ಮಂಡ್ಯದ ಸ್ವಾಭಿಮಾನ ಸಮಾವೇಶದಲ್ಲಿ ಅಂಬರೀಶ್ ಅವರ ಗತ್ತು ಮಗನಿಗೂ ಬಂದಿದೆ ಅನ್ನುವುದನ್ನು ಅಭಿಷೇಕ್ ಸಾಬೀತು ಮಾಡಿದ್ದಾರೆ. ಅಂಬರೀಶ್ ಅವರನ್ನೇ ನೆನಪಿಸುವ ಮಾತಿನ ಶೈಲಿ, ಅವರನ್ನೇ ಹೋಲುವ ಬಾಡಿ ಲ್ಯಾಂಗ್ವೇಜ್ ಮೂಲಕ ಅಂಬಿ ಪುತ್ರ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಅದಕ್ಕೆ ಸಾಕ್ಷಿಯಾಗಿದ್ದು, ಅವರಾಡಿದ ಮಾತುಗಳಿಗೆ ಬಿದ್ದ ಶಿಳ್ಳೆ ಮತ್ತು ಚಪ್ಪಾಳೆ.
ನಮ್ಮ ಪ್ರತಿಸ್ಪರ್ಧಿಗಳು ಚುನಾವಣಾ ಪ್ರಚಾರ ಮಾಡಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರತೀ ದಿನ ನನ್ನ ಬಗ್ಗೆ, ನನ್ನ ತಾಯಿ ಬಗ್ಗೆ ನನ್ನ ಅಣ್ಣಂದಿರ ಬಗ್ಗೆ ಮಾತನಾಡಿದ್ದಾರೆ. ಅವೆಲ್ಲಾ ಅವರಿಗೆ ಬಿಟ್ಟಿದ್ದು. ಆದರೆ ಅದಕ್ಕೆಲ್ಲಾ ಉತ್ತರ ಕೊಡಲ್ಲ ಎಂದು ತೀರ್ಮಾನಿಸಿದವರು ನಾವು ಒಂದು ಮಾತು ಬಗ್ಗೆ ಉತ್ತರ ಕೊಡಬೇಕು ಅನ್ನಿಸುತ್ತಿದೆ ಅಂದರು.
ನಾನು ವಯಸ್ಸಿನಲ್ಲಿ ತುಂಬಾ ಚಿಕ್ಕವನು, ಮುಖ್ಯಮಂತ್ರಿಗಳು ಹೇಳಿದಂತೆ ನಾನು ಅಂಬೆಗಾಲು ಇಟ್ಟುಕೊಂಡು ಬಂದೇನೋ, ಎಡಕಾಲು ಇಟ್ಟು ಬಂದೇನೋ ನಾನು ರಾಜಕಾರಣಿಯಲ್ಲ ಅಂತಾನೇ ಹೇಳಿಕೊಂಡು ಬಂದಿದ್ದೇನೆ.. ಹಾಗಂತ ನನ್ನ ತಂದೆ, ತಾಯಿ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲು ಸಾಧ್ಯವೇ.
ಅಂಬರೀಶ್ ಅವರಿಗೆ ಸ್ಥಾನಮಾನ MP, MLAಯಿಂದ ಸಿಕ್ಕಿಲ್ಲ. ಇದೆಲ್ಲಾ ಆಗುವ ಮುಂಚೆಯೇ ಮಂಡ್ಯದ ಗಂಡು ಅನ್ನಿಸಿಕೊಂಡಿದ್ದರು.ಅದಕ್ಕಾಗಿ ಅವರಿಗೆ ಗೌರವ ಕೊಟ್ಟಿದ್ದಾರೆ.
![ambareesh funderal](https://torrentspree.files.wordpress.com/2019/04/ambareesh_funderal.jpg)
7ಕ್ಕೆ ಏಳು ಜನ ಅವರಿದ್ದಾರೆ. ಮೂರು ಜನ ಮಂತ್ರಿಗಳಿದ್ದಾರೆ. ಅವರ ಸಾಧನೆಗಳ ಬಗ್ಗೆ ಮಾತನಾಡಿ. ದಯವಿಟ್ಟು ನಮ್ಮ ತಂದೆಯ ಬಗ್ಗೆ ಇನ್ನೊಂದು ಮಾತು ಚುನಾವಣೆ ಸಂದರ್ಭದಲ್ಲಿ ಮಾತನಾಡಲು ಹೋಗಬೇಡಿ ಅಂತಾ ಕೈ ಮುಗಿದು ಕೇಳಿಕೊಳ್ಳುತ್ತೇನೆ.
ಸಾವಿನ ನೋವು ಆ ತಾಯಿ ಮುಖದಲ್ಲಿ ಕಾಣಿಸುತ್ತಿಲ್ಲ ಅಂದರು. ಅವರು ಅಂದ ಮಾತು ಸರಿಯೇ, ನಮಗೆ ನೋವು ಗೊತ್ತಿಲ್ಲ ಎಂದು ಅದಕ್ಕೆ ಉತ್ತರ ಕೊಟ್ಟೆ, ನಾನು ಆಡಿದ ಮಾತು ತಪ್ಪೇ ಎಂದು ಪ್ರಶ್ನಿಸಿದರು.
ಇದೇ ವೇಳೆ ನನ್ನ ಹೆಸರೇನು ಎಂದು ಸೇರಿದ್ದ ಜನರಲ್ಲಿ ಕೇಳಿದ ಪ್ರಶ್ನೆಗೆ ಸಭಿಕರ ಕಡೆಯಿಂದ ಅಭಿಷೇಕ್ ಅನ್ನುವ ಉತ್ತರ ಬಂತು. ಆದರೆ ಅದಕ್ಕೆ ಉತ್ತರಿಸಿದ ಅಭಿಷೇಕ್ ಅದು ನೀವು ಇಟ್ಟ ಹೆಸರು. ನನ್ನ ತಂದೆ ಇಟ್ಟ ಹೆಸರು ಅಭಿಷೇಕ್..ಅಭಿಷೇಕ್ ಗೌಡ ಅನ್ನುವ ಮೂಲಕ ತಾಯಿಯ ಪ್ರತಿಸ್ಪರ್ಧಿಗೆ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದರು.
Discussion about this post