲಭೂತ ಸಾಮಾಗ್ರಿಗಳನ್ನು ವಿತರಿಸಿ ದಸರಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಶುಭಕೋರಿ ಫಲತಾಂಬೂಲ ನೀಡಲಾಯಿತು. ಬಳಿಕ ಅರಮನೆಯ ಗೊಂಬೆ ತೊಟ್ಟಿಯಲ್ಲಿ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಲಾಯಿತು.
15 ದಿನದ ಮುಂಚಿತವಾಗಿ ದಸರಾ ವಸ್ತು ಪ್ರದರ್ಶನ ಉದ್ಘಾಟನೆ ಆಗಲಿದೆ. ಪುಷ್ಪಪ್ರದರ್ಶನದ ಆರಂಭದ ಮೊದಲ ದಿನ ಉಚಿತ ಪ್ರವೇಶ ಇರಲಿದೆ. ದಸರಾ ಉದ್ಘಾಟಕರ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸಲಿದ್ದಾರೆ.
![mysore dasara 2022 02](https://torrentspree.com/wp-content/uploads/2022/08/mysore-dasara-2022-02.jpg)
ಗಜಪಡೆ ಸ್ವಾಗತ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಶಾಸಕರಾದ ನಾಗೇಂದ್ರ, ರಾಮದಾಸ್, ಸಂಸದ ಪ್ರತಾಪ್ ಸಿಂಹ, ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರೂ, ಜಿಪಂ ಸಿಇಒ ಸೇರಿದಂತೆ ನಾನಾ ನಿಗಮಂಡಳಿಗಳ ಅಧ್ಯಕ್ಷರು, ಮುಖಂಡರು ಮತ್ತು ಅಧಿಕಾರಿಗಳು ಹಾಜರಿದ್ದರು.
Discussion about this post